“ಅಂತರಂಗ ಶುದ್ಧಿ’ಯತ್ತ ಹೊಸಬರು


Team Udayavani, Oct 15, 2019, 3:01 AM IST

antaranga-shuddi

ಕನ್ನಡದಲ್ಲಿ ಹೊಸಬಗೆಯ ಸಿನಿಮಾಗಳಿಗೆ ಬರವಿಲ್ಲ. ಹಾಗೆಯೇ ಹೊಸತನದ ಶೀರ್ಷಿಕೆಗಳಿಗೇನೂ ಕಮ್ಮಿ ಇಲ್ಲ. ಈಗಾಗಲೇ ತಮ್ಮ ಶೀರ್ಷಿಕೆ ಮೂಲಕವೇ ಗಮನಸೆಳೆಯುತ್ತಿರುವ ಹೊಸಬರ ಚಿತ್ರಗಳ ಸಾಲಿಗೆ “ಇದೇ ಅಂತರಂಗ ಶುದ್ಧಿ’ ಎಂಬ ಸಿನಿಮಾ ಸೇರಿದೆ. ಹೌದು, ಶೀರ್ಷಿಕೆ ನೋಡಿದವರಿಗೆ ಇದು ಬಸವಣ್ಣನರ ತತ್ವಾದರ್ಶವಿರುವ ಸಿನಿಮಾನ ಎಂಬ ಪ್ರಶ್ನೆ ಕಾಡದೇ ಇರದು. ಆದರೆ, ಇಲ್ಲಿ ಬಸವಣ್ಣನವರ ತತ್ವಗಳಂತೆ, ಪ್ರತಿ ಪಾತ್ರಗಳಿಗೂ ಇಲ್ಲಿ ಶುದ್ಧೀಕರಣವಿದೆ.

ಪ್ರತಿ ಘಟನೆಗೂ ಶುದ್ಧಿಕರಣ ಬರುತ್ತೆ. ಹಾಗಾಗಿ, ಇದನ್ನೇ ಶೀರ್ಷಿಕೆಯನ್ನಾಗಿಸಿ, ಸಿನಿಮಾ ಮಾಡಿದ್ದಾರೆ. ಈ ಚಿತ್ರವನ್ನು ಕುಮಾರ್‌ ದತ್‌ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯದ ಜವಾಬ್ದಾರಿಯೂ ಅವರದೇ. ಇವರ ಕಥೆ ಕೇಳಿ ಅಭಿಲಾಶ್‌ ಚಕ್ಲ ಮತ್ತು ನವಜೀತ್‌ ಬುಲ್ಲಾರ್‌ ನಿರ್ಮಾಣ ಮಾಡುತ್ತಿದ್ದಾರೆ. “ಇದೇ ಅಂತರಂಗ ಶುದ್ಧಿ’ ಎಂಬ ಶೀರ್ಷಿಕೆ ಇದೆ ಎಂಬ ಕಾರಣಕ್ಕೆ, ಇದು ಬಸವಣ್ಣನವರಿಗೆ ಸಂಬಂಧಿಸಿದ ಚಿತ್ರ ಎಂದುಕೊಳ್ಳುವಂತಿಲ್ಲ ಎನ್ನುವ ನಿರ್ದೇಶಕರು, ಇಲ್ಲಿ ಐಕ್ಯತೆ ಸಾರುವ ಅಂಶಗಳಿವೆ.

ಪ್ರೇಮ, ಕಾಮ, ಆಸೆ, ಜಾತಿ, ಧರ್ಮ ಎಲ್ಲದ್ದಕ್ಕೂ ಸಂಬಂಧಿಸಿದ ವಿಷಯಗಳಿವೆ. ಪ್ರತಿ ಪಾತ್ರದಲ್ಲೂ ಹೊಸ ವಿಷಯವಿದೆ. ಹೊಸತಂಡ ಸೇರಿ ಮಾಡಿರುವ ಸಿನಿಮಾದಲ್ಲಿ ಶೇ.90 ರಷ್ಟು ಚಿತ್ರೀಕರಣ ಕಾರಲ್ಲೇ ನಡೆಯಲಿದೆ. ಉಳಿದ ಶೇ.10 ರಷ್ಟು ಚಿತ್ರೀಕರಣ ಹೊರಗಡೆ ನಡೆಯಲಿದೆ. ಇನ್ನೊಂದು ವಿಶೇಷವೆಂದರೆ, ರಾತ್ರಿ ವೇಳೆಯಲ್ಲೇ ಬಹುತೇಕ ಶೂಟಿಂಗ್‌ ಮಾಡಿದ್ದು, ಕ್ಲೈಮ್ಯಾಕ್ಸ್‌ ಭಾಗ ಮಾತ್ರ ಹಗಲಿನಲ್ಲಿ ನಡೆದಿದೆ’ಎಂದು ವಿವರಿಸುತ್ತಾರೆ ನಿರ್ದೇಶಕ ಕುಮಾರ್‌ ದತ್‌. ಚಿತ್ರದಲ್ಲಿ ಆರ್ಯವರ್ಧನ್‌ ಹೀರೋ. ಅವರಿಗೆ ಪ್ರತಿಭಾ ನಾಯಕಿ. ಚಿತ್ರದ ವಿಶೇಷವೆಂದರೆ, ಜನರೇಟರ್‌ ಇಲ್ಲದೆಯೇ, ಬೀದಿ ಲೈಟ್‌ನಲ್ಲೇ ಚಿತ್ರೀಕರಿಸಿ, ಹೊಸ ಪ್ರಯೋಗ ಮಾಡಲಾಗಿದೆ.

ಬಹುತೇಕ ಬೆಂಗಳೂರಿನ ರಸ್ತೆಗಳಲ್ಲೇ ಅದರಲ್ಲೂ ಕಾರಿನಲ್ಲೇ ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ. ಚಿತ್ರಕ್ಕೆ ಲವ್‌ ಮೆಹ್ತಾ ಸಂಗೀತವಿದೆ. ನಿರ್ದೇಶಕರ ಜೊತೆಗೆ ಜಗದೀಶ್‌ ಪಾಟೀಲ್‌ ಸಾಹಿತ್ಯ ಬರೆದಿದ್ದಾರೆ. ವಿನಯ್‌ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶ್ರೀಧರ್‌, ಸೂರಜ್‌, ಮಂಜುಳಾ ರೆಡ್ಡಿ, ರೂಪೇಶ್‌, ಪುನೀತ್‌ ಸೇರಿದಂತೆ ಹೊಸ ಪ್ರತಿಭೆಗಳಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಈಗ ಡಿಟಿಎಸ್‌ ಕಾರ್ಯದಲ್ಲಿದೆ. ಇಷ್ಟರಲ್ಲೇ ಸೆನ್ಸಾರ್‌ಗೆ ಹೋಗಲು ಸಜ್ಜಾಗುತ್ತಿದೆ.

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.