ಯಾತ್ರೆ ಮುಗಿಸಿ ದೇವಲೋಕಕ್ಕೆ ಹೊರಟ ಶ್ರೀಗಳು: ಪಾರುಲ್ ಯಾದವ್
Team Udayavani, Jan 21, 2019, 11:10 AM IST
ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು ದೇಶ- ಭಾಷೆಯ ಆಚೆಗೂ ಭಕ್ತರನ್ನು ಹೊಂದಿದ್ದಾರೆ. ನೆರೆಯ ರಾಜ್ಯಗಳ ಕಲಾವಿದರು ಕೂಡಾ ಶ್ರೀಗಳ ಭಕ್ತರಾಗಿದ್ದಾರೆ. ಇದೀಗ ಬಹುಭಾಷ ನಟಿ ಪಾರುಲ್ ಯಾದವ್ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
“ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ ಕಾಯಕಯೋಗಿ, ಶತಾಯುಷಿ, ನಮ್ಮ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಇಂದು ಇಹಲೋಕ ತ್ಯಜಿಸಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ.. ಇಹಲೋಕ ಯಾತ್ರೆ ಮುಗಿಸಿ ದೇವಲೋಕಕ್ಕೆ ಹೊರಟ ದೇವರು’ ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ ಕಾಯಕಯೋಗಿ, ಶತಾಯುಷಿ, ನಮ್ಮ
ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಇಂದು ಇಹಲೋಕ ತ್ಯಜಿಸಿದ್ದಾರೆ,ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತ ನಲ್ಲಿ ಪ್ರಾರ್ಥಿಸೋಣ.. ಇಹಲೋಕ ಯಾತ್ರೆ ಮುಗಿಸಿ ದೇವಲೋಕಕ್ಕೆ ಹೊರಟ ದೇವರು#WalkingGod #ShivakumaraSwamiji #SiddagangaMutt #RIP pic.twitter.com/Bq1m2JErUc— Parul Yadav (@TheParulYadav) January 21, 2019