ಭೈರಾದೇವಿ ರಿಲೀಸ್ವರೆಗೆ ಬೇರೆ ಸಿನಿಮಾ ಯೋಚನೆ ಇಲ್ಲ
ಹೊಸ ವರ್ಷಕ್ಕೆ ಹೊಸಲುಕ್ನಲ್ಲಿ ತೆರೆಮೇಲೆ ರಾಧಿಕಾ
Team Udayavani, Nov 18, 2020, 12:41 PM IST
“ನಾನು ಈಗಾಗಲೇ ಒಪ್ಪಿಕೊಂಡಿರುವ ಎಲ್ಲ ಸಿನಿಮಾಗಳ ಕೆಲಸಗಳನ್ನು ಕಂಪ್ಲೀಟ್ ಮಾಡಿದ್ದೇನೆ. ಆದರೆ ಅವುಗಳನ್ನು ಯಾವಾಗ ರಿಲೀಸ್ ಮಾಡುತ್ತಾರೆ ಅನ್ನೋದು ನನಗೆ ಗೊತ್ತಿಲ್ಲ. ಅದನ್ನು ಆ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು ಯೋಚನೆ ಮಾಡಬೇಕು. ನಾನೊಬ್ಬ ನಟಿಯಾಗಿ ಆ ಸಿನಿಮಾಗಳಲ್ಲಿ ನನ್ನ ರೋಲ್ ಏನಿದೆಯೋ ಅದನ್ನ ಪ್ಲೇ ಮಾಡಿದ್ದೇನೆ. ಆದರೆ ಆ ಸಿನಿಮಾಗಳ ರಿಲೀಸ್ ಬಗ್ಗೆ ನಾನೇನೂ ಹೇಳಲಾರೆ. ನಿಮ್ಮಂತೆಯೇ ನಾನುಕೂಡ ಆ ಸಿನಿಮಾಗಳ ರಿಲೀಸ್ ಎದುರು ನೋಡ್ತಿದ್ದೇನೆ…’
-ಇದು ನಟಿ ಕಂ ನಿರ್ಮಾಪಕಿ ರಾಧಿಕಾಕುಮಾರಸ್ವಾಮಿ ಅವರ ನೇರ ಮಾತು. ಸದ್ಯ ರಾಧಿಕಾಕುಮಾರಸ್ವಾಮಿ ನಾಯಕಿಯಾಗಿ ಸುಮಾರು ಮೂರ್ನಾ ಲ್ಕು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅವುಗಳಲ್ಲಿ ಬಹುತೇಕ ಚಿತ್ರಗಳ ಚಿತ್ರೀಕರಣ ವರ್ಷದ ಹಿಂದೆಯೇ ಪೂರ್ಣಗೊಂಡಿದೆ.ಕೆಲವು ಚಿತ್ರಗಳ ಟೀಸರ್, ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಆದರೆ ಇಷ್ಟೊಂದು ಚಿತ್ರಗಳ ಪೈಕಿ ಇನ್ನೂ, ಒಂದು ಚಿತ್ರಕೂಡ ಪ್ರೇಕ್ಷಕರ ಮುಂದೆ ಬರಲಿಲ್ಲವಲ್ಲ ಅನ್ನೋದು ಅಭಿಮಾನಿಗಳ ಪ್ರಶ್ನೆ. ಈ ಪ್ರಶ್ನೆಗೆ ರಾಧಿಕಾಕುಮಾರಸ್ವಾಮಿ ಅವರಿಂದ ಬಂದ ಉತ್ತರವಿದು.
“ಉದಯವಾಣಿ’ ಜೊತೆ ಮಾತನಾಡಿದ ರಾಧಿಕಾ, “ಅನೇಕರಿಗೆ ಗೊತ್ತಿರುವಂತೆ, ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿರುವುದೇನೋ ನಿಜ. ಆ ಸಿನಿಮಾಗಳಲ್ಲಿ ನನ್ನ ಭಾಗದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ಕೆಲಸಗಳುಕೂಡಕಂಪ್ಲೀಟ್ ಆಗಿದೆ. ಆದರೆ ಆ ಸಿನಿಮಾಗಳು ಯಾವಾಗ ರಿಲೀಸ್ ಆಗುತ್ತವೆ. ಅನ್ನೋದು ನಿಮ್ಮಂಥೆ, ನನಗೂ ಕೂಡ ಗೊತ್ತಿಲ್ಲ’ ಎನ್ನುತ್ತಾರೆ ರಾಧಿಕಾ. “ಅದರಲ್ಲಿ “ಕಾಂಟ್ರಾಕ್ಟ್’ ಮತ್ತು “ರಾಜೇಂದ್ರ ಪೊನ್ನಪ್ಪ’ ಸಿನಿಮಾದ ನನ್ನ ಭಾಗದ ಶೂಟಿಂಗ್ ಅನ್ನು ವರ್ಷದ ಹಿಂದೆಯೇ ಮುಗಿಸಿದ್ದೇನೆ. ಆದರೆ ಅದರ ಬಿಡುಗಡೆಯ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಇನ್ನು “ಭೈರಾದೇವಿ’ ಸಿನಿಮಾದಲ್ಲಿ ನಾನೇ ಅಭಿನಯಿಸಿ, ನಿರ್ಮಿಸುತ್ತಿದ್ದೇನೆ. ಸದ್ಯ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.ಕೊರೊನಾ ಲಾಕ್ಡೌನ್ ಇದ್ದಿದ್ದರಿಂದ, ಅಂದುಕೊಂಡಂತೆ “ಭೈರಾದೇವಿ’ಕೆಲಸ ಪೂರ್ಣಗೊಳಿಸಲಾಗಲಿಲ್ಲ. ಈಗ ಇದರಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷ “ಭೈರಾದೇವಿ’ ರಿಲೀಸ್ ಆಗೋದು ಗ್ಯಾರೆಂಟಿ. ಹೊಸವರ್ಷ ಹೊಸಲುಕ್ನಲ್ಲಿ ತೆರೆಮೇಲೆ ಬರುವ ಪ್ಲಾನ್ ಇದೆ’ ಎನ್ನುತ್ತಾರೆ.
“ಸದ್ಯ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳುರಿಲೀಸ್ ಆಗುವವರೆಗೆ, ಬೇರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಬೇಡ ಅಂದುಕೊಂಡಿದ್ದೇನೆ.ಕೋವಿಡ್ ಲಾಕ್ಡೌನ್ ವೇಳೆ ಒಂದಷ್ಟು ಒಳ್ಳೆಯಕಥೆಗಳನ್ನುಕೇಳಿದ್ದೇನೆ. ಆದರೆ ಅವುಗಳನ್ನು ಸಿನಿಮಾ ಮಾಡುವುದರ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲ. “ಭೈರಾದೇವಿ’ ಸಿನಿಮಾ ರಿಲೀಸ್ ಆದ ಮೇಲಷ್ಟೇ ಮುಂದಿನ ಯೋಚನೆ’ ಎನ್ನುತ್ತಾರೆ ರಾಧಿಕಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ