ಹೊಸ ಪಾತ್ರ, ಹೊಸ ನಿರೀಕ್ಷೆ
ಆದಿತ್ಯ ನಾಯಕನಾಗಿ ಮುಂದುವರೆದ ಅಧ್ಯಾಯ...
Team Udayavani, Feb 5, 2020, 7:03 AM IST
ಆದಿತ್ಯ ನಾಯಕರಾಗಿರುವ “ಮುಂದುವರೆದ ಅಧ್ಯಾಯ’ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ದರ್ಶನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಟ್ರೇಲರ್ ಬಿಡುಗಡೆ ವೇಳೆ ಕನ್ನಡ ಚಿತ್ರರಂಗದ ನಿರ್ದೇಶಕರನ್ನು ನೆನೆದ ಚಿತ್ರತಂಡ, ಅವರ ಕುರಿತಾದ ಒಂದು ಎವಿ ಪ್ಲೇ ಮಾಡಿತು.
ಜೊತೆಗೆ ಆದಿತ್ಯ ಅವರನ್ನು ನಿರ್ದೇಶಿಸಿದ ನಿರ್ದೇಶಕರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಇದೇ ವೇಳೆ ಮಾತನಾಡಿದ ನಾಯಕ ಅದಿತ್ಯ, “ಸ್ಟಾರ್ ಬಾರ್ನ್ ಅಲ್ಲ, ಸ್ಟಾರ್ ಇಸ್ ಮೇಡ್. ಒಬ್ಬ ನಿರ್ದೇಶಕ ತನ್ನ ಕಲ್ಪನೆ ತಕ್ಕಂತೆ ಹೀರೋನಾ ರೆಡಿ ಮಾಡಿ ತೋರಿಸುವ ಮೂಲಕ ಸ್ಟಾರ್ ಹುಟ್ಟುತ್ತಾನೆ. ನನ್ನ ಪ್ರಕಾರ, ಚಿತ್ರರಂಗದಲ್ಲಿ ನಿರ್ದೇಶಕ ಅಲ್ಟಿಮೇಟ್’ ಎಂದರು.
“ಮುಂದುವರೆದ ಅಧ್ಯಾಯ’ ಚಿತ್ರ ಹೊಸ ಬಗೆಯಿಂದ ಕೂಡಿದ್ದು, ಇಲ್ಲಿಂದ ಹೊಸ ಅಧ್ಯಾಯ ಆರಂಭವಾಗುವ ನಿರೀಕ್ಷೆ ಅದಿತ್ಯ ಅವರಿಗಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಚಿತ್ರದಲ್ಲಿ ಅದಿತ್ಯ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಬಾಲು ಚಂದ್ರಶೇಖರ್ ನಿರ್ದೇಶಿಸಿದ್ದು, ಕಣಜ ಎಂಟರ್ಪ್ರೈಸಸ್ನಡಿ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ