ಹೊಸ ಪದ್ಮಾವತಿ ಜೊತೆ ಹಳೇ ಕಾಂಬಿನೇಷನ್
Team Udayavani, Mar 26, 2018, 2:15 PM IST
ಏಳು ವರ್ಷಗಳ ಹಿಂದಿನ ಮಾತು. “ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಚಿತ್ರದಲ್ಲಿ ನಟಿ ರಮ್ಯಾ, ಜಾನಿಯೊಂದಿಗೆ “ಊರಿಗೊಬ್ಳೆ ಪದ್ಮಾವತಿ…’ ಎಂಬ ಹಾಡಿಗೆ ಕಲರ್ಫುಲ್ ಸ್ಟೆಪ್ ಹಾಕಿ ಪಡ್ಡೆ ಹುಡುಗರನ್ನ ಹುಚ್ಚೆಬ್ಬಿಸಿದ್ದರು. ಈಗಲೂ ಆ ಹಾಡನ್ನು ಗುನುಗದ ಹುಡುಗರಿಲ್ಲ. ಅಷ್ಟರಮಟ್ಟಿಗೆ ಆ ಹಾಡು ವೈರಲ್ ಆಗುತ್ತಲೇ ಇದೆ. ಈಗ ಹೊಸ ಸುದ್ದಿಯೆಂದರೆ, ಅದೇ ಜಾನಿ ಲೈಫ್ಗೆ ಹೊಸ ಪದ್ಮಾವತಿ ಎಂಟ್ರಿಯಾಗಿ ಲೈಟ್ ಆನ್ ಮಾಡಿದ್ದಾರೆ. ಹೌದು, ದುನಿಯಾ ವಿಜಯ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ನಲ್ಲಿ ಬಿಡುಗಡೆಗೆ ರೆಡಿಯಾಗಿರುವ “ಜಾನಿ ಜಾನಿ ಯೆಸ್ ಪಪ್ಪಾ’ ಚಿತ್ರದಲ್ಲಿ ಹೊಸ ಪದ್ಮಾವತಿಯ ಹಾಡು ಕೂಡ ಹೊಸದೊಂದು ಕುತೂಹಲ ಹುಟ್ಟು ಹಾಕಿರುವುದು ಸುಳ್ಳಲ್ಲ. “ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ರಮ್ಯಾ ಕುಣಿದು ಕುಪ್ಪಳಿಸಿದ್ದರೆ, ಅದೇ ಕಾಂಬಿನೇಷನ್ನಲ್ಲಿ ನಿರ್ಮಾಣಗೊಂಡಿರುವ “ಜಾನಿ ಜಾನಿ ಯೆಸ್ ಪಪ್ಪಾ’ ಚಿತ್ರದಲ್ಲಿ ರಚಿತಾರಾಮ್ “ಹೊಸ ಪದ್ಮಾವತಿ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. “ಪಂಕಾಗಿ ಪೀಕಲಾಗಿ ಎಲ್ಲಾ ಶೈನ್ ಆಗಿದೆ, ಸ್ವೀಟ್ ಆಗಿ ಸಿಂಪಲ್ ಆಗಿ, ನನ್ ಲೈಫ್ನ ಆನ್ ಮಾಡೋ ಹೊಸ ಪದ್ಮಾವತಿ…’ ಎಂದು ದುನಿಯಾ ವಿಜಯ್ ಹಾಡುವ ಹಾಡಲ್ಲಿ ಹೊಸ ಪದ್ಮಾವತಿ ಸಿಕ್ಕಾಪಟ್ಟೆ ಸ್ಟೆಪ್ ಹಾಕಿದ್ದಾರೆ.
“ಜಾನಿ ಜಾನಿ ಯೆಸ್ ಪಪ್ಪಾ’ ಶರವೇಗದಲ್ಲಿ ಚಿತ್ರೀಕರಣ ಮುಗಿಸಿದ ಚಿತ್ರ. “ದುನಿಯಾ ಟಾಕೀಸ್’ ಬ್ಯಾನರ್ನಲ್ಲಿ ದುನಿಯಾ ವಿಜಯ್ ನಿರ್ಮಿಸಿರುವ ಎರಡನೇ ಚಿತ್ರವಿದು. ಇಲ್ಲೂ ರಂಗಾಯಣ ರಘು ಮತ್ತು ದುನಿಯಾ ವಿಜಯ್ ಅವರ ಜುಗಲ್ಬಂಧಿ ನಡೆಯಲಿದೆ. ಆರಂಭದಿಂದ ಅಂತ್ಯದವರೆಗೂ ನಗುವಿಗೆ ಇಲ್ಲಿ ಬರವಿಲ್ಲ ಎಂಬ ಗ್ಯಾರಂಟಿ ಚಿತ್ರತಂಡದ್ದು. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಉಳಿದಂತೆ ಗೋವಾ ಹಾಗೂ ಮೈಸೂರಲ್ಲಿ ಹಾಡುಗಳ ಚಿತ್ರೀಕರಣ ನಡೆದಿದೆ. ಇಲ್ಲಿ ಇನ್ನೂ ಒಂದು ವಿಶೇಷವಿದೆ. ವಿಶೇಷ ಪಾತ್ರದಲ್ಲಿ ಗಡ್ಡಪ್ಪ ಕೂಡ ನಟಿಸಿದ್ದಾರೆ. ಅವರ ಪಾತ್ರ ಏನೆಂಬುದು ಸಸ್ಪೆನ್ಸ್. ಇಲ್ಲಿ ಸಾಧುಕೋಕಿಲ, ಅಚ್ಯುತ್ ಇತರರು ನಟಿಸಿದ್ದಾರೆ. ಕರ್ಣ ಛಾಯಾಗ್ರಹಣ ಮಾಡಿದರೆ, ಅಜನೀಶ್ ಲೋಕನಾಥ್ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ
CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು