ದೇಶದ ಭದ್ರತೆ ಸುತ್ತ ಹೊಸಬರ ಚಿತ್ರ “ಆಪರೇಶನ್ 72”
Team Udayavani, Jan 13, 2022, 4:10 PM IST
ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸ ಪ್ರತಿಭೆಗಳು ಬರುತ್ತಲೇ ಇರುತ್ತಾರೆ. ಈ ಮೂಲಕ ಹೊಸದನ್ನು ಪ್ರಯತ್ನಿಸುತ್ತಾರೆ. ಈಗ ಈ ಸಾಲಿಗೆ “ಆಪರೇಶನ್ 72′ ಎಂಬ ಚಿತ್ರವೊಂದು ಸದ್ದಿಲ್ಲದೇ ಸೆಟ್ಟೇರಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣದ ಜೊತೆಗೆ ಗೋಪಿನಾಥ್ ಶಿವಗಿರಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸತ್ಯ ಮೇವ ಜಯತೆ ಎಂಬ ಟ್ಯಾಗ್ಲೈನ್ ಇದೆ.
ಸಿನಿಮಾ ಕುರಿತು ಹೇಳುವುದಾದರೆ ನೆರೆಯ ದೇಶಗಳು ಗಡಿಭಾಗದಲ್ಲಿ ನಿರಂತರವಾಗಿ ಒತ್ತಡ ಹೇರುತ್ತಿರುವ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ತೋರಿಸಲಿದೆಯಂತೆ. ಜೈವಿಕ ಅಸ್ತ್ರಗಳ ಬಳಕೆ ಗಡಿಯಾಚೆಗಿನ ಭಯೋತ್ಪಾದನೆ, ದೆಹಲಿಯಲ್ಲಿ ಬಾಂಬ್ಗಳನ್ನು ಅಳವಡಿಸುವುದು. ಭಯೋತ್ಪಾದಕರಿಂದ ದೇಶದ ಪ್ರಮುಖ ನದಿಗಳಲ್ಲಿ ರಾಸಾಯನಿಕ ಆಧಾರಿತ ವಿಷವನ್ನು ಬೆರೆಸಿ ಯೋಜನೆ ಕಾರ್ಯಗತಗೊಳಿಸಿ ಭಾರತ ಸರ್ಕಾರವನ್ನು ಅಸ್ಥಿರಗೊಳಿಸುವುದು. ಇದಕ್ಕೆ ವಿರುದ್ಧವಾಗಿ ಸಮರ್ಥ ಪ್ರಧಾನ ಮಂತ್ರಿಗಳು ಸಂದರ್ಭಕ್ಕೆ ತಕ್ಕಂತೆ ಪ್ರತಿದಾಳಿಯನ್ನು ನಡೆಸಿ, ದೇಶದ ಸಾರ್ವಭೌಮತ್ವವನ್ನು ರಕ್ಷಿಸುತ್ತಾರೆ ಎಂಬ ಅಂಶ ಪ್ರಮುಖವಾಗಿದೆ.
ಇದನ್ನೂ ಓದಿ:ಸುನಿ ಮತ್ತೊಂದು ಸಿಂಪಲ್ ಲವ್ ಸ್ಟೋರಿ ರೆಡಿ?
ಚಿತ್ರಕ್ಕೆ ಆರೋನ್ ವೆಂಕಟೇಶ್ ಕಾರ್ತಿಕ್ ಸಂಗೀತ, ನರೇಹಳ್ಳಿ ರಾಮು ಛಾಯಾಗ್ರಹಣ, ಪ್ರವೀಣ್ -ನಾಗರಾಜ.ಡಿ.ಹೊಳ್ಳ ಸಂಕಲನವಿದೆ. ಬೆಂಗಳೂರು, ತಲಕಾಡು, ರಾಮನಗರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!