ಇರುವುದೆಲ್ಲವ ಬಿಟ್ಟು ಚಿತ್ರಕ್ಕೆ ಮುರಳಿ ಧ್ವನಿ
Team Udayavani, Aug 16, 2018, 11:55 AM IST
“ಇರುವುದೆಲ್ಲವ ಬಿಟ್ಟು’ ಚಿತ್ರದ ಒಂದು ಹಾಡನ್ನು ತಮಿಳು ನಟ ಸಿಂಬು ಹಾಡಿರೋದು ನಿಮಗೆ ಗೊತ್ತೇ ಇದೆ. ಈಗ ನಟ ಮುರಳಿ ಸರದಿ. ಹಾಗಂತ ಮುರಳಿ ಇಲ್ಲಿ ಹಾಡುತ್ತಿಲ್ಲ. ಬದಲಾಗಿ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಹೌದು, “ಇರುವುದೆಲ್ಲವ ಬಿಟ್ಟು’ ಚಿತ್ರಕ್ಕೆ ಮುರಳಿ ಧ್ವನಿ ನೀಡುವ ಮೂಲಕ ಹೊಸಬರ ತಂಡವನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಚಿತ್ರಕ್ಕೆ ಬೇರೆ ತರಹದ ಧ್ವನಿ ಬೇಕಾದ ಕಾರಣ ಚಿತ್ರತಂಡ ಯಾರಿಂದ ಕೊಡಿಸೋದೆಂದು ಯೋಚಿಸುತ್ತಿದ್ದಾಗ ಬಂದ ಹೆಸರು ಮುರಳಿ. ಅದರಂತೆ ಮುರಳಿ ಕೂಡಾ ಖುಷಿಯಿಂದ ಒಪ್ಪಿಕೊಂಡು ಧ್ವನಿ ನೀಡಿದ್ದಾರೆ. ದಾವಣಗೆರೆ ದೇವರಾಜ್ ನಿರ್ಮಾಣದ ಈ ಚಿತ್ರವನ್ನು ಕಾಂತ ಕನ್ನಲ್ಲಿ ನಿರ್ದೇಶಿಸಿದ್ದಾರೆ.
ಚಿತ್ರಕ್ಕೆ ಮಹೇಶ್ ಮಳವಳ್ಳಿ ಸಂಭಾಷಣೆ, ವಿಲಿಯಂ ಡೇವಿಡ್ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ, ಶ್ರೀನಿವಾಸ್ ಕಲೆ ಇದೆ. ತಾರಾಗಣದಲ್ಲಿ ಮೇಘನಾ ರಾಜ್, ತಿಲಕ್, ಶ್ರೀಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್ ರಾಯಣ್ಣ, ರಿಚರ್ಡ್ ಲೂಯಿಸ್ ಮುಂತಾದವರಿದ್ದಾರೆ.