ಯಶ್‌ ಬರ್ತ್‌ಡೇಗೆ ‘ಕೆಜಿಎಫ್ 2’ ಟ್ರೇಲರ್‌ ಬರಲ್ಲ


Team Udayavani, Dec 26, 2021, 10:57 AM IST

yash-kgf

ಕೆಜಿಎಫ್-2 ಚಿತ್ರಕ್ಕಾಗಿ ಭಾರತೀಯ ಚಿತ್ರರಂಗವೇ ಕಾಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿ ದಾಖಲೆ ಬರೆದಿದೆ. ಈಗ ಚಿತ್ರದ ಟ್ರೇಲರ್‌ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳದ್ದು. ಅದರಲ್ಲೂ ಜನವರಿ 8ರಂದು ಚಿತ್ರದ ಟ್ರೇಲರ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಅದಕ್ಕೆ ಕಾರಣ ಯಶ್‌ ಹುಟ್ಟುಹಬ್ಬ. ಜ.8 ಯಶ್‌ ಹುಟ್ಟುಹಬ್ಬದಂದು ಚಿತ್ರದ ಟ್ರೇಲರ್‌ ಅನ್ನು ಚಿತ್ರತಂಡ ಗಿಫ್ಟ್ ಆಗಿ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ನಟ ಯಶ್‌ ಅಂದು ಟ್ರೇಲರ್‌ ರಿಲೀಸ್‌ ಆಗುವುದಿಲ್ಲ ಎಂದಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಅವರು, “ಜ.8 ನನ್ನ ಹುಟ್ಟುಹಬ್ಬ. ಆಂದು ಟ್ರೇಲರ್‌ ಬಿಡುಗಡೆ ಮಾಡಿದರೆ ತುಂಬಾನೇ ಬೇಗ ಬಿಡುಗಡೆ ಮಾಡಿದಂತಾಗುತ್ತದೆ. ಏಕೆಂದರೆ ಚಿತ್ರ ಏಪ್ರಿಲ್‌ 14ಕ್ಕೆ ಬಿಡುಗಡೆ ಇರುವುದರಿಂದ ದೊಡ್ಡ ಗ್ಯಾಪ್‌ ಆಗುತ್ತದೆ’ ಎಂದಿದ್ದಾರೆ. ಈ ಮೂಲಕ ಟ್ರೇಲರ್‌ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ತೊಂದರೆಯಾಗುವಂತಹ ಬಂದ್‌ ಬೇಡ: ನಟ ಯಶ್

ಹುಟ್ಟುಹಬ್ಬ ಆಚರಣೆ ಇಲ್ಲ

ಕಳೆದೆರಡು ವರ್ಷಗಳಿಂದ ಯಾವುದೇ ಸ್ಟಾರ್‌ ನಟರು ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸುತ್ತಿಲ್ಲ. ಯಶ್‌ ಕೂಡಾ ಹುಟ್ಟುಹಬ್ಬದಿಂದ ದೂರವೇ ಇದ್ದರು. ಈ ವರ್ಷ ಕೂಡಾ ಇದ್ದಲ್ಲಿಂದಲೇ ಹುಟ್ಟುಹಬ್ಬಕ್ಕೆ ಶುಭಕೋರುವಂತೆ ಮನವಿ ಮಾಡಿದ್ದಾರೆ. “ನನ್ನ ಹುಟ್ಟುಹಬ್ಬವೆಂದರೆ ಅದು ನನ್ನದಲ್ಲ. ಅದು ಅಭಿಮಾನಿಗಳದ್ದು. ಆದರೆ, ಈಗ ಸಮಯ ಸರಿಯಿಲ್ಲ. ಇಷ್ಟು ವರ್ಷ ಕಾದಿದ್ದೇವೆ, ಇನ್ನೊಂದು ಸ್ವಲ್ಪ ಸಮಯ ಕಾಯುವ. ಈ ವರ್ಷವೂ ಹುಟ್ಟುಹಬ್ಬ ಆಚರಣೆ ಬೇಡ. ನೀವು ಇದ್ದಲ್ಲಿಂದಲೇ ವಿಶ್‌ ಮಾಡಿ, ಇದು ಅಭಿಮಾನಿಗಳಲ್ಲಿ ನನ್ನ ಮನವಿ’ ಎಂದರು.

ಗಡ್ಡ ಎಂದರೆ ನನಗೆ ಇಷ್ಟ

“ಕೆಜಿಎಫ್’ ಚಿತ್ರಕ್ಕಾಗಿ ಯಶ್‌ ಗಡ್ಡ ಬಿಟ್ಟಿರೋದು ನಿಮಗೆ ಗೊತ್ತೇ ಇದೆ. ಎರಡು ಭಾಗಗಳ ಚಿತ್ರೀಕರಣ ಮುಗಿದರೂ ಅವರ ಗಡ್ಡಕ್ಕೆ ಮುಕ್ತಿ ಸಿಕ್ಕಿಲ್ಲ. ಹಾಗಾದರೆ, ಯಶ್‌ ಹೊಸ ಲುಕ್‌ ಯಾವಾಗ, ಗಡ್ಡಕ್ಕೆ ಕತ್ತರಿ ಬೀಳುತ್ತಾ ಎಂದರೆ, “ಗಡ್ಡ ಎಂದರೆ ನನಗೆ ಇಷ್ಟ. ಅದಕ್ಕಿಂತ ಹೆಚ್ಚಾಗಿ ನಾನು ಆರಂಭದಿಂದಲೂ ಗಡ್ಡ ಬಿಟ್ಟಿದ್ದೇನೆ. ನನ್ನ ಆರಂಭಿಕ ಸಿನಿಮಾಗಳಲ್ಲೂ ಟ್ರಿಮ್‌ ಮಾಡಿ ಗಡ್ಡ ಇತ್ತು. ಈಗ ಗಡ್ಡಕ್ಕೆ ಯಾವಾಗ ಮುಕ್ತಿ ಎಂಬುದು ನನಗೇ ಗೊತ್ತಿಲ್ಲ’ ಎಂದು ನಗುತ್ತಾರೆ.

ಮತ್ತೂಂದು ದೊಡ್ಡ ಹೆಜ್ಜೆಗೆ ತಯಾರಿ

ಯಶ್‌ “ಕೆಜಿಎಫ್-2′ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಆ ಸಿನಿಮಾದಲ್ಲಿ ಕೆಲಸ ಮಾಡಿದವರೆಲ್ಲರೂ ಈಗ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಯಶ್‌ ಮಾತ್ರ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಹಾಗಾದರೆ, ಯಶ್‌ ಯಾಕೆ ಯಾವ ಸಿನಿಮಾವನ್ನು ಒಪ್ಪಿಲ್ಲ, ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬ ಪ್ರಶ್ನೆ ಸಹಜ. ಇದಕ್ಕೆ ಯಶ್‌ ಉತ್ತರಿಸೋದು ಹೀಗೆ “ಒಂದು ಸಿನಿಮಾ ಪೂರ್ಣವಾದ ಮೇಲೆಯೇ ನಾನು ಇನ್ನೊಂದು ಸಿನಿಮಾ ಒಪ್ಪೋದು. ಅದಕ್ಕಿಂತ ಹೆಚ್ಚಾಗಿ ನನಗೆ ಮನೆಯಲ್ಲೂ ಸಿನಿಮಾ ಮಾಡಲೇಬೇಕು ಎಂಬ ಪ್ರಶರ್‌ ಇಲ್ಲ. ದುಡಿಲೇಬೇಕು ಅಥವಾ ದುಡ್ಡಿಗೋಸ್ಕರನೇ ಕೆಲಸ ಮಾಡ್ತೀನಿ ಅಂತೇನೂ ಇಲ್ಲ. ಒಳ್ಳೆಯ ಕೆಲಸ ಮಾಡಬೇಕು. ಈ ಸ್ಥಾನ ಜನಗಳು ಕೊಟ್ಟಿರೋದು ಅದನ್ನು ಉಳಿಸಿಕೊಮಡು ಹೋಗಬೇಕು. ಇವತ್ತು ಯಾವುದೇ ಭಾಷೆಯ ಯಾವುದೇ ಸಿನಿಮಾ ಬಂದ್ರು ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಒಂದು ಕೆಲಸ ಆಗಿದೆ. ಮುಂದಿನ ಹೆಜ್ಜೆಯೂ ಹಾಗೇ ಇರಬೇಕೆಂಬುದು ನನ್ನ ಆಸೆ. ಕೆಜಿಎಫ್ 1 ಎಲ್ಲರೂ ನೋಡಿದ್ದಾರೆ. ಕೆಜಿಎಫ್ 2 ಹೇಗಿದೆ ಎಂಬುದು ನನಗೆ ಗೊತ್ತು. ನಾವು ಏನು ಸೃಷ್ಟಿ ಮಾಡ್ತಿವೋ, ಅದೇ ನಮಗೆ ದೊಡ್ಡ ಕಾಂಪಿಟೇಶನ್‌. ಮುಂದೆ ಏನು ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಅದಕ್ಕೆ ಸ್ವಲ್ಪ ಸಮಯಬೇಕಾಗುತ್ತದೆ’ ಎನ್ನುವ ಮೂಲಕ ತಮ್ಮ ಮುಂದಿನ ಸಿನಿಮಾ ಕೂಡಾ ದೊಡ್ಡ ಹೆಜ್ಜೆಯಾಗಿರುತ್ತದೆ ಎಂಬ ಸುಳಿವು ನೀಡುತ್ತಾರೆ ಯಶ್‌.

ಟಾಪ್ ನ್ಯೂಸ್

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.