ಥ್ರಿಲ್‌ ನೀಡುವ ಹೊಸಬರ ವೇಷ


Team Udayavani, Feb 19, 2022, 11:34 AM IST

Untitled-1

ವ್ಯಕ್ತಿಯೊಬ್ಬನಿಗೆ ಇರುವ ಧೈರ್ಯ ಆತನನ್ನು ಹತ್ತಾರು ಸಾಹಸಗಳಿಗೆ ಪ್ರೇರೇಪಿಸಬಹುದು. ಹಾಗೆಯೇ, ಆತನಲ್ಲಿರುವ ಭಯ (ಫೋಬಿಯಾ) ಕೂಡ ಹತ್ತಾರು ದುಸ್ಸಾಹಸಗಳಿಗೆ ಪ್ರೇರೇಪಿಸ ಬಹುದು! ಅದು ಹೇಗಿರುತ್ತದೆ ಅನ್ನೋದು ಈ ವಾರ ತೆರೆಗೆ ಬಂದಿರುವ “ಬಹುಕೃತ ವೇಷಂ’ ಚಿತ್ರದ ಕಥಾಹಂದರ.

ಅಪರೂಪವೆನಿಸುವ ಡಿಲೇರಿಯಂ ಫೋಬಿಯಾ (ಚಿತ್ತ ಕಲ್ಪಿತ ಭಯ) ಎಂಬ ಮಾನಸಿಕ ಖಾಯಿಲೆಯಿಂದ ಬಳಲುವ ನಾಯಕ ಅತಿಶಯ್‌ (ಶಶಿಕಾಂತ್‌)ಗೆ ಈ ಫೋಬಿಯಾ (ಭಯ) ಹೇಗೆಲ್ಲ ಶತ್ರುವಾಗಬಲ್ಲದು, ಇದರಿಂದ ಆತ ಹೇಗೆಲ್ಲ ಬಳಲಿ-ಬೆಂಡಾಗುತ್ತಾನೆ. ಇಂಥ ದೌರ್ಬಲ್ಯ ತಿಳಿದವರು ಆತನನ್ನು ಹೇಗೆಲ್ಲ “ವೇಷ’ಬದಲಾಯಿಸಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ “ಬಹು’ ವಿಧವಾಗಿ ಬಳಸಿಕೊಳ್ಳುತ್ತಾರೆ, ಎನ್ನುವುದರ ಸುತ್ತ “ಬಹುಕೃತ ವೇಷಂ’ ಸಿನಿಮಾ ಸಾಗುತ್ತದೆ.

ಅದರ ಪರಿಣಾಮಗಳೇನು ಅನ್ನೋದನ್ನ ಸಿನಿಮಾದಲ್ಲಿಯೇ ನೋಡುವುದು ಒಳ್ಳೆಯದು. ಕನ್ನಡದ ಮಟ್ಟಿಗೆ ಹೊಸದೆನಿಸುವ ಇಂಥದ್ದೊಂದು ಸಬ್ಜೆಕ್ಟ್ ತೆರೆಮೇಲೆ ತಂದಿರುವ ಚಿತ್ರ ತಂಡದ ಪ್ರಯತ್ನ ಪ್ರಶಂಸನಾರ್ಹ. ಮೊದಲಾರ್ಧ ಒಂದು ಆಯಾಮದಲ್ಲಿ ಸಾಗುವ ಚಿತ್ರಕಥೆ, ದ್ವಿತೀಯಾರ್ಧದಲ್ಲಿ ಮತ್ತೂಂದು ಆಯಾಮ ಪಡೆದು ಕೊಳ್ಳುತ್ತದೆ. ಆದರೆ ಚಿತ್ರಕಥೆ ಮತ್ತು ನಿರೂಪಣೆಯಲ್ಲಿಸಾಕಷ್ಟು ಟರ್ನ್ಸ್, ಟ್ವಿಸ್ಟ್‌ ಇರುವುದರಿಂದ, ಕೆಲವುಸನ್ನಿವೇಶಗಳಲ್ಲಿ ಪ್ರೇಕ್ಷಕರು ಲಾಜಿಕ್‌ ಹುಡುಕುವ ಮೊದಲೇ ಮತ್ತೂಂದು ಟರ್ನ್, ಟ್ವಿಸ್ಟ್‌ ಎದುರಾಗಿರುತ್ತದೆ. ಚಿತ್ರಕಥೆಗೆ ತಕ್ಕಂತೆ ಸಂಭಾಷಣೆ ಮೊನಚಾ ಗಿದೆ. ಕೆಲ ದೃಶ್ಯಗಳಿಗೆ ಅಲ್ಲಲ್ಲಿ ಕತ್ತರಿ ಬಿದ್ದಿದ್ದರೆ, “ಬಹುಕೃತ ವೇಷಂ’ ಇನ್ನಷ್ಟುಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ಮುಟ್ಟುವ ಸಾಧ್ಯತೆಗಳಿದ್ದವು.

ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ನಾಯಕ ಶಶಿಕಾಂತ್‌ ಮತ್ತು ವೈಷ್ಣವಿಇಬ್ಬರದ್ದೂ ಪೈಪೋಟಿ ನೀಡುವ ಅಭಿನಯ.ಎರಡು ವಿಭಿನ್ನ ಶೇಡ್‌ನ‌ ಪಾತ್ರಗಳನ್ನು ನಾಯಕಶಶಿಕಾಂತ್‌, ಸಮರ್ಥವಾಗಿ ನಿಭಾಯಿಸಿದ್ದಾರೆ.ಎರಡು ಥರದ ಮ್ಯಾನರಿಸಂ, ಆ್ಯಕ್ಷನ್‌, ಡ್ಯಾನ್ಸ್‌, ಡೈಲಾಗ್‌ ಡೆಲಿವರಿ ಎಲ್ಲದರಲ್ಲೂ ಶಶಿಕಾಂತ್‌ಪ್ರತಿಭೆ ಅನಾವರಣವಾಗಿದೆ. ನಾಯಕನ ಪಾತ್ರಕ್ಕೆ ಎದುರಾಗುವ ಪಾತ್ರದಲ್ಲಿ ವೈಷ್ಣವಿ ಹಾಗೂ ಖಳನಟನ ಪಾತ್ರದಲ್ಲಿ ಕರಣ್‌ ಆರ್ಯ ಅವರದ್ದುಕೂಡ ನೋಡುಗರ ಗಮನ ಸೆಳೆಯುವಂಥ ಅಭಿನಯ. ಉಳಿದ ಪಾತ್ರಗಳು ಹಾಗೆ ಬಂದು,ಹೀಗೆ ಹೋಗುವುದರಿಂದ ಅವುಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.

ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ ಚೆನ್ನಾಗಿದೆ. ಚಿತ್ರದ ಹಾಡುಗಳು ಕೂಡ ಗುನುಗುವಂತಿದೆ. ಹಿನ್ನೆಲೆ ಸಂಗೀತ, ಸಂಕಲನ, ಕಲರಿಂಗ್‌ ಮತ್ತಿತರ ತಾಂತ್ರಿಕ ಕೆಲಸಗಳ ಕಡೆಗೆ ಚಿತ್ರತಂಡ ಇನ್ನಷ್ಟು ಗಮನನೀಡಬಹುದಿತ್ತು. ಕೆಲ ಸಣ್ಣಪುಟ್ಟ ಲೋಪಗಳನ್ನುಬದಿಗಿಟ್ಟು ನೋಡುವುದಾದರೆ, “ಬಹುಕೃತ ವೇಷಂ’ ಒಂದೊಳ್ಳೆ ಪ್ರಯತ್ನವಾಗಿದ್ದು, ವಾರಾಂತ್ಯದಲ್ಲಿ ಒಮ್ಮೆ ನೋಡಿ ಬರಲು ಅಡ್ಡಿಯಿಲ್ಲ

…………………………………………………………………………………………………………………….

ಚಿತ್ರ: ಬಹುಕೃತ ವೇಷಂ

ರೇಟಿಂಗ್‌:  ***

ನಿರ್ಮಾಣ: ಹೆಚ್‌. ನಂದ, ಡಿ.ಕೆ ರವಿ

ನಿರ್ದೇಶನ: ಪ್ರಶಾಂತ್‌ ಕೆ. ಎಳ್ಳಂಪಳ್ಳಿ

ತಾರಾಗಣ: ಶಶಿಕಾಂತ್‌, ವೈಷ್ಣವಿ ಗೌಡ,ಕರಣ್‌ ಆರ್ಯ, ರಾಕೇಶ್‌ ಪೂಜಾರಿ ಮತ್ತಿತರರು

 

-ಜಿ.ಎಸ್‌. ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.