ಮಾಸ್ತಿಗುಡಿ ಹಾಡುಗಳನ್ನು ಕೇಳಲು ರೆಡಿಯಾಗಿ
Team Udayavani, Feb 19, 2017, 4:55 PM IST
ವಿಜಯ್ ಅಭಿನಯದ “ಮಾಸ್ತಿಗುಡಿ’ ಚಿತ್ರವು ಕೊನೆಗೂ ಒಂದು ಶೇಪ್ಗೆ ಬಂದಿದೆ. ಕೊನೆಯ
ಹಂತದಲ್ಲಿ ಅನಿಲ್ ಮತ್ತು ಉದಯ್ ಅವರ ಸಾವಿನಿಂದ ನೂರಾರು ಸಮಸ್ಯೆಗಳಿಂದ ಸುಸ್ತು
ಹೊಡೆದಿದ್ದ ಚಿತ್ರತಂಡ, ಈಗ ಕ್ರಮೇಣ ಚೇತರಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಚಿತ್ರದ ಕೆಲಸಗಳನ್ನು
ಮುಗಿಸಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ಮೊದಲ ಹಂತವಾಗಿ ಚಿತ್ರದ ಹಾಡುಗಳು
ಬಿಡುಗಡೆಯಾಗಲಿದೆ. 24ರ ಶುಕ್ರವಾರದಂದು ಸಾಧು ಕೋಕಿಲ ಸಂಯೋಜಿಸಿರುವ ಹಾಡುಗಳು
ಬಿಡುಗಡೆಯಾಗಲಿವೆ.
ಕಳೆದ ವರ್ಷದ ನವೆಂಬರ್ನಲ್ಲಿ “ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿತ್ತು. ಆ ನಂತರ ಒಂದಷ್ಟು ಕಾಲ ಚಿತ್ರದ ಯಾವುದೇ ಚಟುವಟಿಕೆಗಳು ನಡೆಯಲಿಲ್ಲ. ಬಹುಶಃ ದುರ್ಘಟಣೆ ನಡೆಯದೆ ಎರಡೂ¾ರು ದಿನಗಳ ಚಿತ್ರೀಕರಣವಾಗಿದ್ದರೆ, ಚಿತ್ರೀಕರಣವೇ ಮುಗಿಯುತಿತ್ತು. ಆದರೆ, ಅಷ್ಟರಲ್ಲಿ ಅನಿಲ್ ಮತ್ತು ಉದಯ್ ಸಾವಿನಿಂದ ಎಲ್ಲವೂ ಏರುಪೇರಾಗಿತ್ತು. ಆ ನಂತರ ಸುಮಾರು ಒಂದೂವರೆ ತಿಂಗಳು ಸುಮ್ಮನಿದ್ದ ಚಿತ್ರತಂಡ ಕ್ರಮೇಣ ಒಂದೊಂದೇ ಕೆಲಸವನ್ನು ಮುಗಿಸಿಕೊಂಡು ಬರುತ್ತಿದೆ. ಬಾಕಿ ಇದ್ದ ಒಂದೆರೆಡು ದಿನಗಳ ಚಿತ್ರೀಕರಣವನ್ನು, ಉದಯ್ ಮತ್ತು ಅನಿಲ್ ಅವರ ಬಾಡಿ ಡಬಲ್ ಬಳಸಿಕೊಂಡು ಬೆಂಗಳೂರಿನ ಸ್ವಿಮ್ಮಿಂಗ್ ಪೂಲ್ನಲ್ಲಿ ಮುಗಿಸಲಾಗಿದೆ. ಇನ್ನು ಅನಿಲ್ ಮತ್ತು ಉದಯ್ ಅವರ ಡಬ್ಬಿಂಗ್ ಕೆಲಸ ಬಾಕಿ ಇತ್ತು. ಅನಿಲ್ ಅವರಿಗೆ ವಸಿಷ್ಠ ಸಿಂಹ ಡಬ್ ಮಾಡಿದರೆ, ಇತ್ತೀಚೆಗೆ ಉದಯ್ ಪಾತ್ರಕ್ಕೆ ಮಧು ಗುರುಸ್ವಾಮಿ ಡಬ್ ಮಾಡಿ ಮುಗಿಸಿದ್ದಾರೆ. ಅಲ್ಲಿಗೆ ಚಿತ್ರದ ಡಬ್ಬಿಂಗ್ ಕೆಲಸಗಳೆಲ್ಲಾ ಮುಗಿದಿದೆ.
ಸದ್ಯಕ್ಕೆ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ತಿಂಗಳ 24ಕ್ಕೆ ಹಾಡುಗಳು ಬಿಡುಗಡೆಯಾಗಲಿವೆ. ಮಾರ್ಚ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. “ಮಾಸ್ತಿಗುಡಿ’ ಚಿತ್ರದಲಿ ವಿಜಯ್, ಅಮೂಲ್ಯ, ಕೃತಿ ,ಅನಿಲ್, ಉದಯ್, ರವಿಶಂಕರ್ ಗೌಡ, ರಂಗಾಯಣ ರಘು ಮುಂತಾದವರು ನಟಿಸಿದ್ದು, ನಾಗಶೇಖರ್ ನಿರ್ದೇಶಿಸಿದ್ದಾರೆ. ಇನ್ನು ಸುಂದರ್ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು