ಕಲಾವಿದರೆಲ್ಲರೂ ಒಂದೇ ಎನ್ನುತ್ತಿದ್ದರು ಅಣ್ಣಾವ್ರು
Team Udayavani, Apr 22, 2021, 12:19 PM IST
ರಾಜ್ಕುಮಾರ್ ಗುಣವೇ ಅಂತಹುದು. ಎಲ್ಲರನ್ನು ಗೌರವದಿಂದ ನಡೆಸಿಕೊಳ್ಳಬೇಕು, ಯಾರ ಮನಸ್ಸನ್ನೂ ನೋಯಿಸಬಾರದು, ಒಳ್ಳೆಯ ವಿಚಾರಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡಬೇಕೆಂಬ ಗುಣ ಹೊಂದಿದ್ದವರು ರಾಜ್. ತಮ್ಮ ಜೊತೆಗಿನ ಸಹ ಕಲಾವಿದರನ್ನು ತುಂಬಾ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತಿದ್ದರು. ತಮ್ಮ ಜೊತೆಗಿನ ಕಲಾವಿದರು ತುಂಬಾ ಚೆನ್ನಾಗಿ ನಟಿಸಿದರೆ ಶಾಟ್ ಮುಗಿದ ಕೂಡಲೇ ಅವರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಹೀಗೆ ರಾಜ್ ತಮ್ಮ ಸಹ ಕಲಾವಿದರನ್ನು ಚೆನ್ನಾಗಿ ನಡೆಸಿಕೊಂಡ ಬಗ್ಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
“ಎರಡು ಕನಸು’ ಚಿತ್ರದಲ್ಲಿನ ಕಲ್ಪನಾ ಅವರ ಅಭಿನಯ ನೋಡಿದ ರಾಜ್ ಅವರು ಮುಕ್ತ ಕಂಠದಿಂದ ಶ್ಲಾಸಿದರಂತೆ. ರಾಜ್ ಅವರ ಹೊಗಳಿಕೆ ಯಿಂದ ಭಾವುಕರಾಗಿ ಅತ್ತೆ ಬಿಟ್ಟರಂತೆ ಕಲ್ಪನಾ. ಇದು ಒಂದು ಸಣ್ಣ ಉದಾಹರಣೆಯಷ್ಟೇ.
ಇದನ್ನೂ ಓದಿ:10ನೇ ತರಗತಿ ಎಕ್ಸಾಂ ಕ್ಯಾನ್ಸಲ್ ಮಾಡಿ: ವಿದ್ಯಾರ್ಥಿಗಳ ಪರ ಪ್ರಿಯಾಮಣಿ ಬ್ಯಾಟಿಂಗ್
ತಮ್ಮ ಜೊತೆ ನಟಿಸುವ ಯಾರೇ ಕಲಾವಿದರಾಗಿದ್ದರೂ ಅವರನ್ನು ಸಮಾನವಾಗಿ ನೋಡಬೇಕೆಂಬ ಮನೋಭಾವವನ್ನು ಹೊಂದಿದ್ದವರು ರಾಜ್. ಜೊತೆಗೆ ಅವರ ಕಾಲದ ನಟರಾದ ವಜ್ರಮುನಿ, ತೂಗುದೀಪ ಶ್ರೀನಿವಾಸ್, ನರ ಸಿಂಹರಾಜು … ಹೀಗೆ ಅನೇಕ ನಟರನ್ನು ತಮ್ಮ ಸಿನಿಮಾಗಳಿಗೆ ಆಯ್ಕೆ ಮಾಡುವಂತೆ ನಿರ್ದೇಶಕರಿಗೆ ಹೇಳುವ ಮೂಲಕ ಎಲ್ಲರನ್ನು ಜೊತೆ ಜೊತೆಗೆ ಕರೆದುಕೊಂಡು ಹೋಗುವ ಮನಸ್ಥಿತಿ ರಾಜ್ ಅವರದ್ದಾಗಿತ್ತು.
ಇದನ್ನೂ ಓದಿ: ರಚಿತಾ ರಾಮ್ ಈಗ ‘ಶಬರಿ’: ರಗಡ್ ಲುಕ್ನಲ್ಲಿ ಡಿಂಪಲ್ ಕ್ವೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್ ಕನಸು: ಇಂದು ತೆರೆಗೆ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್ ಅಂತ್ಯಕ್ರಿಯೆ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!