ಭಿನ್ನಗೆ ಪಾಯಲ್ ರಾಧಾಕೃಷ್ಣನ್ ನಾಯಕಿ
Team Udayavani, Apr 29, 2018, 11:00 AM IST
“ಶುದ್ಧಿ’ ಎಂಬ ಜನಮನ್ನಣೆ ಪಡೆದ ಚಿತ್ರವನ್ನು ನಿರ್ದೇಶಿಸಿದ್ದ ಆದರ್ಶ್ ಈಶ್ವರಪ್ಪ, “ಭಿನ್ನ’ ಎಂಬ ಹೊಸ ಚಿತ್ರ ಮಾಡುತ್ತಿರುವುದು ಗೊತ್ತಿರಬಹುದು. ಈಗ ಈ ಚಿತ್ರಕ್ಕೆ ಕಲಾವಿದರ ಆಯ್ಕೆ ಆಗಿದೆ. ಅಷ್ಟೇ ಅಲ್ಲ, ಕಲಾವಿದರ ಫೋಟೋ ಶೂಟ್ ಸಹ ಆಗಿದೆ. “ಭಿನ್ನ’ದಲ್ಲಿ ಪ್ರಮುಖವಾಗಿ ನಾಲ್ವರು ಕಲಾವಿದರು ನಟಿಸುತ್ತಿದ್ದು, ಆ ನಾಲ್ವರ ಸುತ್ತ ಈ ಚಿತ್ರ ಸುತ್ತಲಿದೆ.
ಇದು ಸಹ “ಶುದ್ಧಿ’ ತರಹ ಒಂದು ಮಹಿಳಾ ಪ್ರಧಾನ ಚಿತ್ರ. “ಉದಯೋನ್ಮುಖ ನಟಿಯೊಬ್ಬಳಿಗೆ ಒಂದು ಚಿತ್ರದಲ್ಲಿ ಅವಕಾಶ ಸಿಗುತ್ತದೆ. ಆ ಚಿತ್ರದ ಕಥೆಗೂ ಅವಳ ನಿಜಜೀವನಕ್ಕೂ ಒಂದು ಸಂಬಂಧವಿರುತ್ತದೆ. ಆ ಸಂಬಂಧ ಏನು ಎಂಬುದನ್ನು ಚಿತ್ರ ಹೇಳಲಿದೆ. ಇದು ಚಿತ್ರದೊಳಗೊಂದು ಚಿತ್ರದ ಕಥೆ. ಇಲ್ಲಿ ನಾಯಕಿ ಪಾತ್ರ ಬಹಳ ಮುಖ್ಯ.
ಕಾವೇರಿ ಮತ್ತು ದೇವಕಿ ಎಂಬ ಎರಡು ಶೇಡ್ಗಳಿರುವ ಈ ಪಾತ್ರವನ್ನ ಪಾಯಲ್ ರಾಧಾಕೃಷ್ಣನ್ ಮಾಡುತ್ತಿದ್ದಾರೆ. ಮಿಕ್ಕಂತೆ “ಲೂಸಿಯಾ’ ಪವನ್ ಅವರ ಪತ್ನಿ ಸೌಮ್ಯ ಜಗನ್ಮೂರ್ತಿ, ಸಿದ್ಧಾರ್ಥ್ ಮಾಧ್ಯಮಿಕ, ಶಶಾಂಕ್ ಪುರುಷೋತ್ತಮ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಯಲ್ ರಾಧಾಕೃಷ್ಣ, ಇದಕ್ಕೂ ಮುನ್ನ ಆದಿತ್ಯ ಅಭಿನಯದ “ಬೆಂಗಳೂರು ಅಂಡರ್ವರ್ಲ್ಡ್’ ಚಿತ್ರದಲ್ಲಿ ನಟಿಸಿದ್ದರು. ಮುಂಬೈನಲ್ಲಿ ಮಾಡಲಿಂಗ್ ಮಾಡುತ್ತಿರುವ ಪಾಯಲ್, “ಭಿನ್ನ’ ಚಿತ್ರದ ಆಡಿಷನ್ನಲ್ಲಿ ಭಾಗವಹಿಸಿ, ಆಯ್ಕೆಯಾಗಿದ್ದಾರೆ.
ಕಾವೇರಿ ಹಾಗೂ ದೇವಕಿ ಎಂಬ ಎರಡು ಪಾತ್ರಗಳನ್ನು ಪಾಯಲ್ ನಿರ್ವಹಿಸಿದರೆ, ವಿಮಲ ಎಂಬ ಪಾತ್ರವನ್ನು ಸೌಮ್ಯ ಮಾಡುತ್ತಿದ್ದಾರೆ. ಇನ್ನು ಸಿದ್ಧಾರ್ಥ್ ಮತ್ತು ಶಶಾಂಕ್, ಸತೀಶ್ ಹಾಗೂ ಮೋಹನ್ ಎಂಬ ಪಾತ್ರಗಳನ್ನು ಮಾಡುತ್ತಿದ್ದಾರೆ.
ಈ ನಾಲ್ಕೂ ಪಾತ್ರಗಳ ಹೆಸರುಗಳು, ಪುಟ್ಟಣ್ಣ ಅವರ ಚಿತ್ರದ ಪಾತ್ರಗಳ ಹೆಸರಾಗಿದ್ದು, ಆ ಹೆಸರುಗಳನ್ನು ಬಳಸಿಕೊಳ್ಳುವ ಮೂಲಕ ಪುಟ್ಟಣ್ಣ ಕಣಗಾಲ್ ಅವರಿಗೆ ಚಿತ್ರವನ್ನು ಅರ್ಪಿಸುತ್ತಿರುವುದಾಗಿ ಹೇಳುತ್ತಾರೆ ಆದರ್ಶ್. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುವುದರ ಜೊತೆಗೆ ಸಂಕಲನವನ್ನೂ ಮಾಡಲಿದ್ದಾರೆ ಆದರ್ಶ್.
ಯತೀಶ್ ವೆಂಕಟೇಶ್ ಮತ್ತು ಪರ್ಪಲ್ ಆರೋ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಂಡ್ರೋ ಆಯಿಲೋ ಅವರ ಛಾಯಾಗ್ರಹಣ ಮತ್ತು ಜೆಸ್ಸಿ ಕ್ಲಿಂಟನ್ ಅವರ ಸಂಗೀತವಿದೆ. ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರವಾಗಲಿದ್ದು, ಸಿಂಕ್ಸೌಂಡ್ನಲ್ಲೇ ಚಿತ್ರೀಕರಣ ನಡೆಯಲಿದೆ. ಜುಲೈನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಡಿಸೆಂಬರ್ ಹೊತ್ತಿಗೆ ಚಿತ್ರದ ಕೆಲಸಗಳು ಮುಗಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ