ಎ. 8-11: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
Team Udayavani, Apr 5, 2019, 10:38 AM IST
ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯ ವತಿಯಿಂದ ಪ್ರತಿ ವರ್ಷ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೂರನೇ ಆವೃತ್ತಿಯು ಎ. 8 ರಿಂದ 11ರ ವರೆಗೆ ನಗರದ ಭಾರತ್ ಮಾಲ್ನ ಬಿಗ್ ಸಿನಿಮಾಸ್ನಲ್ಲಿ ನಡೆಯಲಿದೆ.
ನಿರ್ದೇಶಕ ಪಿ. ಶೇಷಾದ್ರಿ ಉದ್ಘಾಟಿ ಸಲಿದ್ದಾರೆ. ಎನ್ಐಎಫ್ಎಫ್, ಖ್ಯಾತ ನಿರ್ದೇಶಕರ ಮೂಕಜ್ಜಿಯ ಕನಸುಗಳು ಚಿತ್ರ ಪ್ರದರ್ಶನದೊಂದಿಗೆ ಉದ್ಘಾಟನೆಗೊಳ್ಳಲಿದೆ.
ಈ ಮಾ ಯು (ಮಲೆಯಾಳಂ), ಕಾಲ (ತಮಿಳು), ಪಡ್ಡಾಯಿ (ತುಳು), ಅಕ್ಟೋಬರ್ (ಹಿಂದಿ), ತುಂಬ್ಬದ್ (ಹಿಂದಿ), ರೇಡು (ಮರಾಠಿ), ದಿಥಿ (ಮರಾಠಿ), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡು (ಕನ್ನಡ), ಅಭ್ಯಕೊ¤ (ಬಂಗಾಳಿ). ಚಿತ್ರೋತ್ಸವದ ಸಮಾಪ್ತಿ ಚಿತ್ರವಾಗಿ ಕುಂಬಲಾಂಗಿ (ಮಲೆಯಾಳಂ) ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಈ ಬಾರಿ ಹಿಂದಿ, ತುಳು, ಕನ್ನಡ, ಮಲಯಾಳ, ಉರ್ದು, ಬಂಗಾಲಿ, ಮರಾಠಿ, ತೆಲುಗು, ತಮಿಳು, ಪೋರ್ಚುಗೀಸ್ ಮತ್ತು ಫ್ರೆಂಚ್ ಭಾಷೆಯ ಚಿತ್ರಗಳು ಸೇರಿದಂತೆ 70 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ನಾಲ್ಕು ದಿನಗಳ ಅವಧಿಯಲ್ಲಿ ಭಾರತ್ ಸಿನಿಮಾಸ್ನ ಮೂರು ಪರದೆಗಳನ್ನು ಪ್ರತ್ಯೇಕವಾಗಿ ಚಿತ್ರೋತ್ಸವಕ್ಕೆ ಮೀಸಲಿಡಲಾಗಿದೆ.
ಸಂವಾದಕ್ಕೆ ಅವಕಾಶ
ಅತಿಥಿಗಳಾಗಿ ನಿರ್ದೇಶಕ ನಟ ರಿಷಭ್ ಶೆಟ್ಟಿ, ಸುಮಿತ್ರಾ ಭಾವೆ, ವೈದೇಹಿ, ವೀಣಾ ಬಕ್ಷಿ, ಅಭಯಸಿಂಹ, ಅಂಜಲಿ ಪಾಟೀಲ್, ಜಯಪ್ರಕಾಶ್ ರಾಧಾಕೃಷ್ಣನ್, ಸಂಚಾರಿ ವಿಜಯ್, ಅಜಾಜ್ ಖಾನ್ ಮತ್ತು ಪ್ರಿಯಾ ಕೃಷ್ಣಸ್ವಾಮಿ ಆಗಮಿಸಲಿದ್ದಾರೆ. ಪ್ರತಿ ಚಿತ್ರ ಪ್ರದರ್ಶನದ ಬಳಿಕ ಆಯಾ ಚಿತ್ರದ ನಿರ್ಮಾಪಕರ ಜತೆ ಸಂವಾದಕ್ಕೆ ಅವಕಾಶ ಇರುತ್ತದೆ.
ರಾಷ್ಟ್ರಪ್ರಶಸ್ತಿ ಪಡೆದ ಚಿತ್ರವಿಮ ರ್ಶಕ ಮನು ಚಕ್ರವರ್ತಿ ಅವರು ಪಿ. ಶೇಷಾದ್ರಿ ಅವರ ಜತೆ, “ಪಠ್ಯವಾಗಿ ಚಿತ್ರ: ಶಿವರಾಮಕಾರಂತರ ಬರಹ ಗಳನ್ನು ಸಿನೆಮಾ ಮೂಲಕ ಅರ್ಥ ಮಾಡಿಕೊಳ್ಳುವುದು’ ಎಂಬ ವಿಚಾರದ ಬಗ್ಗೆ ಎ. 8ರಂದು ಸಂಜೆ 5.15ಕ್ಕೆ ಸಂವಾದ ನಡೆಸಿಕೊಡಲಿದ್ದಾರೆ. ಎ. 9ರಂದು ಸಂಜೆ 7 ಗಂಟೆಗೆ ಖ್ಯಾತ ಚಿತ್ರ ವಿಮರ್ಶಕರಾದ ಭಾರದ್ವಾಜ್ ರಂಗನ್, ಸೌಮ್ಯಾ ರಾಜೇಂದ್ರನ್ ಮತ್ತು ರೋಶನ್ ನಾಯರ್ ಅವರನ್ನೊಳಗೊಂಡ ಗುಂಪು ಚರ್ಚೆಯೂ ಇರುತ್ತದೆ. ಈ ಗೋಷ್ಠಿಯಲ್ಲಿ ಖ್ಯಾತ ಚಿತ್ರ ನಿರ್ಮಾಪಕ ಅಜೀಜ್ ಖಾನ್ ನಿರ್ವಹಿಸಲಿದ್ದಾರೆ.
ಎಲ್ಲ ಚಿತ್ರಗಳನ್ನು ಉಚಿತವಾಗಿ ವೀಕ್ಷಿಸಲು ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಮೊದಲು ಬಂದವರಿಗೆ ಮೊದಲು ಆದ್ಯತೆಯಂತೆ ಪ್ರವೇಶ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ