ಕ್ಯಾಸ್ಟಿಂಗ್ ಕೌಚ್ ಬಗ್ಗೆ ಕೃತಿ ಖರಬಂದ ಅಭಿಪ್ರಾಯ
Team Udayavani, Apr 7, 2018, 11:07 AM IST
ಯಾವಾಗ ಶ್ರುತಿ ಹರಿಹರನ್ ಕೆಲವು ತಿಂಗಳುಗಳ ಹಿಂದೆ ಕ್ಯಾಸ್ಟಿಂಗ್ ಕೌಚ್ (ಲೈಂಗಿಕ ತೃಷೆ ಬಳಸಿಕೊಳ್ಳಲು ಯತ್ನಿಸುವುದು) ಬಗ್ಗೆ ಮಾತನಾಡಿದರೋ, ಅಲ್ಲಿಂದ ಈ ವಿಷಯ ಸಾಕಷ್ಟು ಚರ್ಚೆಯಾಗುತ್ತಿದೆ. ಶ್ರುತಿ ನಂತರ ಹರಿಪ್ರಿಯಾ ಈ ಬಗ್ಗೆ ಒಮ್ಮೆ ಮಾತನಾಡಿ, “ಇಲ್ಲಿ ಸಂಪೂರ್ಣ ಪುರುಷರದ್ದೇ ತಪ್ಪು ಎನ್ನುವುದು ಕಷ್ಟ, ನಾವು ಹೇಗಿರುತ್ತೀವೋ ಅದು ಬಹಳ ಮುಖ್ಯ’ ಎಂದು ಹೇಳಿದ್ದರು.
ಈ ವಿಷಯವಾಗಿ ಕೃತಿ ಖರಬಂದ ಸಹ ಮಾತನಾಡಿದ್ದಾರೆ. ತಮ್ಮನ್ನೇನಾದರೂ ಆ ದೃಷ್ಟಿಯಲ್ಲಿ ನೋಡಿದರೆ, ಆ ವ್ಯಕ್ತಿಯನ್ನು ಕೊಂದೇಬಿಡುವುದಾಗಿ ಹೇಳಿದ್ದಾರೆ. ಗುರುವಾರ ಸಂಜೆ ನಡೆದ “ದಳಪತಿ’ ಚಿತ್ರದ ಪತ್ರಿಕಾಗೋಷ್ಠಿಯ ನಂತರ ಕೆಲವು ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ತಮ್ಮೆದುರು ಯಾರಾದರೂ ಕೆಟ್ಟದಾಗಿ ವರ್ತಿಸಿದರೆ, ಅಂತಹ ವ್ಯಕ್ತಿಯನ್ನು ಕೊಂದೇಬಿಡ್ತೀನಿ’ ಅಂತ ಅವರು ಹೇಳಿಕೊಂಡಿದ್ದಾರೆ.
“ನಾನು ಇಂತಹ ವಿಷಯದಲ್ಲಿ ಸುಮ್ಮನಿರುವುದಿಲ್ಲ. ನನ್ನ ಜೊತೆಗೆ ಯಾರಾದರೂ ಅನುಚಿತವಾಗಿ ವರ್ತಿಸಿದರೆ ನಾನು ಸುಮ್ಮನಿರೋಲ್ಲ. ಕ್ಯಾಸ್ಟಿಂಗ್ ಕೌಚ್ ಎನ್ನುವುದು ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ, ಕಾರ್ಪೋರೇಟ್ ಕ್ಷೇತ್ರದಲ್ಲೂ ತುಂಬಾ ಇದೆ. ನಂಗೆ ಯಾವತ್ತೂ ಕೆಟ್ಟ ಅನುಭವ ಆಗಿಲ್ಲ.
ಯಾರೂ ನನ್ನನ್ನು ಆ ತರಹ ಕೆಟ್ಟದಾಗಿ ನಡೆಸಿಕೊಂಡಿಲ್ಲ. ಇಲ್ಲಿ ಬರೀ ಪುರುಷರದ್ದೇ ಸಮಸ್ಯೆ ಅನ್ನೋದು ಕಷ್ಟ. ಮಹಿಳೆಯರು ಸಹ ಈ ವಿಷಯದಲ್ಲಿ ಸಾಕಷ್ಟು ದುರಪಯೋಗ ಮಾಡಿಕೊಳ್ಳುತ್ತಾರೆ. ಹೆಣ್ಣು ಎನ್ನುವ ಕಾರಣಕ್ಕೆ ನಂಬುವುದು ಕಷ್ಟ’ ಎನ್ನುತ್ತಾರೆ ಅವರು.
ಸಮಾನವಾಗಿ ನೋಡಿಕೊಳ್ಳಿ: ಇನ್ನು ನಾಯಕ ಮತ್ತು ನಾಯಕಿಯನ್ನು ಸಮಾನವಾಗಿ ನೋಡಿಕೊಳ್ಳಬೇಕು ಎನ್ನುವ ಅವರು, “ನಾವು ಹೀರೋ ತರಹ ಸಂಭಾವನೆ ಡಿಮ್ಯಾಂಡ್ ಮಾಡುವುದಕ್ಕೆ ಆಗಲ್ಲ. ಏಕೆಂದರೆ, ಅವರು ತರಹ ಓಪನಿಂಗ್ ಕೊಡಿಸುವುದಕ್ಕೆ ಸಾಧ್ಯವಿಲ್ಲ. ಆ ವಿಷಯದಲ್ಲಿ ಸಮಾನತೆ ಇಲ್ಲದಿದ್ದರೂ, ನಮ್ಮನ್ನು ನೋಡಿಕೊಳ್ಳುವ ರೀತಿಯಲ್ಲಾದರೂ ಸಮಾನತೆ ಇರಬೇಕು. ಅಷ್ಟೇ ನಾವು ಕೇಳ್ಳೋದು’ ಎನ್ನುತ್ತಾರೆ ಕೃತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Kannada Cinema: ತೆರೆಗೆ ಬಂತು ಯುವ, ತಾರಿಣಿ
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA