ರವಿಚಂದ್ರನ್‌ ಪುತ್ರನ “ಲಿಪ್‌ಲಾಕ್‌’ ಪುರಾಣ

ಪ್ರಾರಂಭ ಟೀಸರ್‌ನಲ್ಲಿ ಮನೋರಂಜನ್‌ ಕಿಸ್ಸಿಂಗ್‌

Team Udayavani, Aug 26, 2019, 3:03 AM IST

Prarambha

ಇದುವರೆಗೆ ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ಗಷ್ಟೇ ಸೀಮಿತ ಎನಿಸಿಕೊಂಡಿದ್ದ ಲಿಪ್‌ಲಾಕ್‌ ಮತ್ತು ಕಿಸ್ಸಿಂಗ್‌ ದೃಶ್ಯಗಳು ಕನ್ನಡಕ್ಕೇನೂ ಹೊಸದಲ್ಲ. ಆದರೆ, ಈಗ ಅದು ಹೆಚ್ಚುತ್ತಿದೆ ಎಂಬುದೇ ಈ ಹೊತ್ತಿನ ಸುದ್ದಿ. ಈ ಬಾರಿ ಇಂಥದ್ದೊಂದು ಲಿಪ್‌ಲಾಕ್‌ ಸುದ್ದಿಗೆ ಕಾರಣ ಆಗಿರೋದು ರವಿಚಂದ್ರನ್‌ ಪುತ್ರ ಮನೋರಂಜನ್‌ ರವಿಚಂದ್ರನ್‌. ಹೌದು, ಮನೋರಂಜನ್‌ “ಪ್ರಾರಂಭ’ ಚಿತ್ರದ ದೃಶ್ಯವೊಂದರಲ್ಲಿ ಲಿಪ್‌ಲಾಕ್‌ ಮಾಡಿದ್ದಾರೆ.

ಆ ಸೀನ್‌ ಇರುವ ಟೀಸರ್‌ವೊಂದು ಬಿಡುಗಡೆಯಾಗಿದ್ದೇ ತಡ, ಎಲ್ಲೆಡೆ ಆ ಸುದ್ದಿಯದ್ದೇ ಮಾತು. ಹೊಸ ನಟಿ ಕೀರ್ತಿ ಕಲ್ಕೇರಿ ನಡುವಿನ ಸೀನ್‌ನಲ್ಲಿ ಮನೋರಂಜನ್‌ ಲಿಪ್‌ಲಾಕ್‌ ಮಾಡಿದ್ದಾರೆ. ರವಿಚಂದ್ರನ್‌ ಅಂದಾಕ್ಷಣ, ರೊಮ್ಯಾಂಟಿಕ್‌ ಸೀನ್‌ ನೆನಪಾಗದೇ ಇರದು. ಈ ಹಿಂದೆಯೇ ಅವರು ರೊಮ್ಯಾಂಟಿಕ್‌ ಹಾಡುಗಳಲ್ಲಿ ಹಾಟ್‌ ಸೀನ್‌ ತೋರಿಸುವ ಮೂಲಕ ಪಡ್ಡೆಗಳ ಫೆವರೇಟ್‌ ಎನಿಸಿಕೊಂಡವರು. ಈಗ ಪುತ್ರ ಮನೋರಂಜನ್‌ ಸರದಿ.

ಹಾಗಂತ, ಮನೋರಂಜನ್‌ ಹಿಂದೆ ಮುಂದೆ ನೋಡದೆ, ಆ ಕಿಸ್ಸಿಂಗ್‌ ಸೀನ್‌ಗೆ ಗ್ರೀನ್‌ಸಿಗ್ನಲ್‌ ಕೊಟ್ಟಿಲ್ಲ. ಅವರೇ ಹೇಳುವಂತೆ, “ಕಥೆ ಕೇಳಿದಾಗ ಇಷ್ಟವಾಯ್ತು. ಆಮೇಲೆ, ಇಲ್ಲೊಂದು ಕಿಸ್ಸಿಂಗ್‌ ಸೀನ್‌ ಕೂಡ ಇದೆ ಅಂದಾಗ, ನಾನು ಮೊದಲು ಮಾಡಲ್ಲ ಅಂದೆ. ಅದಕ್ಕೆ ನಿರ್ದೇಶಕರು, “ಸರ್‌ ರವಿ ಸರ್‌ ಅವರ ಫ್ಯಾನ್‌ ಇಷ್ಟಪಡ್ತಾರೆ. ಕಥೆಗೆ ಪೂರಕವಾಗಿಯೇ ಆ ಸೀನ್‌ ಇದೆ ಸರ್‌’ ಅಂದ್ರು. ನನಗೂ ಆ ಕಥೆಯ ದೃಶ್ಯಕ್ಕೂ ಬೇಕು ಎನಿಸಿತು. ಸೋ, ಒಪ್ಪಿಕೊಂಡು ಕಿಸ್‌ ಮಾಡಿದೆ’ ಎಂದು ವಿವರ ಕೊಡುತ್ತಾರೆ ಮನೋರಂಜನ್‌.

ಹಾಗಾದರೆ, ರವಿಚಂದ್ರನ್‌ ಅವರು ಈ ಲಿಪ್‌ಲಾಕ್‌ ಸೀನ್‌ ನೋಡಿ ಏನಂದ್ರು? ಇದಕ್ಕೆ ಉತ್ತರಿಸುವ ಮನೋರಂಜನ್‌, “ಅಪ್ಪ ಕುಶಾಲನಗರದಲ್ಲಿ ಶೂಟಿಂಗ್‌ ಮಾಡುತ್ತಿದ್ದಾರೆ. ಟೀಸರ್‌ ಲಿಂಕ್‌ ಕಳಿಸಿದ್ದೇನೆ. ಕಿಸ್ಸಿಂಗ್‌ ಸೀನ್‌ ನೋಡಿ ಏನಂತಾರೋ ಗೊತ್ತಿಲ್ಲ. ನನಗಂತೂ ಏನೂ ಹೇಳಲ್ಲ. ಮಮ್ಮಿಗೆ ಅಥವಾ ತಮ್ಮನಿಗೋ ಹೇಳಬಹುದು,ನೋಡಿದ್ಯಾ ಕಿಸ್‌ ಮಾಡಿದ್ದಾನೆ ಅಂತ’ ಎನ್ನುತಾರೆ ಮನೋರಂಜನ್‌. “ಪ್ರಾರಂಭ’ ಬಗ್ಗೆ ಹೇಳುವುದಾದರೆ, ಟೀಸರ್‌ಗೆ ದರ್ಶನ್‌ ಅವರು ವಾಯ್ಸ್ ಕೊಟ್ಟಿದ್ದಾರೆ. ಅವರಿಗೆ ಕಾಲ್‌ ಮಾಡಿ ನಿಮ್ಮದ್ದೊಂದು ವಾಯ್ಸ್ ಬೇಕು ಅಂದಾಗ, “ಏನ್‌ ಬೇಕು ಚಿನ್ನ, ಯಾವಾಗ ಹೇಳು ಮಾಡಿಕೊಡ್ತೀನಿ’ ಅಂದ್ರು.

ಟೀಸರ್‌ನಲ್ಲಿ ಮಾತ್ರ ಅಲ್ಲ, ಆರಂಭ ಮತ್ತು ಕ್ಲೈಮ್ಯಾಕ್ಸ್‌ನಲ್ಲೂ ಅವರ ವಾಯ್ಸ್ ಬರುತ್ತೆ. ಇನ್ನು, ಟೀಸರ್‌ ನೋಡಿದವರು “ಅರ್ಜುನ್‌ ರೆಡ್ಡಿ’ ಬಗ್ಗೆ ಮಾತಾಡ್ತಾರೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಒಂದೇ ಒಂದು ಸಣ್ಣ ಲೈನ್‌ ಕೂಡ ಇಲ್ಲ. ಇದು ಹೊಸ ಕಥೆ. ಎರಡು ಶೇಡ್‌ ಇಲ್ಲಿದೆ. ಒಂದು ಲವ್‌ಟ್ರಾಕ್‌ನಲ್ಲಿ ಲವ್ವರ್‌ ಬಾಯ್‌, ಇನ್ನೊಂದು ದಾಡಿ ಬಿಟ್ಟು ರಗಡ್‌ ಆಗಿರುವ ಪಾತ್ರ. ಸೆಕೆಂಡ್‌ ಹಾಫ್ನಲ್ಲಿ ಹೊಸ ಪಾಯಿಂಟ್‌ ಇದೆ. ಈಗಲೇ ಹೇಳಿದರೆ ಮಜಾ ಇರಲ್ಲ ಎಂಬುದು ಮನೋರಂಜನ್‌ ಮಾತು.

ಟಾಪ್ ನ್ಯೂಸ್

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.