ಮಿಲಿಯನ್ ಡಾಲರ್ ಪ್ರಶ್ನೆ!
Team Udayavani, Jan 3, 2018, 11:06 AM IST
“ಎಚ್.ಐ.ವಿ. ಸೋಂಕಿರುವ ಮಹಿಳೆಯ ಪಾತ್ರ ಮಾಡೋದಾ? ನಾ ಒಲ್ಲೆ …’ ಹಾಗಂತ ಕನ್ನಡ ಚಿತ್ರರಂಗದ ಜನಪ್ರಿಯ ನಟಿಯೊಬ್ಬರು ಹೇಳಿದರಂತೆ. ಅಷ್ಟೇ ಅಲ್ಲ, ಆ ಪಾತ್ರವನ್ನೇ ನಿರಾಕರಿಸಿದರಂತೆ. ಕೊನೆಗೆ ಆ ಪಾತ್ರವನ್ನು ಯಾರಿಂದ ಮಾಡಿಸಬೇಕೆಂದು ಯೋಚಿಸಿದಾಗ, ನೆನಪಾಗಿದ್ದು ಮಾನಸ. ಕಿರುತೆರೆಯಲ್ಲಿ ಒಂದಿಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದ ಮಾನಸ ಆ ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ.
ಎಚ್.ಐ.ವಿ. ಸೋಂಕಿರುವ ಮಹಿಳೆಯ ಕುರಿತಾದ “ಮದರ್ ಸವಿತಾ’ ಚಿತ್ರವೇನೋ ಮುಗಿದಿದೆ. ಆದರೆ, ನಿರ್ದೇಶಕ ರಾಜು ಹಲಗೂರು ಮಾತ್ರ ಇನ್ನೂ ಬೇಸರವಿದ್ದೇ ಇದೆ. “ಬಾಲಿವುಡ್ನಲ್ಲಿ ಹಲವು ನಟಿಯರು ಎಚ್.ಐ.ವಿ ಸೋಂಕಿತರ ಪಾತ್ರ ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಮಾತ್ರ ಯಾಕೆ ನಟಿಯರು ಅಂತಹ ಪಾತ್ರಗಳನ್ನು ಮಾಡುವುದಕ್ಕೆ ಹಿಂದೇಟು ಹಾಕುತ್ತಾರೋ ಗೊತ್ತಿಲ್ಲ.
ಇದೇ ವಿಷಯದ ಕುರಿತಾಗಿ ಕನ್ನಡ ಚಿತ್ರರಂಗದ ಜನಪ್ರಿಯ ನಟಿಯೊಬ್ಬರ ಬಳಿ ಚಿತ್ರದಲ್ಲಿ ನಟಿಸುವುದಕ್ಕೆ ಕೇಳುವುದಕ್ಕೆಂದು ಹೋಗಿದ್ದೆ. ಜನಪ್ರಿಯ ಕಲಾವಿದರು, ಆ ತರಹದ ಪಾತ್ರಗಳನ್ನು ಮಾಡಿದರೆ, ಜನ ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಅರಿವು ಮೂಡುತ್ತದೆ ಎಂಬ ಕಾರಣಕ್ಕೆ ನಾನು ಅವರನ್ನು ಪಾತ್ರ ಮಾಡುವುದಕ್ಕೆ ಕೇಳಿದ್ದೆ. ಆದರೆ, ಎಚ್.ಐ.ವಿ ಸೋಂಕಿರುವ ಮಹಿಳೆಯ ಪಾತ್ರ ಎಂದು ಕೇಳುತ್ತಿದ್ದಂತೆಯೇ ಅವರು ನಿರಾಕರಿಸಿದರು.
ಪ್ರಜ್ಞಾವಂತರಲ್ಲೇ ಈ ತರಹದ ತಾರತಮ್ಯ ಯಾಕೆ ಎಂದು ಗೊತ್ತಿಲ್ಲ. ಕೊನೆಗೆ ಮಾನಸ ಅವರ ಬಳಿ ಹೋಗಿ ಕಥೆ ಹೇಳಿದೆ. ಅವರು ಒಪ್ಪಿಕೊಂಡು ಚಿತ್ರದಲ್ಲಿ ನಟಿಸಿದರು. ಒಂದೇ ಒಂದು ದಿನಕ್ಕೂ ಅವರಿಂದ ಸಮಸ್ಯೆ ಆಗಲಿಲ್ಲ’ ಎಂದರು ರಾಜು ಹಲಗೂರು. ರಾಜು ಹಲಗೂರು ಬಂದು “ಮದರ್ ಸವಿತಾ’ ಕಥೆಯನ್ನು ಹೇಳಿದಾಗ, ಮಾನಸ ಅವರಿಗೆ ಆರಂಭದಲ್ಲಿ ನೆಗೆಟಿವ್ ಯೋಚನೆಗಳು ಬಂದವಂತೆ.
“ಎಷ್ಟೇ ಪ್ರಜ್ಞಾವಂತರಾದರೂ, ಈ ತರಹದ ಪಾತ್ರಗಳು ಬಂದಾಗ, ಒಂದು ಕ್ಷಣ ಹಿಂದೇಟು ಹಾಕುವುದು ಸಹಜ. ನಾನು ಸಹ ಹಿಂದೇಟು ಹಾಕಿದೆ. ಕೊನೆಗೆ ಕಥೆ ಕೇಳಿದಾಗ, ನನ್ನ ಪಾತ್ರದಲ್ಲೊಂದು ಒಳ್ಳೆಯ ಸಂದೇಶ ಇದೆ ಎಂದು ಗೊತ್ತಾದಾಗ, ಪಾತ್ರ ಮಾಡುವುದಕ್ಕೆ ಮುಂದೆ ಬಂದೆ’ ಎಂದು ಮಾನಸ ಹೇಳಿಕೊಂಡರು. ಅಂದಹಾಗೆ, “ಮದರ್ ಸವಿತಾ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೀಗ ಸೆನ್ಸಾರ್ ಆಗಬೇಕಿದೆ.
ನಿರ್ದೇಶಕ ರಾಜು ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಸುಮಾರು 10 ತಿಂಗಳ ಕಾಲ ರಿಸರ್ಚ್ ಮಾಡಿ ಅವರು ಕಥೆ ಮಾಡಿಕೊಂಡಿದ್ದಾರಂತೆ. ಶ್ರೀ ಗುರು ಅನುಗ್ರಹ ಪ್ರೊಡಕ್ಷನ್ಸ್ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ, ಎಚ್.ಐ.ವಿ. ಪೀಡಿತರನ್ನು ಮಾನವೀಯವಾಗಿ ನೋಡಿ ಎಂಬ ಸಂದೇಶವಿದೆಯಂತೆ. ಚಿತ್ರದಲ್ಲಿ ಮಾನಸ ಜೊತೆಗೆ ದೀಪಕ್, ಶ್ರೀಧರ್, ಸಂಜೀವ್ ಉಡುಪಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸುರೇಶ್ ಚಾಂದ್ ಅವರ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್ ಕನಸು: ಇಂದು ತೆರೆಗೆ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್ ಅಂತ್ಯಕ್ರಿಯೆ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!