“ಪುರುಸೊತ್ರಾಮ’ನಿಗೆ ವೆಬ್ಸೈಟ್ನಲ್ಲಿ ಪೈರಸಿ ಕಾಟ
Team Udayavani, Dec 15, 2020, 1:08 PM IST
ಕಳೆದವಾರವಷ್ಟೇ”ಪುರುಸೊತ್ರಾಮ’ ಚಿತ್ರ ತೆರೆಕಂಡಿದ್ದು ನಿಮಗೆ ಗೊತ್ತಿರಬಹುದು. ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತ, ಉತ್ತಮ ಪ್ರದರ್ಶನ ಕಾಣುತ್ತಿದೆ.
ಚಿತ್ರದ ಗಳಿಕೆಯಲ್ಲೂ ನಿಧಾನವಾಗಿ ಏರಿಕೆಯಾಗುತ್ತಿದೆ. ಇದರ ನಡುವೆಯೇ”ಪುರುಸೋತ್ರಾಮ’ನಿಗೆ ಪೈರಸಿ ಕಾಟ ಎದುರಾಗಿದೆ. ಚಿತ್ರ ತೆರೆಕಂಡು ಎರಡು – ಮೂರು ದಿನಗಳು ಕಳೆಯುವಷ್ಟರಲ್ಲಿ ಚಿತ್ರದ ಪೈರಸಿ ಕಾಪಿ ಕೆಲ ವೆಬ್ಸೈಟ್ಗಳಲ್ಲಿ ಹರಿದಾಡುತ್ತಿದೆ. ಇದು ಚಿತ್ರತಂಡದ ಆತಂಕಕ್ಕೆಕಾರಣವಾಗಿದೆ. ಸದ್ಯಕ್ಕೆ ಪೈರಸಿ ಕಾಪಿ ಹರಿದಾಡುತ್ತಿರುವ ವೆಬ್ ಸೈಟ್ ಪತ್ತೆ ಹಚ್ಚಿರುವ ಚಿತ್ರತಂಡ ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಪೊಲೀಸರಿಗೆ ದೂರು ನೀಡಿದೆ.
ಇದನ್ನೂ ಓದಿ : ‘ದಿ ಬ್ರಿಡ್ಜ್ ಮ್ಯಾನ್ ‘ ಗಿರೀಶ್ ಭಾರದ್ವಾಜ್ ಬಯೋಪಿಕ್ : ಜೀವನಗಾಥೆಗೆ ಸಿನಿಮಾ ಸ್ಪರ್ಶ
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಉಪ್ಪಿ ದಂಪತಿ :
ನಟ ಕಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ದಂಪತಿಗೆ ಸೋಮವಾರ18ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ.
ಸ್ಯಾಂಡಲ್ವುಡ್ನಲ್ಲಿ ತಾರಾ ಜೋಡಿಯಾಗಿ ಗುರುತಿಸಿಕೊಂಡಿರುವ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ದಂಪತಿಯ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಗಣ್ಯರು, ಸಿನಿಪ್ರಿಯರು, ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಶುಭ ಹಾರೈಸಿದ್ದಾರೆ.
ಉಪ್ಪಿ-ಪ್ರಿಯಾಂಕ ದಂಪತಿಗೆ ಆಯುಶ್ ಮತ್ತು ಐಶ್ವರ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಮಗಳು ಐಶ್ವರ್ಯಾ ಕಳೆದ ವರ್ಷ ತೆರೆಕಂಡ “ದೇವಕಿ’ ಚಿತ್ರದ ಮೂಲಕ ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ.
ಅಭಿಮಾನಿಯಿಂದ ಸಲಗ ಶಾಸನ :
ಇದೇ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಶಾಸನ ರಚನೆ ಮಾಡಲಾಗಿದೆ. ಪುರಾತನ ಶಿಲಾ ಶಾಸನದ ಮಾದರಿಯಲ್ಲಿ ಸಲಗ ಶಾಸನ ರಚನೆ ಮಾಡಲಾಗಿದ್ದು, ನಟ ವಿಜಯ್ ಅಭಿಮಾನಿಯೊಬ್ಬ ಸ್ತಬ್ಧ ಚಿತ್ರವನ್ನು ಶಾಸನ ಮಾದರಿಯಲ್ಲಿ ವಿನ್ಯಾಸ ಗೊಳಿಸಿದ್ದಾರೆ. ಅಭಿಮಾನಿಯ ಸಿನಿಮಾ ಪ್ರೀತಿಯನ್ನು ಚಿತ್ರತಂಡ ಮೆಚ್ಚಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರೋ”ಸಲಗ’ ಚಿತ್ರದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್ ಪ್ರಮುಖಪಾತ್ರಗಳಲ್ಲಿಕಾಣಿಸಿಕೊಂಡಿದ್ದಾರೆ.ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿರೋ “ಸಲಗ’ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ