“ರಾಘವೇಂದ್ರ ಸ್ವಾಮಿ ಪವಾಡ!ಅಂದು ಕಾರ್ ಕ್ಲೀನರ್, ಡ್ಯಾನ್ಸರ್, ಇಂದು ಪರೋಪಕಾರಿ, Star ನಟ


ನಾಗೇಂದ್ರ ತ್ರಾಸಿ, Jun 6, 2019, 12:54 PM IST

Car-01

ನಟರಾಗುವುದು, ಖ್ಯಾತರಾಗುವುದು, ಸ್ಟಾರ್ ಪಟ್ಟ ದಕ್ಕುವುದು ಒಮ್ಮೊಮ್ಮೆ ಕಾಕತಾಳೀಯ ಅನ್ನಿಸುವುದರಲ್ಲಿ ತಪ್ಪೆನಿಲ್ಲ. ಕನ್ನಡ, ಹಿಂದಿ, ತಮಿಳು, ಮಲಯಾಳಂ ಬಹುತೇಕ ಸಿನಿಮಾರಂಗದಲ್ಲಿ ಯಾವುದೇ ಗಾಡ್ ಫಾದರ್, ಸ್ಟಾರ್ ಕುಟುಂಬದ ಹಿನ್ನೆಲೆ ಇಲ್ಲದೆ ಹಲವಾರು ನಟರು ತಮ್ಮ ಪ್ರತಿಭೆಯಿಂದ ಬೆಳೆದಿದ್ದಾರೆ. ಅಂತಹ ಪಟ್ಟಿಯ ಸಾಲಿನಲ್ಲಿ ಈ ನಟ ಕೂಡಾ ಒಬ್ಬರಾಗಿದ್ದಾರೆ. ಚಿಕ್ಕಂದಿನಲ್ಲಿ ಕಡು ಬಡತನ..ತಾನು ಮುಂದೊಂದು ದಿನ ಸ್ಟಾರ್ ನಟನಾಗುತ್ತೇನೆ ಅಂತ ಕನಸಲ್ಲೂ ಎಣಿಸಿರಲಿಲ್ಲ! ಕಷ್ಟದ ಕಾಲದಲ್ಲಿಯೇ ಕಲಿತ ಡ್ಯಾನ್ಸ್ ಈ ನಟನ ಕೈ ಹಿಡಿದು ಸ್ಟಾರ್ ನಟನ ಸಾಲಿಗೆ ತಂದು ನಿಲ್ಲಿಸಿತ್ತು. ಈ ನಟ ಬೇರೆ ಯಾರೂ ಅಲ್ಲ ರಾಘವ್ ಲಾರೆನ್ಸ್ ಸ್ಯಾಮುವೆಲ್!

ಕಾರ್ ಕ್ಲೀನರ್ ಟು ಸ್ಟಾರ್ ನಟ!

ತಮಿಳಿನ ಖ್ಯಾತ ಫೈಟ್ ಮಾಸ್ಟರ್ ಸೂಪರ್ ಸುಬ್ರಹ್ಮಣ್ಯ ಅವರ ಕಾರ್ ಕ್ಲೀನರ್ ಆಗಿ ಲಾರೆನ್ಸ್ ಕೆಲಸ ಮಾಡುತ್ತಿದ್ದ. ಸಿನಿಮಾ ಸೆಟ್ ನಲ್ಲಿ ಸೂಪರ್ ಸುಬ್ರಹ್ಮಣ್ಯ ಅವರ ಫೈಟ್ ದೃಶ್ಯವನ್ನು ನೋಡಿ ತುಂಬಾನೇ ಪ್ರಭಾವಕ್ಕೊಳಗಾಗಿದ್ದ. ಕಾರು ತೊಳೆಯುತ್ತಲೇ ಡ್ಯಾನ್ಸ್ ಮಾಡುತ್ತಿದ್ದ ಲಾರೆನ್ಸ್ ಗೆ ಡ್ಯಾನ್ಸ್ ಆತನ ಪ್ರಪಂಚವೇ ಆಗಿತ್ತು. ಹೀಗೆ ಒಮ್ಮೆ ಸೂಪರ್ ಸ್ಟಾರ್ ರಜನಿಕಾಂತ್ ಲಾರೆನ್ಸ್ ಡ್ಯಾನ್ಸ್ ನೋಡಿ, ಆತನನ್ನು ಮತ್ತೊಬ್ಬ ಖ್ಯಾತ ಡ್ಯಾನ್ಸರ್, ನಟ ಪ್ರಭುದೇವ್ ನ ಡ್ಯಾನ್ಸ್ ತಂಡಕ್ಕೆ ಸೇರಿಸುತ್ತಾರೆ.

ಬಳಿಕ ಇಂಡಿಯನ್ ಮೈಕೇಲ್ ಜಾಕ್ಸನ್ ಎಂದೇ ಹೆಸರಾಗಿದ್ದ ಪ್ರಭುದೇವ್ ಬಳಿ ಡ್ಯಾನ್ಸ್ ನ ಹಲವಾರು ಮಜಲುಗಳನ್ನು ಲಾರೆನ್ಸ್ ಕಲಿತುಕೊಳ್ಳತೊಡಗಿದ್ದ. 1997ರಲ್ಲಿ ಮೊದಲ ಬಾರಿಗೆ ಲಾರೆನ್ಸ್ ಗೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ “ ಹಿಟ್ಲರ್” ಸಿನಿಮಾದಲ್ಲಿ ಕೋರಿಯೋಗ್ರಫಿ ಮಾಡಲು ಆಹ್ವಾನ ನೀಡಿದ್ದರು. ತೆಲುಗಿನ ಮಾಸ್ಟರ್ ಸಿನಿಮಾದಲ್ಲಿಯೂ ಲಾರೆನ್ಸ್ ಗೆ ಕೋರಿಯೋಗ್ರಾಫ್ ಮಾಡಲು ಚಿರಂಜೀವಿ ಅವಕಾಶ ನೀಡುವ ಮೂಲಕ ಉತ್ತೇಜನ ನೀಡಿದ್ದರು.

ಏತನ್ಮಧ್ಯೆ 1989ರಲ್ಲಿ ಬಿಡುಗಡೆಯಾಗಿದ್ದ ಸಂಸಾರ ಸಂಗೀತಂ ತಮಿಳು ಸಿನಿಮಾದ ಹಾಡಿನ ಡ್ಯಾನ್ಸ್ ನಲ್ಲಿ ಲಾರೆನ್ಸ್ ಕಾಣಿಸಿಕೊಂಡಿದ್ದ. 1991ರ ದೋಂಗಾ ಪೊಲೀಸ್ ಸಿನಿಮಾದ ಹಾಡಿನಲ್ಲೂ ಡ್ಯಾನ್ಸ್ ಮಾಡಿದ್ದರು. 1993ರ ಜಂಟಲ್ ಮ್ಯಾನ್, ತೆಲುಗಿನ ಮುಠಾ ಮೇಸ್ತ್ರಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಡ್ಯಾನ್ಸ್ ಅವಕಾಶ ದೊರಕಿತ್ತು. ಅಲ್ಲಿ ಲಾರೆನ್ಸ್ ಪ್ರತಿಭೆ ಅನಾವರಣಗೊಂಡಿತ್ತು.

1990ರಲ್ಲಿ ನಿರ್ಮಾಪಕ ಟಿವಿಡಿ ಪ್ರಸಾದ್ ಮೊತ್ತ ಮೊದಲು ಸ್ಪೀಡ್ ಡ್ಯಾನ್ಸರ್ ತಮಿಳು ಸಿನಿಮಾದಲ್ಲಿ ಹೀರೋ ಆಗಿ ನಟಿಸುವಂತೆ ಲಾರೆನ್ಸ್ ಗೆ ಆಫರ್ ಕೊಟ್ಟಿದ್ದರು. ಆದರೆ ಆ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹೆಚ್ಚು ಸದ್ದು ಮಾಡಲೇ ಇಲ್ಲ. 2001ರಲ್ಲಿ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ನಿರ್ದೇಶನದ 100ನೇ ಸಿನಿಮಾ ಪಾರ್ಥಾಲೆ ಪರಾವಶಂ ಸಿನಿಮಾದಲ್ಲಿ ನಟಿಸುವಂತೆ ಲಾರೆನ್ಸ್ ಗೆ ಅವಕಾಶ ಕೊಟ್ಟಿದ್ದರು.

2002ರಲ್ಲಿ ಅರ್ಬುಧಂ ತಮಿಳು ಸಿನಿಮಾದಲ್ಲಿ ಲಾರೆನ್ಸ್ ಹೀರೋ ಆಗಿ ಎಲ್ಲರ ಗಮನ ಸೆಳೆದು ಬಿಟ್ಟಿದ್ದರು. 2002ರ ಸ್ಟೈಲ್ ಸಿನಿಮಾದಲ್ಲೂ ಲಾರೆನ್ಸ್ ಮಿಂಚಿದ್ದರು. 2004ರಲ್ಲಿ ಮೊದಲ ಬಾರಿಗೆ ಮಾಸ್ ಎಂಬ ತೆಲುಗು ಸಿನಿಮಾವನ್ನು ಲಾರೆನ್ಸ್ ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದರು. ಈ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ್, ಜ್ಯೋತಿಕಾ ನಟಿಸಿದ್ದರು.

2007ರಲ್ಲಿ ತೆರೆಕಂಡ ಮುನಿ ಹಾರರ್ ತಮಿಳು ಸಿನಿಮಾ ಲಾರೆನ್ಸ್ ಗೆ ಸ್ಟಾರ್ ಪಟ್ಟ ತಂದು ಕೊಟ್ಟಿತ್ತು. ಹೀಗೆ ಕಾಂಚನಾ, ರೆಬೆಲ್, ಕಾಂಚನಾ 2, ಮೊಟ್ಟ ಶಿವ, ಕೆಟ್ಟ ಶಿವ, ಶಿವಲಿಂಗ ಸೇರಿದಂತೆ ಸಾಲು, ಸಾಲು ಸಿನಿಮಾಗಳು ಲಾರೆನ್ಸ್ ಗೆ ಭರ್ಜರಿ ಯಶಸ್ಸನ್ನು ತಂದು ಕೊಟ್ಟಿತ್ತು.

ಲಾರೆನ್ಸ್ “ರಾಘವ್” ಆಗಿದ್ದು ರಾಘವೇಂದ್ರ ಸ್ವಾಮಿ ಪವಾಡದಿಂದ!

1976ರಲ್ಲಿ ಚೆನ್ನೈನ ಪೂನಮಲೈನಲ್ಲಿ ಜನಿಸಿದ್ದ ಲಾರೆನ್ಸ್ ಸ್ಯಾಮುಮೆಲ್. ತಾಯಿ ಹೆಸರು ಕಣ್ಮಣಿ, ಇನ್ನುಳಿದಂತೆ ಯಾವುದೇ ವಿವರಗಳು ಲಭ್ಯವಿಲ್ಲ. ಪತ್ನಿ ಲತಾ. ಲಾರೆನ್ಸ್ ದಂಪತಿಗೆ ಒಬ್ಬಳೇ ಮಗಳು ರಾಘವಿ. ಲಾರೆನ್ಸ್ “ರಾಘವ್” ಆಗಿದ್ದರ ಹಿಂದೆ ಪುಟ್ಟದೊಂದು ಕುತೂಹಲಕಾರಿ ಘಟನೆ ಇದೆ.   ಹೌದು ಲಾರೆನ್ಸ್ ಚಿಕ್ಕವನಿದ್ದಾಗ ಬ್ರೈನ್ ಟ್ಯೂಮರ್ ಆಗಿತ್ತಂತೆ. ಇದರಿಂದಾಗಿ ಶಾಲೆಗೆ ಹೋಗಲು ತೊಂದರೆಯಾಗಿತ್ತು. ಈ ಸಂದರ್ಭದಲ್ಲಿ ಬ್ರೈನ್ ಟ್ಯೂಮರ್ ಗುಣಮುಖವಾಗಲಿ ಎಂದು ಮೊರೆ ಹೋಗಿದ್ದು “ರಾಘವೇಂದ್ರ ಸ್ವಾಮಿ” ಪೂಜೆಯಿಂದ. ಕೊನೆಗೆ ಪವಾಡ ಎಂಬಂತೆ ಬ್ರೈನ್ ಟ್ಯೂಮರ್ ಗುಣವಾಗಿತ್ತು. ಬಳಿಕ ಹಿಂದೂ ಧರ್ಮಕ್ಕೆ ಮತಾಂತರವಾದ ಲಾರೆನ್ಸ್, ತನ್ನ ಹೆಸರನ್ನು “ರಾಘವ್ ಲಾರೆನ್ಸ್ “ ಎಂದು ಬದಲಾಯಿಸಿಕೊಂಡಿದ್ದರು. ಅಷ್ಟೇ ಅಲ್ಲ ಚೆನ್ನೈನ ಆವಡಿ-ಅಂಬತ್ತೂರ್ ನಡುವಿನ ತಿರುಮುಲ್ಲೈವಯ್ಯಾಲ್ ಎಂಬಲ್ಲಿ ರಾಘವೇಂದ್ರ ಸ್ವಾಮಿ ಬೃಂದಾವನ ಎಂಬ ದೇವಸ್ಥಾನವನ್ನೂ ರಾಘವ್ ಕಟ್ಟಿಸಿದ್ದಾರೆ!

ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಸೇವೆ:

ತನ್ನ ಬಾಲ್ಯದ ದಿನಗಳ ಕಷ್ಟ, ಅನುಭವಿಸಿದ ನೋವುಗಳನ್ನು ಮರೆಯದ ಲಾರೆನ್ಸ್ ಸಿನಿಮಾದಲ್ಲಿ ಸ್ಟಾರ್ ನಟ ಆದ ನಂತರವೂ ಕೂಡಾ ಸಹಾಯಹಸ್ತ ಚಾಚುವುದನ್ನು ಮರೆಯಲಿಲ್ಲ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ನಿಧನದ ನಂತರ “ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್” ಅನ್ನು ಸ್ಥಾಪಿಸಿದ್ದರು.

ಸಮಾಜದಲ್ಲಿನ ಬಡವರು, ಕಡು ಬಡವರಿಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಲಾರೆನ್ಸ್ ಟ್ರಸ್ಟ್ ನೆರವು ನೀಡುತ್ತಿದೆ. ಅದೇ ರೀತಿ ಈಗಾಗಲೇ ನೂರಾರು ಮಕ್ಕಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಟ್ರಸ್ಟ್ ಆರ್ಥಿಕ ಸಹಾಯ ನೀಡುವ ಮೂಲಕ ಜನಾನುರಾಗಿಯಾಗಿದೆ.

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.