ಅನೀಶ್ ಈಗ ಗಾಯಕ, ಇವನೊಬ್ಬ ಪೊರ್ಕಿ… ವಾಸು ಬಂದ ದಾರಿಬಿಡಿ
Team Udayavani, Jul 17, 2018, 4:11 PM IST
ಅನೀಶ್ ತೇಜಶ್ವರ್ ನಾಯಕ, ನಿರ್ಮಾಪಕರಾಗುವುದರ ಜೊತೆಗೆ ಗಾಯಕರೂ ಆಗಿದ್ದಾರೆ. ಹೌದು, ಹೀರೋ ಆಗಿದ್ದ ಅನೀಶ್ “ವಾಸು – ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೂಲಕ ನಿರ್ಮಾಪಕರಾದರು. ಈಗ ಅದೇ ಚಿತ್ರದಲ್ಲಿ ಹಾಡುವ ಮೂಲಕ ಗಾಯಕರೂ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅನೀಶ್ ತೇಜಶ್ವರ್ ಹಾಡಿದ್ದಾರೆ.
“ಅಲೆಮಾರಿ’ ಸಂತು ಬರೆದ “ಇವನೊಬ್ಬ ಪೊರ್ಕಿ, ಇವನೊಬ್ಬ ಕಂತ್ರಿ… ವಾಸು ಬಂದ ದಾರಿ ಬಿಡಿ…’ ಎಂಬ ಹಾಡಿಗೆ ಅನೀಶ್ ಧ್ವನಿಯಾಗಿದ್ದಾರೆ. ಅಜನೀಶ್ ಸಂಗೀತದಲ್ಲಿ ಮೂಡಿ ಬಂದ ಈ ಹಾಡನ್ನು ಇತ್ತೀಚೆಗೆ ಅಜನೀಶ್ ಅವರ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ.
ಅಷ್ಟಕ್ಕೂ ಈ ಹಾಡನ್ನು ಹಾಡಬೇಕೆಂಬ ಯೋಚನೆ ಅನೀಶ್ ಅವರಿಗಿರಲಿಲ್ಲವಂತೆ. ಇದೊಂದು ಹಾಡು ಮಾತ್ರ ಬಾಕಿ ಇದ್ದುದರಿಂದ, ಯಾರಿಂದ ಹಾಡಿಸಬೇಕು, ಯಾವಾಗ ಹಾಡಿಸಬೇಕು ಎಂಬ ಚರ್ಚೆ ನಡೆಯುತ್ತಿರುವಾಗ, “ಬೇಗನೇ ಯಾರಿಂದನಾದರೂ ಹಾಡಿಸಿ, ಇಲ್ಲಾ ಅಂದ್ರೆ, ನಾನೇ ಹಾಡಲಾ?’ ಎಂದು ಅನೀಶ್ ಹೇಳಿದ್ದಾರೆ. ಹಾಗೆ ಹೇಳಿದ್ದೇ ತಡ, ಅಜನೀಶ್ ಲೋಕನಾಥ್ ತಡಮಾಡದೆ, ಸ್ಟುಡಿಯೋಗೆ ಕರೆಸಿ, ಹಾಡಿ ಅಂದಿದ್ದಾರೆ. ಸಾಂಗ್ ಚೆನ್ನಾಗಿ ಮೂಡಿಬಂದರೆ ಮಾತ್ರ ಇಟ್ಟುಕೊಳ್ಳೋಣ, ಇಲ್ಲವಾದರೆ ಬೇಡ ಎಂಬ ತೀರ್ಮಾನಕ್ಕೆ ಬಂದು, ಅನೀಶ್ ತೇಜಶ್ವರ್ ಹಾಡಿದ್ದಾರೆ.
ಕೇವಲ ಎರಡು ಗಂಟೆಯಲ್ಲೇ ಆ ಹಾಡು ಮುಗಿಸಿಬಿಟ್ಟಿದ್ದಾರೆ. ಅದೊಂದು ಪೆಪ್ಪಿ ನಂಬರ್ ಆಗಿದ್ದರಿಂದ ಜೋಶ್ನಲ್ಲೇ ಹಾಡಿದ್ದಾರೆ. ಅದು ಅಜನೀಶ್ಗೂ ಇಷ್ಟವಾಗಿದೆ. ಹೀರೋ ಇಂಟ್ರಡಕ್ಷನ್ ಸಾಂಗ್ಗೆ ಅವರೇ ಧ್ವನಿಯಾಗಿರುವುದರಿಂದ ಸಹಜವಾಗಿಯೇ ಅವರಿಗೆ ಖುಷಿ ಇದೆ. ಈ ಹಾಡನ್ನು ಮುಂದಿನವಾರ ಬಿಡುಗಡೆ ಮಾಡಲು ಅನೀಶ್ ಯೋಚಿಸಿದ್ದಾರೆ.
ಅಂದಹಾಗೆ, ಚಿತ್ರ ಈಗ ಸೆನ್ಸಾರ್ ಅಂಗಳದಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ “ವಾಸು’ ಜುಲೈನಲ್ಲೇ ಬರುವ ಸಾಧ್ಯತೆ ಇದೆ. ಇಲ್ಲವಾದರೆ, ಆಗಸ್ಟ್ ಮೊದಲ ವಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾನೆ. ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಛಾಯಾಗ್ರಹಣವಿದೆ. ನಿಶ್ವಿಕಾ ನಾಯ್ಡು ನಾಯಕಿ. ಉಳಿದಂತೆ ಅವಿನಾಶ್, ಗಿರೀಶ್, ಮಂಜುನಾಥ್ ಹೆಗಡೆ, ಅರುಣ ಬಾಲರಾಜ್, ದೀಪಕ್ ಶೆಟ್ಟಿ ಇತರರು ನಟಿಸಿದ್ದಾರೆ. ಅಜಿತ್ ಉಗ್ಗಿನ್ ವಾಸನ್ ಈ ಚಿತ್ರದ ನಿರ್ದೇಶಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್ ಕನಸು: ಇಂದು ತೆರೆಗೆ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್ ಅಂತ್ಯಕ್ರಿಯೆ
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ