ವಿಷ್ಣು ಅಭಿಮಾನಿಗಳಿಗೆ ಪಡ್ಡೆಹುಲಿ ಹಾಡು
Team Udayavani, Feb 3, 2019, 5:40 AM IST
ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅವರ ಅಭಿನಯದ “ಪಡ್ಡೆಹುಲಿ’ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅದಕ್ಕೂ ಮುನ್ನ ಚಿತ್ರತಂಡ ಚಿತ್ರದ ಹಾಡೊಂದನ್ನು ಫೆ.4 ರ ಸೋಮವಾರ ಸಂಜೆ 6 ಕ್ಕೆ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಅದಕ್ಕೂ ಮುನ್ನ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಆ ಹಾಡನ್ನು ಅರ್ಪಿಸಿರುವುದಲ್ಲದೆ, ಅದರೊಂದಿಗೆ ಆ ಹಾಡನ್ನು ಫೆ.2 ರ ಶನಿವಾರ ವಿಶೇಷವಾಗಿ ಪ್ರದರ್ಶನ ಮಾಡಿದೆ.
ಇಷ್ಟಕ್ಕೂ ಈ ಹಾಡನ್ನು ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ವಿಶೇಷ ಪ್ರದರ್ಶನ ಏರ್ಪಡಿಸಲು ಕಾರಣ, ನಿರ್ಮಾಪಕ ಕೆ.ಮಂಜು. ಎಲ್ಲರಿಗೂ ಗೊತ್ತಿರುವಂತೆ, ಕೆ.ಮಂಜು ಅವರು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ತಮ್ಮ ಪುತ್ರ ಶ್ರೇಯಸ್ ಅವರನ್ನು “ಪಡ್ಡೆಹುಲಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಖುಷಿ ಒಂದು ಕಡೆಯಾದರೆ, ಮಗನ ಚಿತ್ರದ ಹಾಡನ್ನು ವಿಷ್ಣುವರ್ಧನ್ ಅಭಿಮಾನಿಗಳಿಗೆ ಅರ್ಪಿಸಿ, ಅವರಿಗೆ ತೋರಿಸುವ ಮೂಲಕ ವಿಶೇಷ ಅಭಿಮಾನ ಮೆರೆದಿದ್ದಾರೆ.
ಅಂದಹಾಗೆ, ಈ ಚಿತ್ರದಲ್ಲಿ ಶ್ರೇಯಸ್ ವಿಷ್ಣು ದಾದಾ ಅವರ ಅಭಿಮಾನಿಯಾಗಿ ನಟಿಸುತ್ತಿದ್ದಾರೆ. ಶ್ರೇಯಸ್ ಆ ಹಾಡಿನಲ್ಲಿ “ನಾಗರಹಾವು’ ಚಿತ್ರದಲ್ಲಿ ಬರುವ ಸಾಹಸ ಸಿಂಹನ ಹ್ಯಾಂಗ್ರಿ ಯಂಗ್ಮ್ಯಾನ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಹಾಡಲ್ಲಿ ಚಿತ್ರದುರ್ಗದ ಕೋಟೆ, ಕನ್ನಡ ಭಾಷೆ, “ನಾಗರಹಾವು ‘ಚಿತ್ರದಲ್ಲಿನ ವಿಷ್ಣುವರ್ಧನ್ ಅವರ ಪಾತ್ರದ ಖದರು ಈ ಅಂಶಗಳು ಹೈಲೈಟ್ ಆಗಿವೆ.
ಚಿತ್ರವನ್ನು ಗುರುದೇಶ ಪಾಂಡೆ ನಿರ್ದೇಶಿಸುತ್ತಿದ್ದು, ಎಂ.ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದು, ಕೆ.ಎಂ.ಚಂದ್ರಶೇಕರ್ ಅವರ ಛಾಯಾಗ್ರಹಣವಿದೆ. ರವಿವರ್ಮ ಅವರ ಸಾಹಸ ಮತ್ತು ಕೆ.ಎಂ.ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ. “ನಾ ತುಂಬ ಹೊಸಬ ಬಾಸು’ ವಿಡಿಯೋ ಹಾಡು ಫೆಬ್ರವರಿ 4 ರ ಸೋಮವಾರ ಸಂಜೆ 6 ಗಂಟೆಗೆ ಪಿಆರ್ಕೆ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು