ನನ್ನ ಸಹೋದರನನ್ನೇ ಕಳೆದುಕೊಂಡಷ್ಟು ನೋವಾಗುತ್ತಿದೆ : ಅಪ್ಪು ಬಗ್ಗೆ ರಾಮ್ ಚರಣ್ ಭಾವುಕ ನುಡಿ
Team Udayavani, Nov 3, 2021, 12:19 PM IST
ಬೆಂಗಳೂರು : ಅಪ್ಪು ನಿಧನ ಸುದ್ದಿ ತಿಳಿದು ತೆಲುಗು ಸ್ಟಾರ್ ರಾಮ್ ಚರಣ್ ಬೆಂಗಳೂರಿಗೆ ಆಗಮಿಸಿ ಅಪ್ಪು ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ನನ್ನ ಸಹೋದರನ್ನೇ ಕಳೆದುಕೊಂಡಷ್ಟು ನೋವಾಗುತ್ತಿದೆ. ಇದನ್ನು ಅರಗಿಸಿಕೊಳ್ಳಲು ಸಧ್ಯವಾಗುತ್ತಿಲ್ಲ. ಅರ್ಥವಾಗುತ್ತಿಲ್ಲ, ಏನಾಗುತ್ತಿದೆ ಎಂದು. ಅಪ್ಪು ತುಂಬಾ ಸರಳ ವ್ಯಕ್ತಿತ್ವವವನ್ನು ಹೊಂದಿದ್ದರು ಎಂದು ಪುನೀತ್ ಬಗ್ಗೆ ರಾಮ್ ಚರಣ್ ಭಾವುಕವಾಗಿ ನುಡಿಸರು.
ಮದುವೆ ಸಮಯದಲ್ಲಿ ನಾವಿಬ್ಬರು ಭೇಟಿಯಾಗಿದ್ದೆವು. ಯಾಕೆ ವಿಧಿ ಇಷ್ಟು ಕ್ರೂರಿಯಾದ ಎಂಬುದು ಗೊತ್ತಾಗುತ್ತಿಲ್ಲ ಎಂದರು. ಇನ್ನು ಅಭಿಮಾನಿಗಳಿಗೆ ಸಮಾಧಾನ ಮಾಡಿದ ರಾಮ್ ಚರಣ್ ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದಿದ್ದಾರೆ.