ರಾಜವೀರನಲ್ಲಿ ಸಂಸ್ಕೃತಿ ಕಥೆ; ಹೊಸಬರ ಚಿತ್ರ
Team Udayavani, Dec 28, 2017, 12:13 PM IST
ಸದ್ದಿಲ್ಲದೇ ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇರುತ್ತದೆ. ಆ ಚಿತ್ರಗಳು ಬಿಡುಗಡೆಯ ಹಂತಕ್ಕೆ ಬಂದಾಗಲಷ್ಟೇ ಹೀಗೊಂದು ಸಿನಿಮಾ ತಯಾರಾಗಿದೆ ಎಂಬುದು ಗೊತ್ತಾಗುತ್ತದೆ. ಅದೇ ರೀತಿ ಈಗ ಹೊಸಬರು ಚಿತ್ರವೊಂದು ಚಿತ್ರೀಕರಣ ಮುಗಿಸಿದೆ. ಅದು “ರಾಜವೀರ’. ಇದು ಕೂಡಾ ಹೊಸಬರ ಸಿನಿಮಾ.
ಈ ಹಿಂದೆ “ಯುಗಪುರುಷ’ ಸಿನಿಮಾ ಮಾಡಿದ್ದ ಅರ್ಜುನ್ ದೇವ್ ಈ ಚಿತ್ರದ ನಾಯಕ. ಸ್ನೇಹಾ ನಾಯರ್ ನಾಯಕಿ. “ಫಸ್ಟ್ ಲವ್’, “ವುಮೆನ್ಸ್ ಡೇ’ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ಸ್ನೇಹಾ ನಾಯರ್ ಈಗ “ರಾಜ ವೀರ’ ತಂಡ ಸೇರಿಕೊಂಡಿದ್ದಾರೆ. ವಿಕ್ರಮ್ ಶೆಟ್ಟಿ ಎನ್ನುವವರು ಈ ಚಿತ್ರದ ನಿರ್ದೇಶಕರು.
ಸತ್ಯನಾರಾಯಣ ಮನ್ನೆ ಈ ಚಿತ್ರದ ನಿರ್ಮಾಪಕರು. ಅಂದಹಾಗೆ, ಇದು ನೈಜ ಘಟನೆಯಾಧಾರಿತ ಚಿತ್ರ. ಮಿಲಿಟರಿಯಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ವಿದೇಶದಲ್ಲಿ ಹುಟ್ಟಿ ಬೆಳೆದು, ಭಾರತೀಯ ಸಂಸ್ಕೃತಿ ಗೊತ್ತಿಲ್ಲದ ವ್ಯಕ್ತಿಯೊಬ್ಬನಿಗೆ ಮಿಲಿಟರಿ ಗೆಳೆಯನೊಬ್ಬನ ಸಿಕ್ಕಿ, ಆತನಿಂದ ದೇಶದ ಸಂಸ್ಕೃತಿ ಬಗ್ಗೆ ತಿಳಿದು ಹೇಗೆ ತನ್ನ ಜೀವನ ಬದಲಿಸಿಕೊಳ್ಳುತ್ತಾನೆ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ.
ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಬಾಕಿ ಇವೆ. ಮನಾಲಿಯಲ್ಲಿ ಹಾಡುಗಳನ್ನು ಚಿತ್ರೀಕರಿಸುವ ಉದ್ದೇಶ ಚಿತ್ರತಂಡಕ್ಕಿದೆ. ಚಿತ್ರದಲ್ಲಿ ಕಿಶೋರ್ ವಸಿಷ್ಠ, ಯಶ್ ಶೆಟ್ಟಿ, ತೇಜು ಪೊನ್ನಪ್ಪ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಗಣೇಶ್ ನಾರಾಯಣ್ ಸಂಗೀತವಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಧನುಶ್ ಛಾಯಾಗ್ರಹಣ, ತ್ರಿಭುವನ್ ನೃತ್ಯ, ಡಿಫರೆಂಟ್ ಡ್ಯಾನಿ ಫೈಟ್ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ