- Friday 13 Dec 2019
ಮತ್ತೊಮ್ಮೆ ಕಾಂಚನ ಆರ್ಭಟ
ಈ ವಾರ ರಾಜ್ಯಾದ್ಯಂತ ಬಿಡುಗಡೆ
Team Udayavani, Apr 25, 2019, 3:08 AM IST
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದ “ಕಾಂಚನ’ ಈಗ ಪುನಃ ಸುದ್ದಿಯಾಗುತ್ತಿದೆ. ಹೌದು, ಈ ಹಿಂದೆ ಎರಡು ಭಾಗಗಳಲ್ಲಿ ತೆರೆಕಂಡಿದ್ದ “ಕಾಂಚನ’ ಚಿತ್ರ ಎಲ್ಲೆಡೆ ಯಶಸ್ಸು ಪಡೆದಿತ್ತು. ಈಗ “ಕಾಂಚನ 3′ ಚಿತ್ರ ಬಿಡುಗಡೆಯಾಗುತ್ತಿದೆ. ಈ ಶುಕ್ರವಾರ ರಾಜ್ಯಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.
ಹಿಂದಿನ ಎರಡು ಚಿತ್ರಗಳಲ್ಲೂ ಕನ್ನಡದ ನಟ,ನಟಿಯರು ಕಾಣಿಸಿಕೊಂಡಿದ್ದರು. ಆದರೆ, “ಕಾಂಚನ 3′ ಚಿತ್ರದಲ್ಲೊಂದು ಬದಲಾವಣೆಯಾಗಿದೆ. ನೃತ್ಯ ನಿರ್ದೇಶಕ, ನಿರ್ದೇಶಕ, ರಾಘವ್ ಲಾರೆನ್ಸ್ ಅವರಿಲ್ಲಿ ನಟಿಸಿದ್ದಾರೆ. 2.45 ಅವಧಿಯಲ್ಲಿರುವ ಚಿತ್ರದಲ್ಲಿ ಹಾರರ್ ಅಂಶಗಳು ಹೆಚ್ಚಾಗಿವೆ. ಅದಷ್ಟೇ ಅಲ್ಲ, ಇಲ್ಲಿ ಅಷ್ಟೇ ಹಾಸ್ಯ ಪ್ರಸಂಗಗಳು ಇವೆ ಎಂಬುದು ಚಿತ್ರತಂಡದ ಮಾತು.
ಈ ಹಿಂದೆ ಬಿಡುಗಡೆಗೊಂಡಿರುವ ಚಿತ್ರಕ್ಕೆ ಎರಡು ಭಾಷೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ವಿದೇಶದಲ್ಲೂ ಒಳ್ಳೆಯ ಮೆಚ್ಚುಗೆ ಕಾಣುವ ಮೂಲಕ ಸುಮಾರು 60 ಕೋಟಿ ರು.ಗಳಿಕೆಯಾಗಿತ್ತು ಎಂಬುದನ್ನು ವಿವರಿಸುವ ಚಿತ್ರತಂಡ ಈಗ “ಕಾಂಚನ 3′ ಕೂಡ ಎಲ್ಲರಿಗೂ ಇಷ್ಟವಾಗುವಂತಹ ಚಿತ್ರವಾಗಲಿದೆ ಎಂಬ ನಂಬಿಕೆಯಲ್ಲಿದೆ.
ಅಂದಹಾಗೆ, ರಾಘವ್ ಲಾರೆನ್ಸ್ ಅವರು ಚೆನ್ನೈನಲ್ಲಿ ಒಂದು ಚಾರಿಟಬಲ್ ಟ್ರಸ್ಟ್ ತೆರೆದಿದ್ದಾರೆ. ಆ ಮೂಲಕ ಒಂದಷ್ಟು ನಿರ್ಗತಿಕರಿಗೆ, ಅಸಹಾಯಕರಿಗೆ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ಈಗ ಕರ್ನಾಟಕದಲ್ಲೂ ತಮ್ಮ ಚಾರಿಟಬಲ್ ಟ್ರಸ್ಟ್ ಅನ್ನು ಶುರು ಮಾಡಲು ಯೋಚಿಸಿದ್ದಾರೆ.
ಆ ಮೂಲಕ ಈ ಭಾಗದ ಒಂದಷ್ಟು ಜನರಿಗೂ ಸಹಾಯವಾಗಲಿ ಎಂಬುದು ಟ್ರಸ್ಟ್ ಉದ್ದೇಶ ಎಂಬುದು ಅವರ ಮಾತು. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಈ ವೇಳೆ ನಾಯಕಿಯರಾದ ವೇದಿಕಾ, ಮುಂಬೈ ಮೂಲದ ಮಾಡೆಲ್ ನಿಖೀ ತಂಬೂಲಿ ಮತ್ತು ನಿರ್ಮಾಪಕ, ವಿತರಕ ಯೋಗಿ ದ್ವಾರಕೀಶ್ ಸೇರಿದಂತೆ ಇತರರು ಇದ್ದರು.
ಚಿತ್ರಕ್ಕೆ ಜೆಸ್ಸಿ ಸ್ಯಾಮ್ಯುಯಲ್ ಸಂಗೀತವಿದೆ. ವೆಂಟ್ರಿ ಕ್ಯಾಮೆರಾ ಹಿಡಿದರೆ, ರುಬಿನ್ ಸಂಕಲನ ಮಾಡಿದ್ದಾರೆ. ಅಶ್ವಿನಿ ರಾಮಪ್ರಸಾದ್ ಚಿತ್ರದ ಆಡಿಯೋ ಹಕ್ಕು ಪಡೆದಿದ್ದಾರೆ.ದುಕೊಂಡಿದ್ದಾರೆ. ಇದೇ ಶುಕ್ರವಾರದಂದು ಸುಮಾರು 200 ಕೇಂದ್ರಗಳಲ್ಲಿ ಕಾಂಚಾನ ರಾರಾಜಿಸಲಿದೆ.
ಈ ವಿಭಾಗದಿಂದ ಇನ್ನಷ್ಟು
-
ನಟಿ ಸುಮಲತಾ ಅಂಬರೀಶ್ ಕಳೆದೊಂದು ವರ್ಷದಿಂದ ಚಿತ್ರರಂಗಕ್ಕಿಂತ ಹೆಚ್ಚಾಗಿ ಸುದ್ದಿಯಾಗುತ್ತಿರುವುದು ರಾಜಕೀಯ ರಂಗದಲ್ಲಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ...
-
ರವಿಚಂದ್ರನ್ ಪುತ್ರ ಮನುರಂಜನ್ ಬುಧವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸದ್ಯ ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯುತ್ತಿರುವ "ಮುಗಿಲ್ ಪೇಟೆ'...
-
ಪರಿಪೂರ್ಣವಾದ ಕೌಟುಂಬಿಕ ಕಥಾ ಹಂದರ ಹೊಂದಿರೋ ಚಿತ್ರವೆಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಟ್ರೇಲರ್, ಟೀಸರ್ ಮತ್ತು ಹಾಡುಗಳ ಮೂಲಕ ಒಡೆಯನ ಅದ್ದೂರಿತನದ ಮಜಲುಗಳು...
-
ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ಈ ವಾರ ತೆರೆಗಾಣುತ್ತಿದೆ. ಈ ಮೂಲಕ ಅದೆಷ್ಟೋ ಕಾಲದಿಂದ ಅಭಿಮಾನಿಗಳಲ್ಲಿ ನಿಗಿನಿಗಿಸುತ್ತಿದ್ದ...
-
ಸದ್ಯ ನಟ ಗೋಲ್ಡನ್ ಸ್ಟಾರ್ ಗಣೇಶ್ "ಗಾಳಿಪಟ-2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಗಣೇಶ್ ಅಭಿನಯಿಸಲಿರುವ ಮುಂಬರುವ ಚಿತ್ರದ ಕುರಿತಾದ...
ಹೊಸ ಸೇರ್ಪಡೆ
-
ಕೊರಟಗೆರೆ: ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಸಂಕಲ್ಪದಂತೆ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಯಂತಿ ಅಂಗವಾಗಿ ಆಯೋಜಿಸಿರುವ ರಥಯಾತ್ರೆಗೆ ಪಟ್ಟಣದಲ್ಲಿ ಅದ್ಧೂರಿ...
-
ತೀರ್ಥಹಳ್ಳಿ: ತಾಲೂಕಿನಲ್ಲಿ ಕೆರೆಗಳ ಸರ್ವೇ ಕಾರ್ಯ ಸಮಾಧಾನಕರ ಆಗಿಲ್ಲ. 305 ಕೆರೆಗಳ ಗಡಿ ಗುರುತಿಸುವ ಕಾರ್ಯ ವಿಳಂಬವಾಗಿದೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಡಿಡಿಎಲ್ಆರ್...
-
ಮಣಿಪಾಲ: ಪಂಚಭಾಷಾ ನಟ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಯಾವ ಕನ್ನಡ ಸಿನಿಮಾ ನಿಮಗಿಷ್ಟ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ....
-
ನವದೆಹಲಿ/ಹೈದರಾಬಾದ್: ದಿಲ್ಲಿಯ ನಿರ್ಭಯಾ, ತೆಲಂಗಾಣದ ದಿಶಾ, ಉನ್ನಾವ್ ಅತ್ಯಾಚಾರ ಪ್ರಕರಣಗಳು ದೇಶವನ್ನೇ ಬೆಚ್ಚಿಬೀಳಿಸಿದ್ದಲ್ಲದೇ ಆರೋಪಿಗಳಿಗೆ ಕಠಿಣ ಶಿಕ್ಷೆ...
-
ಹುಳಿಯಾರು: ಶಾಲಾ ಬಿಸಿಯೂಟಕ್ಕೆ ಹುಳು ಬಿದ್ದಿರುವ ಬೇಳೆ ಸರಬರಾಜು ಮಾಡುತ್ತಿರುವುದರಿಂದ ಆಕ್ರೋಶಗೊಂಡ ಪೋಷಕರು ಬೇಳೆ ಇಳಿಸಲು ಬಂದ ಲಾರಿ ತಡೆದು ಪ್ರತಿಭಟನೆ...