ಗಣರಾಜ್ಯೋತ್ಸವಕ್ಕೆ ನಟಸಾರ್ವಭೌಮ
Team Udayavani, Dec 4, 2018, 11:21 AM IST
ಪುನೀತ್ರಾಜಕುಮಾರ್ ಅಭಿನಯದ “ನಟಸಾರ್ವಭೌಮ’ ಚಿತ್ರ ಯಾವಾಗ ಬಿಡುಗಡೆಯಾಗುತ್ತೆ? ಇಂಥದ್ದೊಂದು ಪ್ರಶ್ನೆ ಎಲ್ಲರಲ್ಲೂ ಗಿರಕಿಹೊಡೆಯುತ್ತಲೇ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಹೊಸ ವರ್ಷಕ್ಕೆ ಪುನೀತ್ ಅಭಿಮಾನಿಗಳಿಗೆ “ನಟಸಾರ್ವಭೌಮ’ ಕೊಡುಗೆಯಾಗಲಿದೆ. ಹೌದು, ಜನವರಿ 26 ರ ಗಣರಾಜ್ಯೋತ್ಸವದಂದು ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಾಗುತ್ತಿದೆ.
ಅದಕ್ಕೂ ಮುನ್ನ, ಡಿಸೆಂಬರ್ ಅಂತ್ಯದಲ್ಲಿ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲು ತಯಾರಿಯೂ ನಡೆಯುತ್ತಿದೆ. ಸದ್ಯಕ್ಕೆ ಡಬ್ಬಿಂಗ್ ಕೆಲಸ ಕಾರ್ಯಗಳು ಮುಗಿದಿದ್ದು, ಹಿನ್ನೆಲೆ ಸಂಗೀತ ಮತ್ತು ಗ್ರಾಫಿಕ್ಸ್ ಕೆಲಸಗಳು ಜೋರಾಗಿ ನಡೆಯುತ್ತಿದೆ. “ನಟಸಾರ್ವಭೌಮ’ ಚಿತ್ರಕ್ಕೆ ಸಂಗೀತ ನಿರ್ದೇಶಕ ಡಿ.ಇಮಾನ್ ಅವರು ಒಳ್ಳೆಯ ಹಾಡುಗಳನ್ನು ಕಟ್ಟಿಕೊಟ್ಟಿದ್ದು, ನಾಲ್ಕು ಹಾಡುಗಳಿಗೆ ಜಯಂತ್ ಕಾಯ್ಕಿಣಿ, ಕವಿರಾಜ್,ಯೋಗರಾಜ್ಭಟ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಸಾಹಿತ್ಯವಿದೆ.
ಇತ್ತೀಚೆಗೆ ಚಿತ್ರದಲ್ಲಿನ ನಾಯಕ ಇಂಟ್ರೋಡಕ್ಷನ್ ಹಾಡನ್ನು ಅದ್ಧೂರಿ ವೆಚ್ಚದ ಸೆಟ್ನಲ್ಲಿ ನಿರ್ಮಿಸುವ ಮೂಲಕ ಚಿತ್ರತಂಡ ಚಿತ್ರಕ್ಕೆ ಕುಂಬಳಕಾಯಿ ಒಡೆದಿತ್ತು. ನಿರ್ದೇಶಕ ಪವನ್ ಒಡೆಯರ್ ಅವರೇ ಬರೆದಿರುವ “ನಟ ಸಾರ್ವಭೌಮ ಈ ಇಸ್ ಕಿಂಗ್ ಆಫ್ ದಿ ಸಿನಿಮಾ…’ ಎಂಬ ಈ ಹಾಡನ್ನು ಪವನ್ ಬರೆದಿದ್ದಾರೆ. ಆ ಹಾಡನ್ನು ಐದು ಕಡೆ ಭರ್ಜರಿ ಸೆಟ್ ಹಾಕಿ ಚಿತ್ರೀಕರಿಸಲಾಗಿತ್ತು.
ಕಲಾನಿರ್ದೇಶಕರಾದ ಗುಣ (ಭೂಪತಿ) ಅವರು ಹಾಕಿದ್ದ ಸೆಟ್ನಲ್ಲಿ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದರು. ರಾಕ್ಲೈನ್ ವೆಂಕಟೇಶ್ ನಿರ್ಮಾಣದ “ನಟಸಾರ್ವಭೌಮ’ ಚಿತ್ರಕ್ಕೆ ವೈದಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಅಂದಹಾಗೆ, ಪವನ್ ಒಡೆಯರ್ ಮತ್ತು ಪುನೀತ್ರಾಜಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರವಿದು. ಈ ಹಿಂದೆ ಪವನ್ ಒಡೆಯರ್, “ರಣವಿಕ್ರಮ’ ಮಾಡಿದ್ದರು.
ಈ ವರ್ಷ ಪುನೀತ್ರಾಜಕುಮಾರ್ ನಾಯಕರಾಗಿರುವ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಕಳೆದ ವರ್ಷ ಡಿಸೆಂಬರ್ನಲ್ಲಿ ಅವರ “ಅಂಜನಿಪುತ್ರ’ ಚಿತ್ರ ಬಿಡುಗಡೆಯಾಗಿತ್ತು. ಈಗ 2019ರ ಹೊಸ ವರ್ಷಕ್ಕೆ ಪುನೀತ್ ಚಿತ್ರ ಬಿಡುಗಡೆಯಾಗುವ ಮೂಲಕ ಅಭಿಮಾನಿಗಳು ಖುಷಿಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ