‘ಬಾಹುಬಲಿ’ಗಾಗಿ ಕನ್ನಡದ ‘ರಾಗ’ ಬಲಿ: ನಟ,ನಿರ್ಮಾಪಕ ಮಿತ್ರ ಕಣ್ಣೀರು
Team Udayavani, Apr 27, 2017, 9:21 AM IST
ಬೆಂಗಳೂರು: ಬಹುನಿರೀಕ್ಷಿತ ‘ಬಾಹುಬಲಿ 2’ ಚಿತ್ರ ನಾಳೆ ವಿಶ್ವಾಧ್ಯಂತ ಬಿಡುಗಡೆಯಾಗುತ್ತಿದ್ದು ,ಈ ಹಿನ್ನಲೆಯಲ್ಲಿ ರಾಜ್ಯದ ಚಿತ್ರಮಂದಿಗಳಲ್ಲಿ ಪ್ರದರ್ಶಿತವಾಗುತ್ತಿದ್ದ ಕನ್ನಡದ ಕಲಾತ್ಮಕ ‘ರಾಗ’ ಚಿತ್ರ ವನ್ನು ಪ್ರೇಕ್ಷಕರು ಇದ್ದ ಹೊರತಾಗಿಯೂ ಎತ್ತಂಗಡಿ ಮಾಡಲಾಗಿದೆ.
ಸುಮಾರು 25 ಸೆಂಟರ್ಗಳಲ್ಲಿ ರಾಗ ಚಿತ್ರವನ್ನು ಬಾಹುಬಲಿಗಾಗಿ ಎತ್ತಂಗಡಿ ಮಾಡಲಾಗಿದ್ದು , ಇದರಿಂದಾಗಿ ನಿರ್ಮಾಪಕ , ಮತ್ತು ನಾಯಕ ಮಿತ್ರ ಅವರು ಅಧಿಕ ರಕ್ತದೊತ್ತಡದಿಂದ ಬಳಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಗದೇವನಹಳ್ಳಿ ಶಿವಶಕ್ತಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಪಡೆದಿದ್ದಾರೆ. ಮಾಧ್ಯಮಗಳ ಮುಂದೆ ಕಣ್ಣೀರಿಟ್ಟು ನೋವು ತೋಡಿ ಕೊಂಡಿದ್ದಾರೆ.
ಈ ಬಗ್ಗೆ ನಿರ್ದೇಶಕ ಪಿ.ಸಿ.ಶೇಖರ್ ಅವರು ಫೇಸ್ಬುಕ್ನಲ್ಲಿ ವಿಡಿಯೋ ಮೂಲಕ ಅಸಮಧಾನ ಹೊರ ಹಾಕಿದ್ದಾರೆ. ಕೊನೆ ಪಕ್ಷ ಮಲ್ಟಿಪ್ಲೆಕ್ಸ್ಗಳಲ್ಲಿ ಒಂದು ಶೋ ಆದರೆ ಕೊಡಲಿ ನಮ್ಮ ಸಿನಿಮಾ ಏನೆಂದು ತೋರಿಸುತ್ತೇನೆ ಎಂದಿದ್ದಾರೆ.
ಚಿತ್ರ ಎಪ್ರಿಲ್ 21 ರಂದು ರಾಜ್ಯಾಧ್ಯಂತ ಬಿಡುಗಡೆಯಾಗಿತ್ತು. ವಿಭಿನ್ನ ಕಥಾ ಹಂದರ ಹೊಂದಿರುವ ಸ್ವಮೇಕ್ ಚಿತ್ರದಲ್ಲಿ ಅಂಧರ ಪಾತ್ರದಲ್ಲಿ ಮಿತ್ರ ಮತ್ತು ನಾಯಕಿ ಭಾಮಾ ಅಮೋಘ ಅಭಿನಯ ನೀಡಿದ್ದಾರೆ.