ಶಶಿಕಲಾ ಮೇಲೆ ಲವ್‌ ಆಗೋಯ್ತು


Team Udayavani, Mar 6, 2018, 11:01 AM IST

Puttaraju_(141).jpg

ಕನ್ನಡದಲ್ಲಿ ಸದ್ದಿಲ್ಲದೆಯೇ ಸಿನಿಮಾಗಳು ಶುರುವಾಗುವುದು ಹೊಸ ಸುದ್ದಿಯೇನಲ್ಲ. ಆ ಸಾಲಿಗೆ “ಪುಟ್ಟರಾಜು ಲವ್ವರ್‌ ಶಶಿಕಲಾ’ ಚಿತ್ರವೂ ಸೇರಿದೆ. ಸಹದೇವ್‌ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಚಿತ್ರ. ಹಾಗಂತ ಅನುಭವ ಇಲ್ಲದೆ ನಿರ್ದೇಶನಕ್ಕಿಳಿದಿಲ್ಲ. ಈ ಹಿಂದೆ, “ಕಾಲ್ಗೆಜ್ಜೆ’, “ಜಿಂಕೆಮರಿ’ ಮತ್ತು “ಎರಡು ಕನಸು’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ನೈಜ ಘಟನೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ.

ಈಗಾಗಲೇ ಶೇ.90 ರಷ್ಟು ಚಿತ್ರೀಕರಣವಾಗಿದ್ದು, ಕ್ಲೈಮ್ಯಾಕ್ಸ್‌ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ ನಿರ್ದೇಶಕರು. ಇದೊಂದು ಮುಗ್ಧ ಮನಸುಗಳ ಸುತ್ತ ನಡೆಯುವ ಕಥೆಯಂತೆ. ಖೋ ಖೋ ಆಟದ ಮೇಲೆ ಕೇಂದ್ರಿತವಾಗಿರಿಸಿರುವ ಕಥೆಯಲ್ಲಿ ಒಂದು ಮುದ್ದಾದ ಪ್ರೇಮಕಥೆ ಹೆಣೆದಿದ್ದಾರೆ. 2001-02 ರಲ್ಲಿ ತುಮಕೂರು ನಗರದಲ್ಲಿ  ನಡೆದ ಒಂದು ನೈಜ ಘಟನೆ ಚಿತ್ರದ ಜೀವಾಳ.

ಈ ಚಿತ್ರದ ಕಥೆ ಮೆಚ್ಚಿಕೊಂಡು ನಿರ್ದೇಶಕರ ಬಾಮೈದ ನಾಗರಾಜ್‌ ಮತ್ತು ಬಾವ ಕೃಷ್ಣ, ಬಾಲಣ್ಣ ಸೇರಿ ಈ ಚಿತ್ರಕ್ಕೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿದ್ದಾರೆ. ನಾಯಕಿ ಚಿತ್ರದಲ್ಲಿ ರಾಜ್ಯಮಟ್ಟದ ಆಟಗಾರ್ತಿ. ನಾಯಕನಿಗೆ ಖೋ ಖೋ ಆಡಲು ಬರಲ್ಲ. ಆದರೆ, ನಾಯಕಿಗಾಗಿಯೇ ಅವನು ಆಟ ಕಲಿತು ಎಲ್ಲರ ಗಮನಸೆಳೆಯುತ್ತಾನೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಕಥೆ.

ನೋಡುಗರಿಗೆ ಒಂದು ಶಾಲೆಯ ನೆನಪಿನ ಜತೆಗೆ ಹಳೆಯ ಪ್ರೀತಿ ನೆನಪುಗಳೂ ಇಲ್ಲಿ ಬಿಚ್ಚಿಕೊಳ್ಳುವಷ್ಟರ ಮಟ್ಟಿಗೆ “ಪುಟ್ಟರಾಜು ಲವ್ವರ್‌ ಶಶಿಕಲಾ’ ಚಿತ್ರದಲ್ಲಿ ಮೂಡಿಬರಲಿದೆ. ಇನ್ನು, ಈ ಚಿತ್ರದಲ್ಲಿ ಅಮಿತ್‌, ಸುಶ್ಮಿತಾ, ಜಯಶ್ರೀ ನಾಯಕಿಯರು. ಇವರಿಗೆ ಇದು ಮೊದಲ ಚಿತ್ರ. ಹೊಸಬರನ್ನೇ ಇಟ್ಟುಕೊಂಡು ಮೊದಲು ಅವರಿಗೆ ತಿಂಗಳುಗಟ್ಟಲೆ ವರ್ಕ್‌ಶಾಪ್‌ ನಡೆಸಿ, ಆ ಬಳಿಕ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ ನಿರ್ದೇಶಕರು.

ಸುಮಾರು 40 ದಿನಗಳ ಕಾಲ ಚಿಕ್ಕಮಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನಾಯಕ ಅಮಿತ್‌, ಖೋ ಖೋ ಆಟ ಕಲಿಯುವಾಗ, ನಾಯಕಿಯ ಮೇಲೆ ಪ್ರೀತಿ ಚಿಗುರೊಡೆದು, ಒಂದಷ್ಟು ಸಮಸ್ಯೆ ಎದುರಿಸುವ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರಂತೆ. ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿರುವ ಸುಶ್ಮಿತಾಗೆ ಇದು ಮೊದಲ ಸಿನಿಮಾ.

ಕಥೆ ಕೇಳಿದಾಗ, ಶಾಲೆ ನೆನಪಾಗಿ, ಒಪ್ಪಿಕೊಂಡಿರುವ ಸುಶ್ಮಿತಾ, ಮೂಲತಃ ಮೈಸೂರಿನ ಕ್ರೀಡಾಪಟು. ಚಿತ್ರದಲ್ಲೂ ಖೋ ಖೋ ಆಟಗಾರ್ತಿ ಹಾಗಾಗಿ ಅವರಿಗೆ ಖುಷಿ ಇದೆ. ಇನ್ನು, ಜಯಶ್ರೀ ಆರಾಧ್ಯ ಅವರಿಗೂ ಇದು ಮೊದಲ ಚಿತ್ರ. ಇವರು ಬೇರಾರೂ ಅಲ್ಲ, ಮಾರಿಮುತ್ತು ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು. ಅವರಿಗಿಲ್ಲಿ ಸಿಕ್ಕಾಪಟ್ಟೆ ಮಾತಾಡುವ ಪಾತ್ರವಂತೆ.

ರಿಯಲ್‌ ಲೈಫ್ನಲ್ಲೂ ಅವರು ಹೆಚ್ಚು ಮಾತಾಡುತ್ತಾರಂತೆ. ಮಾರಿಮುತ್ತು ಖ್ಯಾತಿಯ ಸರೋಜಮ್ಮ ಅವರಿಗೆ ಮೊಮ್ಮಗಳನ್ನು ಸಿನಿಮಾ ರಂಗಕ್ಕೆ ಕರೆತರುವ ಆಸೆ ಇತ್ತಂತೆ. ಅದೀಗ ಈಡೇರಿದೆ ಎಂಬ ತೃಪ್ತಿ ಜಯಶ್ರೀ ಅವರದು. ಉಳಿದಂತೆ ಚಿತ್ರದಲ್ಲಿ ಕಾವ್ಯಾ, ಮಹದೇವ್‌ ಮೂರ್ತಿ, ಡಾ. ಮನೋಹರ್‌ ಮಣಿ, ವಿಕ್ರಾಂತ್‌ ಇತರರು ನಟಿಸಿದ್ದಾರೆ. ರಾಜ್‌ ಶಿರಾ ಕ್ಯಾಮೆರಾ ಹಿಡಿದರೆ, ಶ್ರೀರಾಮ್‌ ಗಂಧರ್ವ ಸಂಗೀತವಿದೆ.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.