ಬರಲಿದೆ ಕಸ್ತೂರಿ ಮಹಲ್‌-2

ಮೊದಲ ಭಾಗ ಬಿಡುಗಡೆಗೂ ಮುನ್ನವೇ ಎರಡನೇ ಭಾಗಕ್ಕೆ ಸಿದ್ಧತೆ,ಅನುಷ್ಕಾ ಶೆಟ್ಟಿ ಅಥವಾ ನಯನಾ ತಾರಾ ನಟನೆ?

Team Udayavani, Dec 28, 2020, 1:32 PM IST

ಬರಲಿದೆ ಕಸ್ತೂರಿ ಮಹಲ್‌-2

ಸಾಮಾನ್ಯವಾಗಿ ಯಾವುದೇ ಚಿತ್ರಗಳು ಬಿಡುಗಡೆಯಾಗಿ ಸಕ್ಸಸ್‌ ಕಂಡ ಬಳಿಕ ಅದರ ನಿರ್ಮಾಪಕರು, ನಿರ್ದೇಶಕರು ಅದರ ಎರಡನೇ ಭಾಗದ ನಿರ್ಮಾಣದ ಬಗ್ಗೆ ಯೋಚಿಸುವುದು ಸಹಜ. ಆದರೆ ಚಿತ್ರ ಬಿಡುಗಡೆಗೂ ಮುನ್ನವೇ ಅದರ ಎರಡನೇ ಭಾಗದ ಬಗ್ಗೆ ಯೋಚಿಸುವುದು ತುಂಬ ಅಪರೂಪ.

ಈಗ ಇಲ್ಲೊಂದು ಚಿತ್ರದ ನಿರ್ಮಾಪಕ, ನಿರ್ದೇಶಕರು ತಮ್ಮ ಮೊದಲ ಚಿತ್ರ ಬಿಡುಗಡೆಗೂ ಮೊದಲೇ ಅದರ ಎರಡನೇ ಭಾಗವನ್ನು ಚಿತ್ರ ಮಾಡುವುದರ ಬಗ್ಗೆಗಂಭೀರವಾಗಿಯೋಚಿಸುತ್ತಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಕಸ್ತೂರಿ ಮಹಲ್‌’.

ಹೌದು, ಬಹುತೇಕರಿಗೆ ಗೊತ್ತಿರುವಂತೆ, “ಕಸ್ತೂರಿ ಮಹಲ್‌’ ಚಿತ್ರದ ಚಿತ್ರೀಕರಣಇತ್ತೀಚೆಗೆಪೂರ್ಣಗೊಂಡಿದ್ದು, ಚಿತ್ರತಂಡಸದ್ಯ “ಕಸ್ತೂರಿ ಮಹಲ್‌’ನ ಪೋಸ್ಟ್‌ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದೆ. ಹೊಸವರ್ಷದ ಮೊದಲ ದಿನ (ಜ. 1 ರಂದು) “ಕಸ್ತೂರಿ ಮಹಲ್‌’ ಚಿತ್ರದ ಟೀಸರ್‌ ಬಿಡುಗಡೆಗೂ ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.ಇದರ ನಡುವೆಯೇ, “ಕಸ್ತೂರಿ ಮಹಲ್‌’ ಚಿತ್ರದ ಎರಡನೇ ಭಾಗ “ಕಸ್ತೂರಿ ಮಹಲ್‌-2′ ಅನ್ನು ತೆರೆಗೆ ತರಲು ಚಿತ್ರತಂಡ ಗಂಭೀರ ಚಿಂತನೆಯಲ್ಲಿದೆ.

ಈ ಬಗ್ಗೆ ಮಾತನಾಡುವ “ಕಸ್ತೂರಿ ಮಹಲ್‌’ ಚಿತ್ರದ ನಿರ್ಮಾಪಕ ರವೀಶ್‌ ಆರ್‌.ಸಿ, “ಸದ್ಯ “ಕಸ್ತೂರಿ ಮಹಲ್‌’ ಸಿನಿಮಾದ ಫೈನಲ್‌ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದೆ. ಜನವರಿಯಿಂದ “ಕಸ್ತೂರಿ ಮಹಲ್‌’ ಪ್ರಮೋಶನ್‌ ಕೆಲಸಗಳು ಶುರುವಾಗಲಿದ್ದು, ಮಾರ್ಚ್‌ ವೇಳೆಗೆ ಈ ಸಿನಿಮಾವನ್ನು ಆಡಿಯನ್ಸ್‌ ಮುಂದೆ ತರುವ ಯೋಚನೆಯಿದೆ. ನಮ್ಮ ನಿರೀಕ್ಷೆಗೂ ಸಿನಿಮಾ ತುಂಬ ಚೆನ್ನಾಗಿ ಬರುತ್ತಿದೆ. ಕನ್ನಡ ಆಡಿಯನ್ಸ್‌ಗೆ ಈ ಸಿನಿಮಾ ಹೊಸ ಥರದ ಅನುಭವ ಕೊಡುವುದೆಂಬ ವಿಶ್ವಾಸವಿದೆ. ಜೊತೆಗೆ ಈ ಸಿನಿಮಾವನ್ನು ಮತ್ತೂಂದು ಭಾಗದಲ್ಲಿ ಮುಂದುವರೆಸಲು ಕೂಡ ಸಾಕಷ್ಟು ಸಾಧ್ಯತೆಗಳಿರುವುದರಿಂದ, “ಕಸ್ತೂರಿ ಮಹಲ್‌-2′ ಸಿನಿಮಾವನ್ನು ಮಾಡುವ ಬಗ್ಗೆ ಯೋಜಿಸಿದ್ದೇವೆ’ ಎನ್ನುತ್ತಾರೆ.

ಇನ್ನು “ಕಸ್ತೂರಿ ಮಹಲ್‌-2′ ಚಿತ್ರಕ್ಕೂ ನಿರ್ದೇಶಕ ದಿನೇಶ್‌ ಬಾಬು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರಂತೆ. ಇಷ್ಟೇ ಅಲ್ಲದೆ ಈಗಾಗಲೇ “ಕಸ್ತೂರಿ ಮಹಲ್‌-2′ ಚಿತ್ರದ ಪ್ರೀ-ಪ್ರೊಡಕ್ಷನ್‌ಕೆಲಸಗಳಿಗೂ ಚಿತ್ರತಂಡ, ಚಾಲನೆ ನೀಡಿದೆಯಂತೆ. ಈ ಬಗ್ಗೆಮಾಹಿತಿ ನೀಡುವ ನಿರ್ಮಾಪಕ ರವೀಶ್‌ ಆರ್‌.ಸಿ, “ಈಗಾಗಲೇ “ಕಸ್ತೂರಿ ಮಹಲ್‌’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳ ಜೊತೆಯಲ್ಲೇ, “ಕಸ್ತೂರಿ ಮಹಲ್‌-2′ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳಿಗೂ ಚಾಲನೆ ನೀಡಲಾಗಿದೆ. ಈಗಾಗಲೇ “ಕಸ್ತೂರಿ ಮಹಲ್‌-2′ ಕಥೆ ಸಿದ್ದವಾಗಿದ್ದು, ಅದರ ಚಿತ್ರಕಥೆ ಮತ್ತು ಸ್ಕ್ರೀಪ್ಟ್ ಕೆಲಸಗಳು ಶುರುವಾಗಿದೆ’ ಎನ್ನುತ್ತಾರೆ.

“ಕಸ್ತೂರಿ ಮಹಲ್‌-2′ ಚಿತ್ರವನ್ನು ಕನ್ನಡ ಜೊತೆಗೆ ತೆಲುಗು, ತಮಿಳು ಭಾಷೆಯಲ್ಲೂ ತೆರೆಗೆ ತರುವ ಯೋಜನೆ ಯಲ್ಲಿದೆಯಂತೆ ಚಿತ್ರ ತಂಡ. ಅದಕ್ಕಾಗಿ ಕನ್ನಡದ ಜೊತೆಗೆ ಬೇರೆ ಭಾಷೆಯಲ್ಲೂ ಜನಪ್ರಿಯರಾಗಿರುವ ನಾಯಕ ನಟಿಯೊಬ್ಬ ರನ್ನು ಚಿತ್ರದ ಪ್ರಧಾನ ಪಾತ್ರಕ್ಕೆಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು. ಸದ್ಯಕ್ಕೆ “ಕಸ್ತೂರಿ ಮಹಲ್‌-2′ ಚಿತ್ರಕ್ಕೆ ಬಹುಭಾಷಾ ನಟಿಯರಾದ ಅನುಷ್ಕಾ ಶೆಟ್ಟಿ ಅಥವಾ ನಯನಾ ತಾರಾ ಅವರನ್ನು ಕರೆತರುವ ಯೋಚನೆಯಲ್ಲಿದೆ ಚಿತ್ರತಂಡ. ಸದ್ಯದ ಮಾಹಿತಿ ಪ್ರಕಾರ, “ಕಸ್ತೂರಿ ಮಹಲ್‌’ಚಿತ್ರ ತೆರೆಕಾಣುತ್ತಿದ್ದಂತೆ, “ಕಸ್ತೂರಿ ಮಹಲ್‌-2′ ಚಿತ್ರದ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಒಂದಷ್ಟು ಕುತೂಹಲಕ್ಕೆ ಕಾರಣವಾಗಿರುವ “ಕಸ್ತೂರಿ ಮಹಲ್‌-2′ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.