ಕಾಲೇಜು ಹುಡುಗರ ಪ್ರೇಮರಥ
Team Udayavani, Aug 28, 2017, 10:44 AM IST
ಕನ್ನಡದಲ್ಲಿ ಈಗಂತೂ ಹೊಸಬರದೇ ಕಲರವ. ಅದರಲ್ಲೂ ಸದ್ದಿಲ್ಲದೆಯೇ ಹೊಸತನವುಳ್ಳ ಸಿನಿಮಾಗಳನ್ನು ಮಾಡಿ ಮುಗಿಸುವ ಮೂಲಕ ಮೆಲ್ಲನೆ ಸದ್ದು ಮಾಡುತ್ತಿದ್ದಾರೆ. ಆ ಸಾಲಿಗೆ ಈಗ “ಮಹಾರಥ’ ಎಂಬ ಹೊಸಬರ ಚಿತ್ರವೂ ಹೊಸ ಸೇರ್ಪಡೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದೆ. ಅಂದಹಾಗೆ, ರನ್ನ ಸೂಪರ್ ಮೂವೀಸ್ ಬ್ಯಾನರ್ನಡಿ ತಯಾರಾಗಿರುವ “ಮಹಾರಥ’ ಚಿತ್ರದ ಮೂಲಕ ಪ್ರೀತಮ್ ನಿಗಡೆ ನಿರ್ದೇಶಕರಾಗುತ್ತಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ನಿರ್ಮಾಣದ ಹೊಣೆಯನ್ನೂ ಪ್ರೀತಮ್ ನಿಗಡೆ ಹೊತ್ತಿದ್ದಾರೆ. ಬಹುತೇಕ ಉತ್ತರ ಕರ್ನಾಟಕ ಮಂದಿ ಸೇರಿಕೊಂಡು ಮಾಡಿರುವ ಈ ಚಿತ್ರ ಕಾಲೇಜು ಪ್ರೇಮ ಕಥಾನಕವನ್ನು ಹೊಂದಿದೆ. ಒಂದು ಮುಗ್ಧಪ್ರೇಮ ಕಥೆಯ ಜತೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಅಂಶಗಳನ್ನು ಹೊಂದಿದೆ. ಒಂದು ಹಂತದಲ್ಲಿ ಹಾರರ್ಗೂ ಸ್ಪರ್ಶ ಕೊಟ್ಟಿದ್ದು, ಈಗಿನ ಕಾಲೇಜು ಲೋಕದಲ್ಲಿ ಅರಳುವ ಪ್ರೀತಿ, ಹೇಗಿರುತ್ತೆ, ಹೇಗೆಲ್ಲಾ ಆಗುತ್ತೆ, ಯುವಕರು ಪ್ರೀತಿ ಹಿಂದೆ ಹೋದರೆ ಏನೆಲ್ಲಾ ಎದುರಾಗುತ್ತೆ ಎಂಬುದು “ಮಹಾರಥ’ದ ಕಥೆ.
ಇನ್ನು, ನಾಯಕರಾಗಿ ನಟಿಸುತ್ತಿರುವ ನವೀನ ಮತ್ತು ಪ್ರೀತಮ್ಗೆ ಇದು ಮೊದಲ ಸಿನಿಮಾ. ಇವರಿಗೆ ಅಪೂರ್ವಾ ನಾಯಕಿ. ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಅವರು “ಮನಸಿನ ಚಿತ್ತಾರ’ ಚಿತ್ರದಲ್ಲಿ ನಟಿಸಿದ್ದಾರೆ. ಬಹುತೇಕ ಹೊಸಬರೇ ತುಂಬಿರುವ ಈ ಚಿತ್ರದಲ್ಲಿ ಹಿರಿಯ ನಟರಾದ ಬ್ಯಾಂಕ್ ಜನಾರ್ಧನ್, ರಮೇಶ್ ಪಂಡಿತ್, “ಕಾಮಿಡಿ ಕಿಲಾಡಿ’ ಖ್ಯಾತಿಯ ಪ್ರವೀಣ್ಕುಮಾರ್, ಸಂಜು, “ಹಳ್ಳಿಮೇಷ್ಟ್ರು’ ಖ್ಯಾತಿಯ ಕಪ್ಪೆರಾಯ , ಹೊಸ ಪ್ರತಿಭೆಗಳಾದ ವಿಠuಲ್ ಆನಂದ, ಅಭಿಜೀತ್, ರೇವಣ್ಣ, ಮಹೇಶ ಸೇರಿದಂತೆ ಯುವ ಪ್ರತಿಭೆಗಳು ನಟಿಸಿದ್ದಾರೆ.
ಚಿತ್ರದ ಬಹುತೇಕ ಚಿತ್ರೀಕರಣ ರನ್ನ ಮುಧೋಳ, ಜಮಖಂಡಿ, ಸಂಕೇಶ್ವರ, ಗೋಕಾಕ, ನಿಡಸೋಸಿ ಸೇರದಂತೆ ಉತ್ತರ ಕರ್ನಾಟಕದ ಕೆಲವು ರಮಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಚಂದ್ರಶೇಖರ ಜನವಾಡೆ ಮತ್ತು ಅಮೀತ್ ಚೌಗುಲೆ ಸಂಗೀತವಿದೆ. ಅತುಲ್ ಲೋಂಡೆ ರಾಗ ಸಂಯೋಜಿಸಿದ್ದಾರೆ. ರೋಹನ್ ದೇಸಾಯಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಬಿ.ಬಿ.ಪಾಟೀಲ, ಕಾಡೇಶ ಬಸ್ತವಾಡಿ, ಚಂದ್ರಶೇಖರ ಜನವಾಡೆ, ಕೃಷ್ಣಾ ಚೌಧರಿ ಗೀತೆ ರಚಿಸಿದ್ದಾರೆ. ಸಂತೋಷ ವೆಂಕಿ, ಅಮೀತ್ ಚೌಗುಲೆ, ಜೋಗಿ ಸುನೀತಾ, ಮಹಾನಂದಾ ಗೊಸಾವಿ, ಸಪ್ನಾ ಉಪಾಧ್ಯ ಹಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?