ನಿರ್ಮಾಪಕನ ಬಗ್ಗೆ ಮಂಜು ವಾರ್ಯರ್ ದೂರು
Team Udayavani, Oct 23, 2019, 12:59 AM IST
ತಿರುವನಂತಪುರ: ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ ಮಂಜು ವಾರ್ಯರ್ “ಒಡಿಯನ್’ ಸಿನಿಮಾ ನಿರ್ಮಾಪಕ ಶಿವಕುಮಾರ ಮೆನನ್ ವಿರುದ್ಧ ಕೇಸು ದಾಖಲಿಸಿದ್ದಾರೆ. ಬೆದರಿಕೆಯೊಡ್ಡಿದ ಆರೋಪ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕಾರಕ ಅಂಶಗಳ ಮೂಲಕ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ವಾರ್ಯರ್ ಆರೋಪಿಸಿದ್ದಾರೆ. ಜತೆಗೆ ಡಿಜಿಟಲ್ ಸಾಕ್ಷ್ಯಗಳನ್ನೂ ನೀಡಿದ್ದಾರೆ ಎಂದು ಹೇಳಲಾಗಿದೆ. ದೂರು ಸ್ವೀಕರಿಸಲಾಗಿರುವ ಬಗ್ಗೆ ಕೇರಳ ಡಿಜಿಪಿ ಲೋಕನಾಥೆ ಬೆಹ್ರಾರ ಕೂಡ ಖಚಿತಪಡಿಸಿದ್ದಾರೆ.