ಕಪಟ ನಾಟಕ ಪಾತ್ರಧಾರಿಯ ಗೆಲುವಿನ ಸವಾರಿ!
Team Udayavani, Nov 13, 2019, 1:16 PM IST
ಮತ್ತೆ ಕನ್ನಡದ ಪ್ರೇಕ್ಷಕರು ಹೊಸಾ ಅಲೆಯ ಸಿನಿಮಾವೊಂದನ್ನು ಮನಸಾರೆ ಮೆಚ್ಚಿಕೊಂಡು ಗೆಲ್ಲಿಸಿದ್ದಾರೆ. ಈ ಪ್ರೀತಿ ಪಡೆದುಕೊಂಡಿರೋ ಕಪಟ ನಾಟಕ ಪಾತ್ರಧಾರಿ ಚಿತ್ರವೀಗ ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಕ್ರಿಶ್ ನಿರ್ದೇಶನದ ಈ ಸಿನಿಮಾ ಚೆಂದದ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಮೂಲಕ ಮೂಡಿಕೊಂಡಿದ್ದ ಅಗಾಧ ನಿರೀಕ್ಷೆಗಳನ್ನು ಮೀರಿಸುವಂಥಾ ಗಟ್ಟಿ ಕಂಟೆಂಟಿನ ಮೂಲಕ ಕಪಟ ನಾಟಕ ಪಾತ್ರಧಾರಿ ಗೆಲುವಿನ ಸವಾರಿ ಆರಂಭಿಸಿದೆ.
ಈ ಮೂಲಕ ಮತ್ತೊಂದು ಹೊಸಾ ಅಲೆಯ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸಿದಂತಾಗಿದೆ. ಇದು ಕ್ರಿಶ್ ನಿರ್ದೇಶನದ ಮೊದಲ ಚಿತ್ರ. ಆದರೆ ಈ ಮೊದಲ ಹೆಜ್ಜೆಯಲ್ಲಿಯೇ ಅವರು ಪ್ರೇಕ್ಷಕರ ಆಕಾಂಕ್ಷೆಯ ನಾಡಿ ಮಿಡಿತವನ್ನು ಸರಿಯಾಗಿ ಅರ್ಥೈಸಿಕೊಂಡೇ ಮುಂದಡಿ ಇಟ್ಟಿದ್ದಾರೆ. ಎಲ್ಲ ವಯೋಮಾನದ, ಎಲ್ಲ ವರ್ಗದ ಪ್ರೇಕ್ಷಕರನ್ನೂ ತಣಿಸುವಂಥಾ ಕಂಟೆಂಟಿನೊಂದಿಗೆ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಕಥೆ, ನಟನೆ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲವೂ ಒಂದಕ್ಕೊಂದು ಪೂರಕವಾಗಿ ಮೂಡಿ ಬಂದಿರೋ ಈ ಸಿನಿಮಾವೀಗ ಪ್ರೇಕ್ಷಕರೆಲ್ಲರ ಪ್ರೀತಿಗೆ ಪಾತ್ರವಾಗಿದೆ. ಇದುವೇ ಮತ್ತಷ್ಟು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕೈ ಹಿಡಿದು ಕರೆತರುತ್ತಿದೆ.
ಇಲ್ಲಿ ಪ್ರಧಾನವಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿರೋದು ಹಲವಾರು ಕೊಂಬೆ, ಕೋವೆ, ಟ್ವಿಸ್ಟಗಳನ್ನು ಹೊಂದಿರೋ ಮಜವಾದ ಕಥೆ. ಮಧ್ಯಮವರ್ಗದ ಹುಡುಗರ ಆತ್ಮಕಥೆಯಂತಿರೋ ಈ ಚಿತ್ರ ಎಲ್ಲ ವಯೋಮಾನದವರನ್ನೂ ಕೂಡಾ ಒಂದೇ ಸಲಕ್ಕೆ ಆವರಿಸಿಕೊಳ್ಳುತ್ತದೆ. ಸಣ್ಣ ಸುಳಿವೂ ಬಿಟ್ಟು ಕೊಡದಂತೆ ರೋಚಕ ಯಾತ್ರೆ ಮಾಡಿಸೋ ಈ ಕಥೆ ಒಂದೇ ಸಲಕ್ಕೆ ಎಲ್ಲರಿಗೂ ಆಪ್ತವಾಗುವಂತಿದೆ. ಅದುವೇ ಈ ಸಿನಿಮಾದ ನಿಜವಾದ ಹೆಚ್ಚುಗಾರಿಕೆ. ಬಾಲು ನಾಗೇಂದ್ರರ ಅದ್ಭುತ ನಟನೆಗೆ ಸಂಗೀತಾ ಭಟ್ ಸೇರಿದಂತೆ ಇಡೀ ತಾರಾಗಣವೇ ಸಾಥ್ ಕೊಟ್ಟಿದೆ. ಇದೆಲ್ಲದರಾಚೆಗೆ ಭರ್ಜರಿ ಮನೋರಂಜನೆಯನ್ನಿಟ್ಟುಕೊಂಡಿರೋ ಕಪಟ ನಾಟಕ ಪಾತ್ರಧಾರಿ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?