ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್ 1ಕ್ಕೆ ಟ್ರೇಲರ್, ಆ. 20ಕ್ಕೆ ಸಿನಿಮಾ ರಿಲೀಸ್
Team Udayavani, Jul 29, 2021, 11:19 AM IST
ತನ್ನ ಟೈಟಲ್, ಫಸ್ಟ್ಲುಕ್, ಮೇಕಿಂಗ್ ಮತ್ತು ಹಾಡುಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ “ನಿನ್ನ ಸನಿಹಕೆ’ ಚಿತ್ರ ಇದೇ ಆಗಸ್ಟ್ ನಲ್ಲಿ ತೆರೆಗೆ ಬರೋದಕ್ಕೆ ತಯಾರಾಗುತ್ತಿದೆ. ಇನ್ನು “ನಿನ್ನ ಸನಿಹಕೆ…’ ಚಿತ್ರದಲ್ಲಿ ಸೂರಜ್ ಗೌಡ ನಾಯಕನಾಗಿ ಅಭಿನಯಿಸಿದ್ದು, ತೆರೆಹಿಂದೆ ನಿರ್ದೇಶನದ ಜವಾಬ್ದಾರಿಯನ್ನೂ ಸೂರಜ್ ಅವರೇ ವಹಿಸಿಕೊಂಡಿದ್ದಾರೆ.
“ನಿನ್ನ ಸನಿಹಕೆ…’ ಚಿತ್ರದ ಮೂಲಕ ವರನಟ ಡಾ. ರಾಜಕುಮಾರ್ ಮೊಮ್ಮಗಳು, ನಟ ರಾಮಕುಮಾರ್ ಪುತ್ರಿ ಧನ್ಯಾ ರಾಮಕುಮಾರ್ ನಾಯಕ ನಟಿಯಾಗಿ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ “ನಿನ್ನ ಸನಿಹಕೆ’ ಚಿತ್ರ ಥಿಯೇಟರ್ಗೆ ಬಂದಿರಬೇಕಿತ್ತು. ಈ ವರ್ಷದ ಆರಂಭದಿಂದಲೇ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದ ಚಿತ್ರತಂಡ, ಇದೇ ಏಪ್ರಿಲ್ನಲ್ಲಿ “ನಿನ್ನ ಸನಿಹಕೆ’ ಚಿತ್ರವನ್ನು ಪ್ರೇಕ್ಷಕರ ಸನಿಹಕೆ ತರುವ ಯೋಜನೆ ಹಾಕಿಕೊಂಡಿತ್ತು. ಆದರೆ ಕೋವಿಡ್ ಎರಡನೇ ಅಲೆಯ ಆತಂಕ ಮತ್ತು ಲಾಕ್ಡೌನ್ನಿಂದಾಗಿ ಚಿತ್ರದ ಬಿಡುಗಡೆಯನ್ನು ಕೆಲಕಾಲ ಮುಂದೂಡಿದ್ದ, ಚಿತ್ರತಂಡ ಇದೀಗ ಮತ್ತೆ “ನಿನ್ನ ಸನಿಹಕೆ’ ಚಿತ್ರವನ್ನು ಥಿಯೇಟರ್ಗೆ ತರುವ ಕಸರತ್ತು ಆರಂಭಿಸಿದೆ.
ಇದನ್ನೂ ಓದಿ:ಬ್ಯಾಕ್ ಟು ಬ್ಯಾಕ್ ಧನಂಜಯ್ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ
ಇದೇ ಆಗಸ್ಟ್ 1ರಂದು”ನಿನ್ನ ಸನಿಹಕೆ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಆಗ ಸ್ಟ್20ಕ್ಕೆ ಚಿತ್ರವನ್ನು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ.
ಇನ್ನು ಈಗಾಗಲೇ ಬಿಡುಗಡೆ ಯಾಗಿರುವ “ನಿನ್ನ ಸನಿಹಕೆ ‘ ಚಿತ್ರದ ಹಾಡುಗಳು ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, “ಮಳೆ ಮಳೆ ಮಳೆಯೇ…’ ಹಾಗೂ “ನೀ ಪರಿಚಯ…’ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿವೆ.
ಇದೀಗ ಚಿತ್ರದ ಪ್ರಚಾರ ಭಾಗವಾಗಿ “ನೀ ಪರಿಚಯ…’ ಹಾಡಿಗೆ ಚಿತ್ರದ ನಾಯಕ ಸೂರಜ್ ಗೌಡ ಮತ್ತು ನಾಯಕಿ ಧನ್ಯಾ ಇಬ್ಬರೂ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸೂರಜ್ ಮತ್ತು ಧನ್ಯಾ ಹಾಡಿರೋ ಈ ಕವರ್ ಸಾಂಗ್ ರಿಲೀಸ್ ಮಾಡಿದ್ದು, ಇಬ್ಬರು ಹಾಡಿರೋ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಒಟ್ಟಾರೆ ಲಾಕ್ಡೌನ್ ಬಳಿಕ ಒಂದಷ್ಟು ಸೌಂಡ್ ಮಾಡುತ್ತಿರುವ “ನಿನ್ನ ಸನಿಹಕೆ’ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ ಅನ್ನೋ ಕುತೂಹಲಕ್ಕೆ ಇದೇ ಆಗಸ್ಟ್ನಲ್ಲಿ ಉತ್ತರ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ