ಮಾರಿಮುತ್ತು ಮೊಮ್ಮಗಳು ಈಗ ನಾಯಕಿ


Team Udayavani, Aug 5, 2018, 12:53 PM IST

jayashri-marimuttu.jpg

ಮಾರಿಮುತ್ತು…! ಕನ್ನಡ ಚಿತ್ರರಂಗದಲ್ಲಿ ಎಲ್ಲರಿಗೂ ಗೊತ್ತಿರುವ ಹೆಸರಿದು. ಈ ಹೆಸರು ಕೇಳಿದಾಕ್ಷಣ, ದಢೂತಿ ದೇಹ, ಗಡಸ್ಸು ಧ್ವನಿ ನೆನಪಾಗದೇ ಇರದು. ಹೌದು, ಮಾರಿಮುತ್ತು ಅಂದರೆ, “ಉಪೇಂದ್ರ’ ಚಿತ್ರದ ಖಡಕ್‌ ಆಗಿರುವ, ರೌಡಿಸಂ ಮಾಡುವ ಪಾತ್ರಧಾರಿ ಸರೋಜಮ್ಮ ಅವರ ನೆನಪಾಗುತ್ತೆ. ಈಗ ಅವರಿಲ್ಲ. ಆದರೆ, ಅವರ ಕುಟುಂಬದ ಕುಡಿಯೊಂದು ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದೆ.

ಅಷ್ಟೇ ಅಲ್ಲ, ಮೊದಲ ಬಾರಿಗೆ ನಟಿಸಿರುವ ಚಿತ್ರವೊಂದು ಈ ವಾರ ಬಿಡಗುಡೆಯೂ ಆಗುತ್ತಿದೆ. ಆ ಚಿತ್ರದ ಹೆಸರು, “ಪುಟ್ಟರಾಜು ಲವ್ವರ್‌ ಆಫ್ ಶಶಿಕಲಾ’. ಹೌದು, ಸರೋಜಮ್ಮ ಅಲಿಯಾಸ್‌ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಆರಾಧ್ಯ ಈಗ ನಾಯಕಿಯಾಗಿದ್ದಾರೆ. ಸರೋಜಮ್ಮ ಅವರ ಪುತ್ರನ ಮಗಳೇ ಈ ಜಯಶ್ರೀ ಆರಾಧ್ಯ. ಹಾಗೆ ನೋಡಿದರೆ, ಜಯಶ್ರೀ ಆರಾಧ್ಯ ಅವರಿಗೆ ಸಿನಿಮಾ ಇಂಟ್ರೆಸ್ಟ್‌ ಇರಲಿಲ್ಲವಂತೆ.

ಅವರ ಅಜ್ಜಿ ಬದುಕಿದ್ದಾಗ, ಜಯಶ್ರೀ ಪಿಯುಸಿ ಓದುತ್ತಿದ್ದರು. ಅಜ್ಜಿ ಇಲ್ಲವಾದಾಗ, ಫೇಸ್‌ಬುಕ್‌ನಲ್ಲಿ ಅಜ್ಜಿಯ ಫೋಟೋ ಹಾಕಿ, ಹಾಗೊಂದು ಸ್ಟೇಟಸ್‌ ಹಾಕುತ್ತಿದ್ದರು. “ಮಾರಿಮುತ್ತು’ ಮೊಮ್ಮಗಳು ಅಂತ ಗೊತ್ತಾದಾಗ, ಚಿತ್ರರಂಗದ ಅನೇಕರು ಸಂಪರ್ಕಿಸಿ, ಸಿನಿಮಾದಲ್ಲಿ ನಟಿಸುವಂತೆ ಆಹ್ವಾನಿಸುತ್ತಿದ್ದರು. ಆದರೆ, ಜಯಶ್ರೀ ಅವರೇಕೋ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರಿಗೆ ಎಂಜಿನಿಯರ್‌ ಆಗುವ ಆಸೆ.

ಆದರೆ, ಅದ್ಹೇಗೋ ಆಕಸ್ಮಿಕವಾಗಿ ಅವಕಾಶ ಹುಡುಕಿ ಬಂತು. ಕುಟುಂಬದಲ್ಲಿ ಜಯಶ್ರೀ ಅಜ್ಜಿ ಬಿಟ್ಟರೆ, ಬೇರೆ ಯಾರೂ ಕಲಾವಿದರಲ್ಲ. ಪದೇ ಪದೇ ಹುಡುಕಿ ಬರುವ ಅವಕಾಶ ಬಳಸಿಕೊಳ್ಳುವ ಮನಸ್ಸು ಮಾಡಿದ ಜಯಶ್ರೀಗೆ ಸಿಕ್ಕಿದ್ದು, “ಪುಟ್ಟರಾಜು ಲವ್ವರ್‌ ಆಫ್ ಶಶಿಕಲಾ’. ಈ ಚಿತ್ರದಲ್ಲಿ ನಟಿಸಿರುವ ಜಯಶ್ರೀಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಅಲ್ಲದೆ, ಒಂದಷ್ಟು ಅವಕಾಶಗಳು ಬಂದಿವೆ. ಈಗ ಅವರ ಕೈಯಲ್ಲಿ ಮೂರು ಕಥೆಗಳಿವೆ.

ಆದರೆ, ಇನ್ನೂ ಅಂತಿಮಗೊಳಿಸಿಲ್ಲ. ಕಾರಣ, ಮೊದಲ ಚಿತ್ರ ಬಿಡುಗಡೆಯಾಗಿ, ಅವರ ನಟನೆ ಬಗ್ಗೆ ಬರುವ ಮಾತುಗಳನ್ನು ಕೇಳಿದ ಬಳಿಕ ಸಿನಿಮಾದಲ್ಲಿ ಮುಂದುವರೆಯೋ ನಿರ್ಧಾರ ಮಾಡಿದ್ದಾರೆ. ಅಂದಹಾಗೆ, ಆ ಚಿತ್ರದಲ್ಲಿ ಜಯಶ್ರೀ ಅವರದು ರಿಯಲ್‌ ಲೈಫ್ಗೆ ವಿರುದ್ಧವಾದ ಪಾತ್ರವಂತೆ. ಅಂದರೆ, ಚಿತ್ರದಲ್ಲಿ ತುಂಬಾನೇ ಇನ್ನೋಸೆಂಟ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಲೇಜ್‌ ಹುಡುಗಿ ಪಾತ್ರವದು.

ರಿಯಲ್‌ ಲೈಫ್ನಲ್ಲಿ ಸಿಕ್ಕಾಪಟ್ಟೆ ಮಾತಾಡುವ ಜಯಶ್ರೀ, ಚಿತ್ರದಲ್ಲಿ ಸೈಲೆಂಟ್‌ ಗರ್ಲ್ ಆಗಿ ಕಾಣಿಸಿಕೊಂಡಿದ್ದಾರೆ. ಜಯಶ್ರೀಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಖುಷಿ ಇದೆ. ಅಜ್ಜಿ ರೀತಿ ಪಾಪ್ಯುಲರ್‌ ಆಗುವ ಬಗ್ಗೆ ಕನಸು ಕಂಡಿಲ್ಲ. ಆದರೆ, ಅಜ್ಜಿಯ ಮೊಮ್ಮಗಳಾಗಿ ಅವರ ಹೆಸರನ್ನು ಉಳಿಸುವ ಕಲಾವಿದೆಯಾಗುವ ಆಸೆಯಂತೂ ಇಟ್ಟುಕೊಂಡಿದ್ದಾರೆ. ಒಳ್ಳೆಯ ಫ್ಲಾಟ್‌ಫಾರಂಗಾಗಿ ಕಾಯುತ್ತಿರುವ ಜಯಶ್ರೀ, ಹೊಸ ರೀತಿಯ ಪಾತ್ರ ಎದುರು ನೋಡುತ್ತಿದ್ದಾರೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.