- Sunday 08 Dec 2019
ಯುಟ್ಯೂಬ್ನಲ್ಲಿ “ಕೈಟ್ ಬ್ರದರ್ಸ್’ ಸಾಂಗ್ ಹಾರಾಟ
ಕನ್ನಡ ಶಾಲೆ ಹಿನ್ನೆಲೆಯ ಹೊಸಬಗೆಯ ಚಿತ್ರ ರೆಡಿ
Team Udayavani, Nov 10, 2019, 4:59 AM IST
ಈ ಹಿಂದೆ “ಕೈಟ್ ಬ್ರದರ್ಸ್’ ಚಿತ್ರದ ಬಗ್ಗೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರುವ ಹಾಡು ಯುಟ್ಯೂಬ್ನಲ್ಲಿ ಒಳ್ಳೆಯ ಮೆಚ್ಚುಗೆ ಪಡೆದಿದೆ. ಭಜರಂಗ ಸಿನಿಮಾ ಬ್ಯಾನರ್ನಲ್ಲಿ ರಜನಿಕಾಂತ್ ರಾವ್ ದಳ್ವಿ, ಮಂಜುನಾಥ್ ಬಿ.ಎಸ್.ಹಾಗು ಮಂಜುನಾಥ್ ಬಗಾಡೆ ನಿರ್ಮಿಸಿರುವ ಚಿತ್ರವನ್ನು ವಿರೇನ್ ಸಾಗರ್ ಬಗಾಡೆ ನಿರ್ದೇಶನ ಮಾಡಿದ್ದಾರೆ.
ಇದು ಇವರ ಮೊದಲ ನಿರ್ದೇಶನದ ಚಿತ್ರ. ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಅದಕ್ಕೂ ಮೊದಲು ನಿರ್ದೇಶಕ ವಿರೇನ್ ಸಾಗರ್ ಬಗಾಡೆ ಬರೆದಿರುವ “ಅ ಅರಸ ಆ ಆನೆ…’ ಎಂಬ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಸದ್ಯಕ್ಕೆ ಆ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಧಿಕ ಸಂಖ್ಯೆಯಲ್ಲಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಹಾಡಿಗೆ ಅನನ್ಯ ಭಟ್ ಹಾಗೂ ವಿರೇನ್ ಸಾಗರ್ ಬಗಾಡೆ ಧ್ವನಿಯಾಗಿದ್ದಾರೆ.
“ಕೈಟ್ ಬ್ರದರ್ಸ್’ ಒಂದು ಹಳ್ಳಿಗಾಡಿನ ಬದುಕು ಮತ್ತು ಅಲ್ಲಿಯ ಮಕ್ಕಳ ಬಾಲ್ಯದ ಕುರಿತಾಗಿದೆ. ಎಲ್ಲಕ್ಕಿಂತ ಮುಕ್ಯವಾಗಿ ಶಿಕ್ಷಣ ಹಕ್ಕು, ಸ್ನೇಹ ಮತ್ತು ಮಕ್ಕಳ ಸಾಹಸಗಾಥೆಯ ಕಥೆಯನ್ನು ಮನೋರಂಜನಾತ್ಮಕವಾಗಿ ಹೇಳಲಾಗಿದೆ. ಇದು ಕನ್ನಡ ಶಾಲೆಯ ಕುರಿತ ವಿಷಯ ಹೊಂದಿದ್ದು, ಗಾಳಿಪಟ ಚಿತ್ರದ ಪ್ರಮುಖ ಆಕರ್ಷಣೆ. ಇಲ್ಲಿ ಗೆಳೆತನ, ಛಲ ಹಾಗು ಮಾನವೀಯ ಮೌಲ್ಯಗಳ ಅಂಶಗಳು ಹೈಲೈಟ್ ಆಗಿದ್ದು, ಬಹುತೇಕ ಹೊಸ ಪ್ರತಿಭೆಗಳು ತೆರೆಯ ಮೇಲೆ ಕಾಣಿಸಿಕೊಂಡಿವೆ.
ವಿನೋದ್ ಬಗಾಡೆ, ಅನಂತ್ ದೇಶಪಾಂಡೆ, ಸಮರ್ಥ್ ಆಶಿ, ಪ್ರಣೀಲ್ ನಾಡಿಗೇರ, ಶ್ರೇಯ ಹರಿಹರ, ಅಭೀಷೇಕ್, ಪ್ರಭು ಹಂಚಿನಾಳ, ಅನಸೂಯ ಹಂಚಿನಾಳ, ರಾಜೀವ್ ಸಿಂಗ್ ಹಲವಾಯಿ, ಮುಕುಂದ ಮೈಗೂರು, ಕಿರಣ್ ಬಗಾಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅನೀಶ್ ಚೆರಿಯನ್ ಸಂಗೀತವಿದೆ. “ಸಿಂಪಲ್’ ಸುನಿ ಹಾಗೂ ವಿರೇನ್ ಸಾಗರ್ ಬಗಾಡೆ ಸಾಹಿತ್ಯವಿದೆ. ಅಶೋಕ್ ಕಶ್ಯಪ್ ಛಾಯಾಗ್ರಹಣ, ಸಂತೋಷ್ ರಾಧಕೃಷ್ಣನ್ ಸಂಕಲನವಿದೆ.
ಈ ವಿಭಾಗದಿಂದ ಇನ್ನಷ್ಟು
-
ಸಿನಿಮಾದವರು ನೈಜತೆ ಬಯಸೋದು ಜಾಸ್ತಿ. ಆದರೆ, ನೈಜತೆಯಲ್ಲಿ ಚಿತ್ರೀಕರಣ ಮಾಡೋದು ಮಾತ್ರ ಕಷ್ಟದ ಕೆಲಸ. ಅದರಲ್ಲೂ ಜಾತ್ರೆ, ಸಮಾರಂಭಗಳ ನಡುವೆ ಚಿತ್ರೀಕರಣ ಮಾಡೋದೆಂದರೆ...
-
ಧನಂಜಯ್ ನಾಯಕರಾಗಿ ನಟಿಸುತ್ತಿರುವ, ಯೋಗೇಶ್ ನಾರಾಯಣ್ ನಿರ್ಮಿಸುತ್ತಿರುವ "ಡಾಲಿ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ...
-
ಯಶಸ್ವಿ ಚಿತ್ರಗಳ ಟೈಟಲ್ಗಳನ್ನು ಅಥವಾ ಅದರ ಮುಂದುವರಿದ ಭಾಗದ ಶೀರ್ಷಿಕೆಗಳನ್ನಿಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ...
-
ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಪ್ರತಿಭಾವಂತ ನಟ, ನಟಿಯರು. ಹಾಸ್ಯದಿಂದ ಹಿಡಿದು ಗಂಭೀರ ಪಾತ್ರದವರೆಗೂ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ....
-
"ಅರ್ಜುನ್ ನೀನು ಹೇಳಿದಂಗೆ ಈ ಕಾರನ್ನ ತಗೊಂಡ್ ಹೋದ್ರೆ ಹತ್ತುಕೋಟಿ ಸಿಗುತ್ತಾ... ' - ಸನಾ ಅಲಿಯಾಸ್ ಸೃಷ್ಟಿ ಆ ದಟ್ಟ ಕಾಡಿನ ನಡುವೆ ಈ ಡೈಲಾಗ್ ಹೇಳುವ ಹೊತ್ತಿಗೆ,...
ಹೊಸ ಸೇರ್ಪಡೆ
-
ಬೆಳ್ತಂಗಡಿ: ಎಲ್ಲರ ನಿರೀಕ್ಷೆ ಚುನಾವಣೆ ಫಲಿತಾಂಶದ ಕಡೆ ಇದೆ. ಎಲ್ಲಾ ಕ್ಷೇತ್ರದಲ್ಲಿ ಸಚಿವರೊಂದಿಗೆ ನಾವು ಸುತ್ತು ಬಂದಿದ್ದು, ಸಮೀಕ್ಷೆ ಪ್ರಕಾರ 15 ಕ್ಷೇತ್ರದಲ್ಲಿ...
-
ಮೈಸೂರು: ಕೆ.ಎಸ್ಆರ್ ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪ್ಪ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು...
-
ಮಂಗಳೂರು: ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆದಳ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಮುಕ್ಕದ...
-
ಲಕ್ನೋ: ಮದುವೆಗೆ ವರ ತಡವಾಗಿ ಬಂದಿದ್ದಕ್ಕೆ ಬೇಸರಗೊಂಡ ವಧುವಿನ ಕುಟುಂಬಸ್ಥರು ಬೇರೊಬ್ಬನ ಜೊತೆ ವಿವಾಹವನ್ನು ಸಾಂಗವಾಗಿ ನೆರವೇರಿಸಿದ ಘಟನೆ ಉತ್ತರಪ್ರದೇಶದಲ್ಲಿ...
-
ತಿರುವನಂತಪುರ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯಕ್ಕೆ ತಿರುವನಂತಪುರ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದ ಟೀಂ ಇಂಡಿಯಾ ಎರಡನೆ...