ನಾನು ದರ್ಶನ್ ಅವರನ್ನು ಅಣ್ಣ ಎಂದು ಹೇಳಿದ್ದೇನೆ : ಉಮಾಪತಿ
Team Udayavani, Jul 17, 2021, 1:35 PM IST
ಬೆಂಗಳೂರು: ತಮ್ಮ ವಿರುದ್ಧ ಆರೋಪಗಳು ಎದುರಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ದರ್ಶನ್ ಮತ್ತು ನನ್ನ ನಡುವೆ ಯಾವುದೇ ವೈರತ್ವ ಇಲ್ಲ. ಅವರು ನನ್ನನ್ನು ನಮ್ಮ ನಿರ್ಮಾಪಕ ಎಂದು ಕರೆದಿದ್ದಾರೆ. ನಾನು ಅವರನ್ನು ಅಣ್ಣ ಎಂದು ಹೇಳಿದ್ದೇನೆ ಎಂದಿದ್ದಾರೆ.
ಇಂದು (ಜುಲೈ 17) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉಮಾಪತಿ, ‘ನನ್ನ ವಿರುದ್ಧ ಆರೋಪ ಮಾಡುವವರೇನು ಸಾಚಾಗಳಲ್ಲ. ನಾನು ಈ ಘಟನೆಗಳಿಂದ ಪಾಠ ಕಲಿತುಕೊಂಡೆ. ದುಡ್ಡು ನೀಡಿ ಕೆಲಸ ಮಾಡಿಕೊಂಡ ನಂತರ ಅಲ್ಲಿಗೇ ಬಿಡಬೇಕು. ಮತ್ತೊಬ್ಬರನ್ನು ಉದ್ಧಾರ ಮಾಡಲು ಹೋದರೆ ಇಂತಹ ಪರಿಸ್ಥಿತಿಗಳು ಎದುರಾಗುತ್ತವೆ ಎಂದಿದ್ದಾರೆ.
ನನ್ನ ತೇಜೋವಧೆ ಮಾಡಿಯಾಗಿದೆ. ಇನ್ನೇನೂ ಉಳಿದಿಲ್ಲ. ಆದರೆ ಈ ವಿಚಾರಗಳಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದಲೇ ನ್ಯಾಯಾಲಯದಿಂದ ಸ್ಟೇ ತರದೇ ಎಲ್ಲವನ್ನೂ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನಲ್ಲಿ ವಂಚನೆಗೆ ಯತ್ನ ನಡೆದ ಪ್ರಕರಣ ಬೆಳೆಕಿಗೆ ಬಂದ ನಂತರ ಹಲವು ಬೆಳವಣೆಗೆ ನಡೆದವು. ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ಸ್ನೇಹದ ನಡುವೆ ಬಿರುಕು ಕೂಡ ಮೂಡಿದೆ ಎನ್ನುವ ಮಾತುಗಳು ಕೇಳಿ ಬಂದವು. ದರ್ಶನ್ ಅವರೇ ಈ ಪ್ರಕರಣಕ್ಕೆ ಅಂತ್ಯ ಹಾಡಲು ಯತ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ