“ಖುಷಿ ಖುಷಿ’ ಮಾತು

ದಿಯಾಳನ್ನು ಮೀರಿಸುವ ಪಾತ್ರ ಬೇಕು

Team Udayavani, Mar 3, 2020, 7:02 AM IST

Kushi

ಇತ್ತೀಚೆಗೆ ತೆರೆಕಂಡ “ದಿಯಾ’ ಎಲ್ಲರಿಂದಲೂ ಮೆಚ್ಚುಗೆ ಪಡೆದ ಚಿತ್ರ. ಆ ಚಿತ್ರದಲ್ಲಿ “ದಿಯಾ’ ಪಾತ್ರ ನಿರ್ವಹಿಸಿದ ನಾಯಕಿ ಖುಷಿ ಬಗ್ಗೆಯೂ ಎಲ್ಲೆಡೆಯಿಂದ ಉತ್ತಮ ಮಾತುಗಳು ಕೇಳಿಬಂದಿದ್ದು ನಿಜ. ಹಾಗಾಗಿ, ಖುಷಿಯ ಮುಂದಿನ ಚಿತ್ರ ಯಾವುದು, ಯಾವ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಪಾತ್ರ ಹೇಗಿರಬೇಕೆಂದುಕೊಂಡಿದ್ದಾರೆ ಎಂಬ ಪ್ರಶ್ನೆಗೆ “ಸದ್ಯ ನಾನಿನ್ನೂ ಏನೂ ಪ್ಲಾನ್‌ ಮಾಡಿಲ್ಲ. ಬ್ಲಾಂಕ್‌ ಆಗಿದ್ದೇನೆ…’ ಎನ್ನುತ್ತಾರೆ.

“ಈಗ ಒಂದಷ್ಟು ಕಥೆ ಹುಡುಕಿ ಬರುತ್ತಿವೆಯಾದರೂ, ಯಾವುದನ್ನೂ ಕೇಳ್ಳೋಕೆ ಹೋಗಿಲ್ಲ. ಯಾಕೆಂದರೆ, “ದಿಯಾ’ ಸಿನಿಮಾದ ಕಥೆ, ಪಾತ್ರಕ್ಕಿಂತಲೂ ಚಾಲೆಂಜ್‌ ಎನಿಸುವ ಕಥೆ, ಪಾತ್ರ ಮಾಡಿದರೆ ಮಾತ್ರ, ನಾನು “ದಿಯಾ’ ಚಿತ್ರಕ್ಕಿಂತಲೂ ದಿ ಬೆಸ್ಟ್‌ ಸಿನಿಮಾ ಕೊಡಲು ಸಾಧ್ಯ. ಸದ್ಯಕ್ಕೆ ಯೋಚಿಸುತ್ತಿದ್ದೇನೆ. ಯಾಕೆಂದರೆ, ಬಂದ ಕಥೆ, ಪಾತ್ರ ಒಪ್ಪುವ ಪರಿಸ್ಥಿತಿಯಲ್ಲಿ ನಾನಿಲ್ಲ. ಜನರು ಈಗ “ದಿಯಾ’ಳನ್ನು ಮರೆತಿಲ್ಲ.

ಅವಳ ಗುಂಗಲ್ಲಿರುವ ಜನರಿಗೆ ಹೊಸದೇನೋ ಕೊಟ್ಟರೆ ಮಾತ್ರ ನಾನಿಲ್ಲಿ ಮತ್ತೂಮ್ಮೆ ಖುಷಿಯಾಗಿರಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಅವರು. ಇನ್ನು, ಎಲ್ಲರಿಗೂ ಕನಸು ಇದ್ದಂತೆ ಖುಷಿಗೂ ಒಂದು ಕನಸಿದೆ. ನಟಿ ಆಗಿರುವ ಅವರಿಗೆ ಸ್ಟಾರ್‌ ಜೊತೆ ಕಾಣಿಸಿಕೊಳ್ಳಬೇಕೆಂಬುದೇ ಆ ಕನಸು. ಅಂದಹಾಗೆ, ಅವಕಾಶ ಸಿಕ್ಕರೆ ಯಾವ ಸ್ಟಾರ್‌ ಜೊತೆ ನಟಿಸೋಕೆ ಇಷ್ಟ ಎಂಬ ಪ್ರಶ್ನೆಗೆ, “ಯಶ್‌ ಮತ್ತು ರಕ್ಷಿತ್‌ ಶೆಟ್ಟಿ’ ಅಂತ ಥಟ್ಟನೆ ಉತ್ತರ ಕೊಡುತ್ತಾರೆ ಖುಷಿ.

“ಇದು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆಸೆ ಪಟ್ಟರೆ ತಪ್ಪಿಲ್ಲ. ಯಶ್‌ ಮತ್ತು ರಕ್ಷಿತ್‌ಶೆಟ್ಟಿ ಅವರ ಜೊತೆ ಅವಕಾಶ ಸಿಕ್ಕರೆ ನಟಿಸುವ ಆಸೆ ಇದೆ. ಅದು ನನ್ನ ಡ್ರೀಮ್‌ ಕೂಡ. “ದಿಯಾ’ ಸಿನಿಮಾ ನೋಡಿದ ರಕ್ಷಿತ್‌ ಶೆಟ್ಟಿ ಅವರು, ನಮ್ಮನ್ನು ಮಾತನಾಡಿಸಬೇಕು ಅಂತ ಅವರ ಸ್ಟುಡಿಯೋಗೆ ಕರೆಸಿದ್ದರು. ಆಗ ನನಗೆ ಅದು ಕನಸೋ, ನನಸೋ ಅನ್ನೋದೇ ಗೊತ್ತಾಗಲಿಲ್ಲ. ನಾನೇನಾ ರಕ್ಷಿತ್‌ಶೆಟ್ಟಿ ಅವರ ಮುಂದೆ ನಿಂತಿರೋದು ಅಂತೆನಿಸಿತು.

ಆಗ ರಕ್ಷಿತ್‌ ಸರ್‌, “ದಿಯಾ’ ಚೆನ್ನಾಗಿದೆ. ನಿಮ್ಮ ನಟನೆ ಕೂಡ ಸಖತ್‌ ಆಗಿದೆ’ ಅಂದರು. ಆಗ ನಾನು ಸರ್‌, ನಿಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳಲಾ’ ಅಂದಿದ್ದಕ್ಕೆ , “ಯಾಕೆ ಹಾಗೆ ಕೇಳ್ತೀರಿ. ನಾನೇ ನಿಮ್ಮನ್ನ ಕೇಳಬೇಕು. “ದಿಯಾ’ ಮೂಲಕ ಎಲ್ಲರಿಗೂ ನೀವು ಪಾತ್ರದ ಮೂಲಕ ಕಾಡಿದ್ದೀರಿ’ ಅಂದರು. ಅವರ ಜೊತೆ ಕೆಲಸ ಮಾಡ್ತೀನೋ ಇಲ್ಲವೋ ಗೊತ್ತಿಲ್ಲ. ಆದರೆ, ಹತ್ತಿರ ನಿಂತು ಮಾತಾಡಿಸಿದ್ದು ಖುಷಿ ಇದೆ’ ಎನ್ನುತ್ತಾರೆ ಖುಷಿ.

ಟಾಪ್ ನ್ಯೂಸ್

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.