ನಾನ್‌ಸ್ಟಾಪ್‌ ಮ್ಯೂಸಿಕಲ್‌ ಸಿನಿಮಾ

ಕನಸುಗಾರನ ಹೊಸ ಕನಸು

Team Udayavani, Nov 3, 2019, 5:03 AM IST

RAVICHANDRAN

ರವಿಚಂದ್ರನ್‌ ಕನಸುಗಾರ. ಇದು ಗೊತ್ತಿರದ ವಿಷಯವೇನಲ್ಲ. ಅವರು ಕಂಡ ಬೆಟ್ಟದಷ್ಟು ಕನಸುಗಳಲ್ಲಿ ಅದೆಷ್ಟೋ ನನಸಾಗಿವೆ. ಅವರು ಕೊಟ್ಟ ಯಶಸ್ಸುಗಳ ಸರಮಾಲೆ ಕಣ್ಣ ಮುಂದಿವೆ. ಈಗ ರವಿಚಂದ್ರನ್‌ ಅವರ ಮೂರು ದಶಕದ ಕನಸೊಂದು ನನಸಾಗುವ ಸಮಯ ಹತ್ತಿರವಾಗುತ್ತಿದೆ. ಆ ಕನಸು ಬೇರೇನೂ ಅಲ್ಲ, ನಾನ್‌ಸ್ಟಾಪ್‌ ಮ್ಯೂಸಿಕಲ್‌ ಸಿನಿಮಾ ಮಾಡಬೇಕೆಂಬುದೇ ಅವರ ಬಹುದೊಡ್ಡ ಕನಸು. ಆ ಕನಸು ಕುರಿತು ರವಿಚಂದ್ರನ್‌ ಹೇಳಿದ್ದಿಷ್ಟು…

* ಅದು “ಪ್ರೇಮಲೋಕ’ ನಂತರದ ಆಸೆ. 1986 ರ ಆಸುಪಾಸಿನಲ್ಲಿ ನಾನ್‌ಸ್ಟಾಪ್‌ ಮ್ಯೂಸಿಕಲ್‌ ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟುಕೊಂಡಿತು. ಬೇಸಿಕಲಿ ನಾನು ಒಂದು ವಿಷಯ ಯೋಚಿಸಿ, ಅದನ್ನು ಮನಸ್ಸಿಗೆ ಹಾಕಿಕೊಂಡರೆ, ಅದು ಒಳಗೊಳಗೇ ಚರ್ಚೆ ನಡೆಸುತ್ತಿರುತ್ತೆ. ಅದು ನನಗೂ ಗೊತ್ತಿರಲ್ಲ. ಆ ಹುಡುಕಾಟ ನನ್ನೆದೆಯಲ್ಲಷ್ಟೇ ಇರುತ್ತೆ. ನಾನು ಹಂಸಲೇಖರನ್ನ ಬಿಡುವ ಸಮಯದಲ್ಲಿ ನನಗೊಂದು ರಾತ್ರಿ ಕನಸು ಬೀಳುತ್ತೆ. ಆಗ ಎದ್ದೇಳುತ್ತೇನೆ. ತಕ್ಷಣವೇ, ಬರೆಯಲು ಕೂರುತ್ತೇನೆ. ಹಾಗೆ ಬರೆದಾಗ, ಒಂದೊಳ್ಳೆಯ ಕಥೆ ಹುಟ್ಟುಕೊಳ್ಳುತ್ತೆ. ಫ್ರೇಮ್‌ ಟು ಫ್ರೇಮ್‌ ಕಥೆ ರೆಡಿ ಮಾಡಿದ್ದು ಗೊತ್ತೇ ಆಗಲಿಲ್ಲ. ನನ್ನ ಕೈಗಳೆಲ್ಲವೂ ಬೆವರಿದ್ದವು. ಕೇವಲ ಒಂದೂವರೆ ತಾಸಿನಲ್ಲೇ ಆ ರಾತ್ರಿ ಕಥೆ ರೆಡಿಯಾಗಿತ್ತು.

* ನಾನು ಮ್ಯೂಸಿಕಲ್‌ ಸಿನಿಮಾ ಮಾಡಬೇಕು ಎಂಬ ಆಸೆ ಬಂದಾಗಲೇ, ಸ್ಟುಡಿಯೋ ಕಟ್ಟಿದ್ದು, ಏನೇನೋ ಪ್ರಯತ್ನ ನಡೆಸಿದ್ದು. ಆದರೆ, ಅದ್ಯಾವುದೂ ನಾನು ಅಂದುಕೊಂಡಂತೆ ಆಗಲಿಲ್ಲ. ಎಲ್ಲವೂ ರೆಕಾರ್ಡ್‌ ಆಗುತ್ತಿತ್ತು. ಹಣ ಖರ್ಚು ಆಗುತ್ತಿತ್ತು. ಯಾರಿಗೂ ಹೇಳಲಿಲ್ಲ. ಯಾಕೆಂದರೆ, ಅದು ಒಂದು ಶೇಪ್‌ ಆಗಬೇಕಿತ್ತು. ಇಡೀ ಸಿನಿಮಾ ಸೌಂಡ್‌ ಎಫೆಕ್ಟ್ ವಿತ್‌ ರೆಕಾರ್ಡ್‌ ಆಗಬೇಕು. ಹೇಗೆಂದರೆ, ಗಾಳಿ ಸೌಂಡ್‌ ಬರುತ್ತೆ ಅಂದ್ರೆ ಗಾಳಿ ಸೌಂಡ್‌ ಕೇಳಿಸಬೇಕು. ಶೂ ಅಂದ್ರೆ, ಶೂ ಸೌಂಡ್‌ ಕೇಳಿಸಬೇಕು. ಗಡಿಯಾರ ಬಡಿದುಕೊಳ್ಳುತ್ತೆ ಅಂದ್ರೆ, ಅದರ ಸೌಂಡ್‌ ಹಾಕಬೇಕು. ಶೇ.60 ರಷ್ಟು ಎಫೆಕ್ಟ್ಸ್ ಹಾಕಬೇಕು. ಉಳಿದ ಶೇ.40 ರಷ್ಟು ಆಮೇಲೆ ಮಾಡ್ಕೊಬಹುದು. 2 ಗಂಟೆಗೆ ರೆಕಾರ್ಡ್‌ ಆಗಬೇಕು. ಸಿನಿಮಾ ಏನಿದೆ ಅನ್ನೋದು ಇಲ್ಲಿ ಕಾಣಿಸಬೇಕು. ಒಬ್ಬ ನಗ್ತಾನೆ, ನಡೆದುಕೊಂಡು ಬರ್ತಾನೆ ಅಂದರೆ ಫ್ರೇಮ್‌ನಲ್ಲಿ ಇರಬೇಕು ಅದು. ಅದು ನನ್ನ ಒನ್‌ ಆಫ್ ದಿ ಡ್ರೀಮ್‌ ಥಾಟ್‌. ಆದರೆ ಅದು ಶೇಪ್‌ ಆಗಲಿಲ್ಲ. ಮಾಡೋಕು ಸಾಧ್ಯವಾಗಲಿಲ್ಲ.

* ನನ್ನ ಮಗಳ ಹುಟ್ಟುಹಬ್ಬದ ದಿನ ಆ ಕನಸು ಚಿಮ್ಮಿದೆ. ಅ.18 ರಂದು ಮಗಳ ಬರ್ತ್‌ಡೇ. ಅಂದೇ ನನಗೆ ಡಾಕ್ಟರೇಟ್‌ ಕೊಡುತ್ತಿದ್ದೇವೆ ಎಂಬ ಫೋನ್‌ ಕಾಲ್‌ ಬರುತ್ತೆ. ಅದೇ ದಿನ ನಾನು ನನ್ನ ಕನಸಿನ ನಾನ್‌ಸ್ಟಾಪ್‌ ಮ್ಯೂಸಿಕಲ್‌ ಸಿನಿಮಾ ಕೆಲಸಕ್ಕೂ ಮುಂದಾಗ್ತಿàನಿ. ಸಂಗೀತ ನಿರ್ದೇಶಕ ಗೌತಮ್‌ ಸೇರಿದಂತೆ ಒಂದಷ್ಟು ಮಂದಿಯನ್ನು ಕರೆದೆ. ಸುಮಾರು 2 ಸಾವಿರ ಟ್ಯೂನ್‌ ಕಂಪೋಸ್‌ ಮಾಡಿಟ್ಟಿದ್ದನ್ನೆಲ್ಲಾ ಕೇಳಿಸಿದ್ದೇನೆ. ನಾನು ಅಂದು, ಇದನ್ನೇ ಬರೆಯುತ್ತೇನೆ ಅಂದುಕೊಂಡಿರಲಿಲ್ಲ. ಒಂದುವರೆ ಗಂಟೆಯಲ್ಲೇ ಕಥೆ ಬರೆದೆ. ಯಾವುದೇ ಸೀನ್‌ ಇರದೆ, ಹಾಡಲ್ಲೇ ಸಿನಿಮಾ ತೋರಿಸುತ್ತೇನೆ.

ಎರಡು ಗಂಟೆ ಸಂಗೀತವೇ ಇರುತ್ತೆ. ಅದು ಯಾರಿಗೂ ಬೋರ್‌ ಎನಿಸಬಾರದು. ಪ್ರತಿಯೊಂದು ಮ್ಯೂಸಿಕಲ್‌ನಲ್ಲೇ ಹೇಳಬೇಕು. ಸಾಂಗ್‌ ಮೂಲಕ ಸಿನಿಮಾ ಕಥೆ ಹೇಳಿಕೊಂಡು ಹೋಗಬೇಕು. ನನ್ನೊಳಗಿದ್ದ 30 ವರ್ಷದ ಪ್ರಶ್ನೆಗೆ ಈಗ ಒಂದು ದಾರಿ ಸಿಕ್ಕಿದೆ. “ರಾಜೇಂದ್ರ ಪೊನ್ನಪ್ಪ’, “ರವಿ ಬೋಪಣ್ಣ’ ಮುಗಿಯಬೇಕು ಜನವರಿ ನಂತರ ಮ್ಯೂಸಿಕ್‌ಗೆ ಕೂರುತ್ತೇನೆ. ಅದಕ್ಕೇ ಸಮಯ ಕೊಡ್ತೀನಿ. ಒಂದು ವರ್ಷ ಬರೀ ಸಂಗೀತಕ್ಕೆ ಸೀಮಿತ. ಒಂದು ಶೇಪ್‌ ಬರೋವರೆಗೆ ಕೆಲಸ ಆಗುತ್ತೆ. ಆ ಸಿನಿಮಾ ಎಲ್ಲಾ ಭಾಷೆಯಲ್ಲೂ ಬರುತ್ತೆ. ವಿಶ್ವದಾದ್ಯಂತ ಚಿತ್ರ ಬಿಡುಗಡೆ ಮಾಡ್ತೀನಿ. ಅ.18 ರಿಂದ ನನ್ನಲ್ಲಿ ಒಂದು ಬದಲಾವಣೆ ಆಗಿದೆ. ಬರೀ ಮಾತಲ್ಲಿ ಉತ್ತರಿಸಲ್ಲ. ಪರದೆ ಮೇಲೆ ನನ್ನ ಉತ್ತರ ಇರುತ್ತೆ. ಬಹುಶಃ ಆ ಸಿನಿಮಾ 2021, 2021 ಕ್ಕೆ ಆಗಬಹುದೇನೋ ಗೊತ್ತಿಲ್ಲ.

* ಎಲ್ಲರೂ ಮಣ್ಣಲ್ಲಿ ಬೀಜ ನೆಡುತ್ತಾರೆ. ನಾನು ಹೃದಯದಲ್ಲಿ ನೆಟ್ಟಿದ್ದೇನೆ. ನನಗೆ ಮಣ್ಣಿನ ಋಣವಿಲ್ಲ. ಹಾಗಾಗಿ ಮಣ್ಣನ್ನು ಖರೀದಿಸಿಲ್ಲ. ಹಣ್ಣು ಕೊಡುತ್ತೆ ಎಂಬ ನಂಬಿಕೆ ಇದೆ. ಯಾವಾಗ ಕೊಡುತ್ತೋ ಗೊತ್ತಿಲ್ಲ. ಈಗ ಆ ಸಮಯ ಬಂದಿದೆ ಅಂದುಕೊಂಡಿದ್ದೇನೆ. ಅದೊಂದು ಲವ್‌ ಸಬ್ಜೆಕ್ಟ್ ಆಗಿರುತ್ತೆ.ನನ್ನ ಮಗಳ ಬರ್ತ್‌ಡೇ ದಿನ ಆದ ಖುಷಿ, ನನ್ನ ವೃತ್ತಿ ಜೀವನದಲ್ಲೆಂದೂ ಆಗಿಲ್ಲ. ಸಕ್ಸಸ್‌ ಬಂದಾಗಲೂ ನಾನು ಅಷ್ಟೊಂದು ಖುಷಿ ಆಗಿಲ್ಲ. ನಾನ್‌ಸ್ಟಾಪ್‌ ಮ್ಯೂಸಿಕಲ್‌ ಸಿನಿಮಾ ನನ್ನ ಸ್ವಂತದ್ದು. “ಏಕಾಂಗಿ’ ರೀತಿಯ ಚಿತ್ರವದು. “ಏಕಾಂಗಿ’,”ಅಪೂರ್ವ’ ಹೊಸ ತರಹದ ಚಿತ್ರಗಳು. ಈ ಸಿನಿಮಾ ಕೂಡ ಅಪರೂಪದ ಚಿಂತನೆ ಇರುವಂಥದ್ದು. ಎರಡು ಗಂಟೆ ಹಾಡಲ್ಲೇ ಸಿನಿಮಾ ಕಟ್ಟಿಕೊಡೋದು ಚಾಲೆಂಜ್‌.

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.