ಮತ್ತೆ ಪ್ರೇಕ್ಷಕರ ಮುಂದೆ ಬಂದ ಮಾಲಾಶ್ರೀ: ನೈಟ್‌ ಕರ್ಫ್ಯೂ ನಲ್ಲಿ ಹೊಸ ಲುಕ್‌


Team Udayavani, Jun 3, 2022, 3:24 PM IST

malashri new movie night curfew

ನಟಿ ಮಾಲಾಶ್ರೀ ಅಂದ್ರೆ ಮೊದಲು ನೆನಪಿಗೆ ಬರುವುದು ಅವರ ಆ್ಯಕ್ಷನ್‌ ಸಿನಿಮಾಗಳು, ಖಡಕ್‌ ಲುಕ್‌ನ ಪಾತ್ರಗಳು. ಕನ್ನಡ ಚಿತ್ರರಂಗದಲ್ಲಿ ಲೇಡಿ ಸೂಪರ್‌ಸ್ಟಾರ್‌ ಆಗಿ ಇಂಥ ಪಾತ್ರಗಳ ಮೂಲಕವೇ ಸಿನಿಪ್ರಿಯರಿಗೆ ಇಷ್ಟವಾದವರು ಮಾಲಾಶ್ರೀ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರದ ಮಾಲಾಶ್ರೀ ಈ ಬಾರಿ ಡಾಕ್ಟರ್‌ ಪಾತ್ರದಲ್ಲಿ ಪ್ರೇಕ್ಷಕರ ಮುಂದೆಬರುವ ತಯಾರಿಯಲ್ಲಿದ್ದಾರೆ.

ಹೌದು, ಇದೇ ಮೊದಲ ಬಾರಿಗೆ ಮಾಲಾಶ್ರೀ “ನೈಟ್‌ ಕರ್ಫ್ಯೂ’ ಸಿನಿಮಾದಲ್ಲಿ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದೇ ರಾತ್ರಿ, ಒಂದೇ ಲೊಕೇಶನ್‌ ಮತ್ತು ಒಂದೇ ಕಾಸ್ಟೂಮ್‌ನಲ್ಲಿ ಇಡೀ “ನೈಟ್‌ ಕರ್ಫ್ಯೂ’ ಸಿನಿಮಾ ನಡೆಯುತ್ತದೆಯಂತೆ.

ಇತ್ತೀಚೆಗೆ “ನೈಟ್‌ ಕರ್ಫ್ಯೂ’ ಸಿನಿಮಾದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಇದೇ ವೇಳೆ ಮಾತಿಗೆ ಸಿಕ್ಕ ಮಾಲಾಶ್ರೀ ತಮ್ಮ ಹೊಸ ಸಿನಿಮಾ, ಹೊಸ ಪಾತ್ರ ಮತ್ತು ಮುಂದಿನ ಯೋಜನೆಗಳ ಬಗ್ಗೆ ಒಂದಷ್ಟು ಮಾತನಾಡಿದರು.

“ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ತುಂಬಾ ಸಿನಿಮಾ ಆಫ‌ರ್ ಕೈಬಿಟ್ಟಿದ್ದೇನೆ. ಅದಕ್ಕೆ ಕಾರಣ, ಹೀಗೆ ಬಂದ ಆಫ‌ರ್‌ಗಳಲ್ಲಿ ಪೊಲೀಸ್‌, ಸಿಬಿಐ, ಆ್ಯಕ್ಷನ್‌ ಹೆಚ್ಚಾಗಿರುವಂಥ ಕ್ಯಾರೆಕ್ಟರ್‌ ಗಳೇ ಹೆಚ್ಚಾಗಿರುತ್ತಿದ್ದವು. ಆದ್ರೆ “ನೈಟ್‌ ಕರ್ಫ್ಯೂ’ ಸಿನಿಮಾ ಅದೆಲ್ಲದಕ್ಕಿಂತ ಹೊಸ ಥರದಲ್ಲಿತ್ತು. ಸಿನಿಮಾ ನೋಡಿದವರಿಗೆ ಹೀಗೂ ಸಾಧ್ಯವಾ ಎಂದು ಪ್ರಶ್ನೆ ಮೂಡಿಸುವಂತಿದೆ. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ’ ಎನ್ನುತ್ತಾರೆ ಮಾಲಾಶ್ರೀ.

“ಈ ಸಿನಿಮಾದಲ್ಲಿ ನಟಿಸುವಾಗ ಖುಷಿ, ಭಯ ಎರಡೂ ಇತ್ತು. ಇಡೀ ಚಿತ್ರತಂಡ ಹೊಸದು ನನಗೆ ಒಂಥರಾ ಚಾಲೆಂಜಿಂಗ್‌ ಆಗಿತ್ತು. ಎಲ್ಲರೂ ನಾವು ನಿಮ್ಮ ಅಭಿಮಾನಿಗಳು ಎಂದಾಗ ಭಯ ಆಗುತ್ತಿತ್ತು. ಇದೊಂಥರಾ ಹೊಸ ಆರಂಭ ನನಗೆ. ಮಕ್ಕಳು ಸಹ ನಿಮ್ಮ ಸಿನಿಮಾ ಇಷ್ಟ ಎನ್ನುತ್ತಾರೆ. ಹೆಂಗಸರು ಸಹ ನೀವೇ ನಮಗೆ ಸ್ಫೂರ್ತಿ ಎನ್ನುತ್ತಾರೆ. ಜನ ತೋರಿಸುವ ಪ್ರೀತಿ ನೋಡಿದರೆ, ನಿಜಕ್ಕೂ ನಾನೇನಾ ದರೂ ಮಾಡಿದ್ದೀನಾ ಎಂದನಿಸುತ್ತದೆ’ ಎನ್ನುವುದು ಮಾಲಾಶ್ರೀ ಮಾತು.

“”ನೈಟ್‌ ಕರ್ಫ್ಯೂ’ ಸಿನಿಮಾದಲ್ಲಿ ನನ್ನದು ಡಾಕ್ಟರ್‌ ಪಾತ್ರ. ಮೊದಲಿಗೆ ಜನ ಕರೊನಾ ಮರೆಯುತ್ತಿರುವ ಸಂದರ್ಭದಲ್ಲಿ ಮತ್ತೆ ನೆನಪಿಸಬೇಕಾ ಎಂದನಿಸಿತು. ಆದರೆ, ಇದರಲ್ಲಿರುವ ಕಂಟೆಂಟ್‌ ನಾನು ಈ ಕ್ಯಾರೆಕ್ಟರ್‌ ಮಾಡುವಂತೆ ಮಾಡಿತು. ಇದು ಒಂದೇ ನೈಟ್‌, ಒಂದೇ ಲೊಕೇಶನ್‌ ಮತ್ತು ಒಂದೇ ಕಾಸ್ಟ್ಯೂಮ್ ನಲ್ಲಿ ಎಲ್ಲೂ ಬೋರ್‌ ಹೊಡೆಸದಂತೆ ಅದ್ಭುತವಾಗಿ ಸಿನಿಮಾ ಬಂದಿದೆ. ಆಡಿಯನ್ಸ್‌ಗೂ ಈ ಸಿನಿಮಾ ಮತ್ತು ನನ್ನ ಕ್ಯಾರೆಕ್ಟರ್‌ ಎರಡೂ ಇಷ್ಟವಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.

ಅಂದಹಾಗೆ, “ಸ್ವರ್ಣಗಂಗಾ ಫಿಲಂಸ್‌’ ಬ್ಯಾನರ್‌ನಲ್ಲಿ ಬಿ. ಎಸ್‌ ಚಂದ್ರಶೇಖರ್‌ ನಿರ್ಮಿಸುತ್ತಿರುವ “ನೈಟ್‌ ಕರ್ಫ್ಯೂ’ ಸಿನಿಮಾಕ್ಕೆ ರವೀಂದ್ರ ವೆಂಶಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಪ್ರಮೋದ್‌ ಭಾರತೀಯ ಛಾಯಾಗ್ರಹಣ, ಸಿ. ರವಿಚಂದ್ರನ್‌ ಸಂಕಲನವಿದೆ.

“ನೈಟ್‌ ಕರ್ಫ್ಯೂ’ ಚಿತ್ರದಲ್ಲಿ ಮಾಲಾಶ್ರೀ ಅವರೊಂದಿಗೆ ರಂಗಾಯಣ ರಘು, ರಂಜನಿ ರಾಘವನ್‌, ಬಲರಾಜವಾಡಿ, ಸಾಧುಕೋಕಿಲ, ಅಶ್ವಿ‌ನ್‌ ಹಾಸನ್‌, ಪ್ರಮೋದ್‌ ಶೆಟ್ಟಿ, ವರ್ಧನ್‌ ತೀರ್ಥಹಳ್ಳಿ, ಮಂಜು ಪಾವಗಡ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಟಾಪ್ ನ್ಯೂಸ್

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.