ನನ್ನಲ್ಲೊಬ್ಬ ಆರಂಭ
Team Udayavani, Dec 26, 2017, 11:50 AM IST
ರೇಂಜರ್ಸ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶಾಂತರಾಜ್ ಹಾಗೂ ಸವಿತಾ ಶ್ರೀನಿವಾಸ್ ನಿರ್ಮಿಸುತ್ತಿರುವ “ನನ್ನಲ್ಲೊಬ್ಬ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಂದಿನಿ ಲೇಔಟ್ನ ಈಶ್ವರ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರದ ಪ್ರಥಮ ಸನ್ನಿವೇಶಕ್ಕೆ ಬಿಬಿಎಂಪಿ ಕೌನ್ಸಿಲರ್ ರಾಜೇಂದ್ರ ಕುಮಾರ್ ಆರಂಭ ಫಲಕ ತೋರಿದರು. ನಿರ್ಮಾಪಕಿ ಸವಿತಾ ಶ್ರೀನಿವಾಸ್ ಕ್ಯಾಮೆರಾ ಚಾಲನೆ ಮಾಡಿದರು. ತೇಜು ಜಗದೀಶ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಮಂಡ್ಯ, ಮದ್ದೂರು, ಪಾಂಡವಪುರ, ಬೆಂಗಳೂರು, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸುನಿ ರಾಜ್ ಕಥೆ ಬರೆದಿದ್ದಾರೆ. ನಿರಂಜನ್ ಹಾಗೂ ಶರಣ್ರಾಜ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಹರ್ಷಿತಾ ರೆಡ್ಡಿ. ಶೋಭರಾಜ್, ಕುರಿಬಾಂಡ್ ರಂಗ, ಗಣೇಶ್, ಜ್ಯೂನಿಯರ್ ನರಸಿಂಹ ರಾಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.