ನೆನಪಿರಲಿ ಪ್ರೇಮ್ 25ನೇ ಹೆಜ್ಜೆ
Team Udayavani, Mar 17, 2019, 5:41 AM IST
“ಲೈಫ್ ಜೊತೆ ಒಂದ್ ಸೆಲ್ಫೀ’ ಚಿತ್ರದ ಬಳಿಕ “ನೆನಪಿರಲಿ’ ಪ್ರೇಮ್ ಯಾವ ಚಿತ್ರ ಮಾಡಲಿದ್ದಾರೆ ಎಂಬ ಪ್ರಶ್ನೆ ಇತ್ತು. ಅದರಲ್ಲೂ ಅವರೀಗ ಮಾಡುವ ಚಿತ್ರ 25 ನೇ ಚಿತ್ರ ಎಂಬುದೂ ವಿಶೇಷ. ತಮ್ಮ 25 ನೇ ಚಿತ್ರ ವಿಶೇಷವಾಗಿರಬೇಕು ಎಂಬ ಕಾರಣಕ್ಕೆ ಪ್ರೇಮ್ ವಿಶೇಷ ಕಥೆಗಳ ಹುಡುಕಾಟದಲ್ಲಿದ್ದರು. ಇದೀಗ ಅವರ 25 ನೇ ಚಿತ್ರಕ್ಕೊಂದು ಹೊಸ ಬಗೆಯ ಕಥೆ ಸಿಕ್ಕಿದೆ. ಹಾಗಾಗಿ, 25 ನೇ ಸಿನಿಮಾ ಏಪ್ರಿಲ್ನಲ್ಲಿ ಭರ್ಜರಿಯಾಗಿ ಸೆಟ್ಟೇರಲಿದೆ ಎಂಬುದು ಈ ಹೊತ್ತಿನ ಸುದ್ದಿ.
ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳ ಕಾಲ ಸೋಲು-ಗೆಲುವನ್ನು ಕಂಡು ಇಂದಿಗೂ ರನ್ನಿಂಗ್ನಲ್ಲಿರುವುದು ಸುಲಭವಲ್ಲ. ಪ್ರೇಮ್ ಆ ವಿಷಯದಲ್ಲಿ ಲಕ್ಕಿ. ಅವರು ಯಶಸ್ಸು ಕಂಡವರು. ಹಾಗೆಯೇ ಸೋಲನ್ನೂ ಉಂಡವರು. ಈ ಎರಡನ್ನೂ ಪ್ರೀತಿಯಿಂದಲೇ ಸ್ವೀಕರಿಸಿದ್ದ ಪ್ರೇಮ್ ತಮ್ಮ 25 ನೇ ಚಿತ್ರದ ಕುರಿತು ಹೇಳುವುದು ಹೀಗೆ. “ಪ್ರತಿ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವನ 25 ನೇ ಸಿನಿಮಾ ಕೂಡ ಅಷ್ಟೇ ವಿಶೇಷ.
ನಾನೀಗ 25 ನೇ ಸಿನಮಾದ ಹೊಸ್ತಿಲಲ್ಲಿ ನಿಂತಿದ್ದೇನೆ. “ಲೈಫ್ ಜೊತೆ ಒಂದ್ ಸೆಲ್ಫೀ’ ಚಿತ್ರದ ಬಳಿಕ ಏನಿಲ್ಲವೆಂದರೂ ನಾನು ಸುಮಾರು 80 ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೇನೆ. ಆದರೆ, ಆ ಕಥೆಗಳು ನನ್ನಲ್ಲಿ ಅಷ್ಟೊಂದು ಭರವಸೆ ಮೂಡಿಸಲಿಲ್ಲ. ಆದರೆ, 25 ನೇ ಸಿನಿಮಾ ಮಾಡಲು ಸರಿಯಾದ ಕಥೆ ಎಂದೆನಿಸಿದ್ದರಿಂದ ಒಂದು ಕಥೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ತಯಾರಿ ನಡೆಸಿದ್ದೇನೆ’ ಎಂಬುದು ಪ್ರೇಮ್ ಮಾತು.
ಅಂದಹಾಗೆ, ಪ್ರೇಮ್ ಅಭಿನಯದ 25 ನೇ ಚಿತ್ರವನ್ನು ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ರಾಘವೇಂದ್ರ ಅವರಿಗೆ ಇದು ಮೊದಲ ಅನುಭವ. ಮೂಲತಃ ಮಂಡ್ಯದ ಕೆ.ಎಂ.ದೊಡ್ಡಿ ಗ್ರಾಮದವರಾದ ರಾಘವೇಂದ್ರ ಮಂಗಳೂರಿನಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದಾರೆ. “ಮೊದಲಿನಿಂದಲೂ ರಾಘವೇಂದ್ರ ಅವರಿಗೆ ಸಿನಿಮಾ ಮೇಲೆ ಆಸಕ್ತಿ ಇತ್ತು. ಒಳ್ಳೆಯ ಕಥೆ ಹೆಣೆದಿದ್ದರು. ನಾನು ಅದನ್ನು ಕೇಳಿದೊಡನೆ, ಇದೇ ನನ್ನ 25 ನೇ ಸಿನಿಮಾಗೆ ಸರಿಹೊಂದುವ ಕಥೆ ಅಂದುಕೊಂಡು ಒಪ್ಪಿದ್ದೇನೆ.
ಈ ಚಿತ್ರದಲ್ಲಿ ನನ್ನದು ನಾಲ್ಕು ಶೇಡ್ಗಳಿರುವ ಪಾತ್ರವಿದೆ. ರೆಗ್ಯುಲರ್ ಫಾರ್ಮೆಟ್ನಿಂದ ಹೊರಗಿರುವ ಚಿತ್ರ ಇದಾಗಲಿದೆ. ಉಳಿದಂತೆ ಇಲ್ಲೂ ಕಾಮಿಡಿ, ಲವ್ ಸೆಂಟಿಮೆಂಟ್, ಫ್ಯಾಮಿಲಿ ಸೆಂಟಿಮೆಂಟ್ ಇದ್ದರೂ, ಅದರಾಚೆಗೆ ವಿಶೇಷವಾದಂತಹ ಸಂದೇಶವೂ ಇದೆ. ಅದನ್ನು ಚಿತ್ರದಲ್ಲೇ ನೋಡಬೇಕು. ಇನ್ನು, ಈ ಚಿತ್ರವನ್ನು ಡಾ.ರಕ್ಷಿತ್ ನಿರ್ಮಾಣ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶಕ ರಾಘವೇಂದ್ರ ಅವರೇ ಸಂಗೀತವನ್ನೂ ನೀಡುತ್ತಿದ್ದಾರೆ.
ತುಂಬಾ ವರ್ಷಗಳ ಕಾಲ ಹೋಮ್ವರ್ಕ್ ಮಾಡಿಕೊಂಡೇ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ನಿರ್ದೇಶಕರ ಸಿನಿಮಾ ಪ್ರೀತಿ ಎಷ್ಟಿದೆ ಎಂಬುದು ಅವರ ಸ್ಕ್ರಿಪ್ಟ್ನಲ್ಲೇ ಗೊತ್ತಾಗುತ್ತದೆ’ ಎಂದು ವಿವರಿಸುವ ಪ್ರೇಮ್, ಸದ್ಯಕ್ಕೆ ಶೀರ್ಷಿಕೆ ಪಕ್ಕಾ ಆಗಿಲ್ಲ. ನಾಯಕಿ ಯಾರೆಂಬುದು ಗೊತ್ತಿಲ್ಲ. ಯಾರೆಲ್ಲ ಕಲಾವಿದರು ಇರುತ್ತಾರೆ ಎಂಬುದಕ್ಕೆ ಇನ್ನೂ ಸಮಯವಿದೆ. ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯುತ್ತಿದೆ’ ಎನ್ನುತ್ತಾರೆ ಪ್ರೇಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
MUST WATCH
ಹೊಸ ಸೇರ್ಪಡೆ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ