ಕನ್ನಡ ಶಾಲೆಗೆ ನೀತು ಬಣ್ಣ
Team Udayavani, Feb 1, 2022, 2:59 PM IST
ಕನ್ನಡದ ಅನೇಕ ನಟ-ನಟಿಯರು ಸರ್ಕಾರಿ ಶಾಲೆ ಉಳಿಸಿ ಅಭಿಯಾನದಲ್ಲಿ ಕೈ ಜೋಡಿಸುತ್ತಿದ್ದಾರೆ. ಈಗ ನೀತು ಕೂಡಾ ಈ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.
ಕುಂದಾಪುರ ಬಳಿಯ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿದ್ದಾರೆ. ಕನ್ನಡ ಮನಸ್ಸುಗಳು ಪ್ರತಿಷ್ಠಾನ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆ ಉಳಿಸಿ ಅಭಿಯಾನದಲ್ಲಿ ನೀತು ಭಾಗಿಯಾಗಿದ್ದಾರೆ.
ಈ ಬಗ್ಗೆ ಮಾತನಾಡುವ ನೀತು, “. ಕನ್ನಡ ಮನಸ್ಸುಗಳು ಪ್ರತಿಷ್ಠಾನ ಯಾವುದೇ ಸ್ವಾರ್ಥವಿಲ್ಲದೇ, ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಕನ್ನಡ ಉಳಿಯಬೇಕಾದರೆ, ಮೊದಲು ಮಕ್ಕಳು ಸರ್ಕಾರಿ ಶಾಲೆಗೆ ಬರಬೇಕು ಎಂಬ ಉದ್ದೇಶ ಅವರದು. ನಾನು ಇತ್ತೀಚೆಗೆ ಅವರ ಕಾರ್ಯದಲ್ಲಿ ಕೈ ಜೋಡಿಸಲಾರಂಭಿಸಿದ್ದೇನೆ’ ಎನ್ನುತ್ತಾರೆ.
‘ಸರಕಾರಿ ಶಾಲೆ ಉಳಿಸಿ ಅಭಿಯಾನ’- 11ನೇ ಶಾಲೆ!!
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರ್ಕುಂಜೆ!!#ಕನ್ನಡಮನಸುಗಳುಪ್ರತಿಷ್ಠಾನ
60ಕ್ಕೂ ಹೆಚ್ಚು ಸ್ವಯಂಸೇವಕರು ಬೆಳಿಗ್ಗೆ 7ಘಂಟೆಯಿಂದ ಕೆಲಸ ಮಾಡಿ ಈ ಶಾಲೆಗೆ ಬಣ್ಣ ಹಚ್ಚಿ ಚಂದವಾಗಿಸಿದ್ದಾರೆ.. ಅವರೊಂದಿಗೆ ನನ್ನ ಅಳಿಲು ಸೇವೆ!! pic.twitter.com/ddwIeZvnnb— Neethu (@NeetuShettySays) January 29, 2022