ಕಪಟ ನಾಟಕದ ಮಾತಿದು; ಸಂಗೀತಾ ಭಟ್ ನಟನೆಯ ಸಿನಿಮಾ
Team Udayavani, Sep 4, 2019, 1:06 PM IST
ಇತ್ತೀಚೆಗೆ ಜೋರು ಸದ್ದು ಮಾಡಿದ್ದ ನಟಿ ಸಂಗೀತಾ ಭಟ್ ಈಗ ಪುನಃ ಸುದ್ದಿಯಾಗುತ್ತಿದ್ದಾರೆ! ಹಾಗಂತ, ಇನ್ಯಾವುದೋ ವಿಷಯದಲ್ಲಿ ಅವರು ಸುದ್ದಿಯಾಗುತ್ತಿಲ್ಲ. ಬದಲಾಗಿ ಹೊಸ ಸಿನಿಮಾ ಮೂಲಕ ಸುದ್ದಿಯಾಗುತ್ತಿದ್ದಾರೆ. ಹೌದು, ಬಾಲು ನಾಗೇಂದ್ರ ಅಭಿನಯದ “ಕಪಟ ನಾಟಕ ಪಾತ್ರಧಾರಿ’ ಚಿತ್ರದಲ್ಲಿ ಸಂಗೀತಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಹೊಸ ಸುದ್ದಿಯೆಂದರೆ, ಚಿತ್ರದಲ್ಲಿರುವ ಹಾಡೊಂದಕ್ಕೆ ಸಾಮಾಜಿಕ ತಾಣದಲ್ಲಿ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ.
ಕ್ರಿಶ್ ನಿರ್ದೇಶನದ ಈ ಚಿತ್ರ ಈಗಾಗಲೇ ಶೀರ್ಷಿಕೆಯಿಂದ ಹಿಡಿದು, ಪೋಸ್ಟರ್ನವರೆಗೂ ನಿರೀಕ್ಷೆ ಹುಟ್ಟಿಸಿದೆ. ಇದೀಗ ಹಾಡಿನ ಮೂಲಕ ಸೌಂಡು ಮಾಡುತ್ತಿದೆ. ಅಂದಹಾಗೆ, ಆ ಹಾಡು ವೇಣು ಹಸ್ರಾಳಿ ಬರೆದಿದ್ದು. “ಯಾಕೆ ಅಂತ ಗೊತ್ತಿಲ್ಲ ಕಣ್ರೀ, ನನ್ನನ್ನು ನೋಡಿ ನಕ್ಬುಟ್ಳು ಸುಂದ್ರಿ..’ ಎಂಬ ಹಾಡು ಇದೀಗ ಸೌಂಡು ಮಾಡುತ್ತಿದೆ. ಸದ್ಯಕ್ಕೆ ಲಿರಿಕಲ್ ವಿಡಿಯೋ ಹೊರಬಂದಿದ್ದು, ಹಾಡಿಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಚಿತ್ರತಂಡಕ್ಕೆ ಖುಷಿ ಹೆಚ್ಚಿದೆ.
ಇನ್ನೊಂದು ವಿಶೇಷವೆಂದರೆ, ಈ ಹಾಡು ಫೇಸ್ಬುಕ್ನಲ್ಲಿ ಗಮನಸೆಳೆದಿದೆ. ಈ ಚಿತ್ರದ ಹಾಡನ್ನು ಫೇಸ್ಬುಕ್ಗೆ ಹಾಕಿದ್ದು, ಲಿರಿಕಲ್ ವಿಡಿಯೋದಲ್ಲಿ ಸಾಹಿತ್ಯ ಹಾಗೂ ಆ ಸಿನಿಮಾ ಫೋಟೋ ಬಳಸುವ ಬದಲು, ಚಿತ್ರತಂಡದ ತಂತ್ರಜ್ಞರ ಪರಿಚಯವನ್ನು ಆ ಹಾಡಿನ ಮೂಲಕ ಫೋಟೋ ಜೊತೆಗೆ ಪರಿಚಯಿಸಲಾಗಿದೆ.
ಇದು ಹೊಸ ಪ್ರದಾನವಾಗಿರುವುದರಿಂದ ಹಾಡು ಬಹುತೇಕರಿಗೆ ಇಷ್ಟವಾಗಿದ್ದು, ಸಖತ್ ರೆಸ್ಪಾನ್ಸ್ ಸಿಗುತ್ತಿದೆ ಎಂದು ಚಿತ್ರತಂಡ ಖುಷಿಯಾಗಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಈ ಲಿರಿಕಲ್ ವಿಡಿಯೋ ಯುಎಸ್ನಲ್ಲಿ ರೆಡಿಯಾಗಿದೆ. ಅನಿವಾಸಿ ಭಾರತೀಯ ಗಿರೀಶ್ ಕುಮಾರ್ ಕಲ್ಲೇಶಾಚಾರ್, ಈ ಹೊಸ ಕಾನ್ಸೆಪ್ಟ್ ಅಳವಡಿಸಿ, ಹೊಸತನ ಮೆರೆದಿದ್ದಾರೆ. ಅದಿಲ್ ನದಾಫ್ ಚಿತ್ರಕ್ಕೆ ಸಂಗೀತ ನೀಡಿದ್ದು, ಈ ಹಾಡನ್ನು ಹರಿಚರಣ್ ಹಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ