ಹರಿಕತೆ ಅಲ್ಲ ಗಿರಿಕತೆ ನಿರ್ದೇಶಕ ಬದಲು
ಒಬ್ಬರ ಜಾಗಕ್ಕೆ ಇಬ್ಬರು ಬಂದ್ರು!
Team Udayavani, Dec 2, 2020, 10:41 AM IST
ನಟ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಹೊಸಚಿತ್ರ “ಹರಿಕತೆ ಅಲ್ಲ ಗಿರಿಕತೆ’ಯ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೇ ಚಿತ್ರದ ಒಂದಷ್ಟು ಭಾಗ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಬಾಕಿಯಿರುವ ಚಿತ್ರದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ನಡುವೆಯೇ, “ಹರಿಕತೆ ಅಲ್ಲ ಗಿರಿಕತೆ’ ಚಿತ್ರದ ನಿರ್ದೇಶಕ ಗಿರೀಶ್ಕೃಷ್ಣ ಬದಲಾಗಿರುವ ಸುದ್ದಿ ಚಿತ್ರತಂಡದಕಡೆಯಿಂದ ಹೊರಬಿದ್ದಿದೆ.
ಹೌದು, ಸಾಮಾನ್ಯವಾಗಿ ಯಾವುದೇ ಚಿತ್ರದಲ್ಲಿ ಅದರ ನಿರ್ದೇಶಕರು ಅರ್ಧಕ್ಕೆ ಹೊರನಡೆದರೆ, ಅದಕ್ಕೆ ಚಿತ್ರತಂಡದೊಂದಿಗಿನ ಹೊಂದಾಣಿಕೆಯಕೊರತೆ, ಅಸಮಾಧಾನವೇ ಹೆಚ್ಚಾಗಿ ಕಾರಣವಾಗಿರುತ್ತದೆ. ಆದರೆ “ಹರಿಕತೆ ಅಲ್ಲ ಗಿರಿಕತೆ’ ಚಿತ್ರದ್ದು ಬೇರೆಯದ್ದೇಕತೆ. ಈ ಚಿತ್ರದ ನಿರ್ದೇಶಕ ಗಿರೀಶ್ಕೃಷ್ಣ,ಅವರಿಗೆ ಆರೋಗ್ಯ ಸಮಸ್ಯೆ ಎದುರಾದಕಾರಣ ಅವರು ಚಿತ್ರ ನಿರ್ದೇಶನಕಾರ್ಯದಿಂದ ಹಿಂದೆ ಸರಿದಿದ್ದಾರೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು. ಸದ್ಯ ಗಿರೀಶ್ಕೃಷ್ಣ ಅವರಿಂದ ತೆರವಾದ ನಿರ್ದೇಶಕನ ಸ್ಥಾನವನ್ನುಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಎಂಬ ಇಬ್ಬರು ನವ ನಿರ್ದೇಶಕರು ತುಂಬುತ್ತಿದ್ದಾರೆ.
ಇದನ್ನೂ ಓದಿ : ವೇದಿಕಾ ಗ್ಲಾಮರಸ್ ಫೋಟೋ ವೈರಲ್
ಈಗಾಗಲೇ ಚಿತ್ರದ ಅನೇಕ ಕಲಾವಿದರು ಮತ್ತು ತಂತ್ರಜ್ಞರ ಡೇಟ್ಸ್ ಫೈನಲ್ ಆಗಿದ್ದರಿಂದ, ಚಿತ್ರೀಕರಣ ಮುಂದುವರೆಸಲೇಬೇಕಾದ ಅನಿವಾರ್ಯತೆ ಎದುರಾಗಿದ್ದು, ಹೀಗಾಗಿ ಗಿರೀಶ್ಕೃಷ್ಣ ಅವರ ಬದಲು ನಿರ್ದೇಶನದ ಜವಾಬ್ದಾರಿ ಹೊಸ ನಿರ್ದೇಶಕರ ಹೆಗಲೇರಿದೆ ಎಂದಿದೆ ಚಿತ್ರತಂಡ. “ಸಂದೇಶ್ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ತಯಾರಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು