ಅಪ್ಪು ಬಿಟ್ಟುಹೋದ ಜಾಗ ತುಂಬಲು ಸಾಧ್ಯವಿಲ್ಲ: ರಮೇಶ್ ಅರವಿಂದ್
Team Udayavani, Nov 8, 2021, 10:55 AM IST
ಪುನೀತ್ ರಾಜ್ಕುಮಾರ್ ನಿಧನರಾಗುವ ಮುನ್ನ ದಿನ, ಸಂಗೀತ ನಿರ್ದೇಶಕ ಗುರುಕಿರಣ್ ಅವರ ಬರ್ತ್ಡೇ ಪಾರ್ಟಿಯಲ್ಲಿ ಖುಷಿ ಖುಷಿಯಾಗಿ ಭಾಗವಹಿಸಿದ್ದರು. ಆ ಪಾರ್ಟಿಯಲ್ಲಿ ನಟ ರಮೇಶ್ ಅರವಿಂದ್ ಕೂಡಾ ಭಾಗಿಯಾಗಿದ್ದರು. ತಮ್ಮ ಜೊತೆ ಆ ದಿನ ರಾತ್ರಿ ಮಾತನಾಡಿದ ಪುನೀತ್ ಮರುದಿನ ಇಲ್ಲವೆಂದಾಗ ರಮೇಶ್ ಅವರಿಗೆ ನಂಬಲು ಸಾಧ್ಯವಾಗಲೇ ಇಲ್ಲವಂತೆ.
ಈ ಬಗ್ಗೆ ಮಾತನಾಡುವ ರಮೇಶ್, “ಗುರುಕಿರಣ್ ಅವರ ಮನೆಯಲ್ಲಿ ಮುಂಚಿನ ದಿನ ರಾತ್ರಿ ನಾನು, ಅಪ್ಪು ಒಟ್ಟಿಗೆ ಕುಳಿತು ಊಟ ಮಾಡಿದ್ದೆವು. ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದರು. ಹಾಗೆ ಮಾತನಾಡುತ್ತಾ, ಬೆಳಕು ಹೋದ ಮೇಲೆ ರಾತ್ರಿ ಬರುತ್ತದೆ ಎಂದರು. ಆಗ ಅಲ್ಲೇ ಇದ್ದ ಅನಿರುದ್ಧ, ತಮಾಷೆಯಾಗಿ, “ಇದೇ ಅಲ್ವಾ ವೈರಾಗ್ಯ’ ಎಂದಿದ್ದರು. ಅಂದು ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ ಅಪ್ಪು ಮರುದಿನ ತಮ್ಮ ನೇತ್ರದಾನ ಮಾಡಿದ್ದಾರೆಂದರೆ ಹೇಗೆ ನಂಬಬೇಕು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ:ಇಂದು ಅಪ್ಪು ಪುಣ್ಯ ಸ್ಮರಣೆ : ಅಮಿತಾಬ್ ಬಚ್ಚನ್, ರಜನಿಕಾಂತ್ ಭಾಗಿಯಾಗುವ ಸಾಧ್ಯತೆ
ಪುನೀತ್ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುವ ರಮೇಶ್, “ಒಂದ್ ಕಡೆ ಅವರ ಫೈಟ್, ಅವರ ಫ್ಯಾಮಿಲಿ ಸೆಂಟಿಮೆಂಟ್, ಒಂದ್ ಕಡೆ ಅವರ ಮನೆತನ, ಮತ್ತೂಂದ್ ಕಡೆ ಅವರ ವಿನಯ, ಸರಳತೆ… ಎಲ್ಲಾ ಸೇರಿ ಅಪ್ಪು ಆದ್ರು. ನಾಳೆ ಇನ್ನೊಬ್ಬ ಫೈಟರ್, ಡ್ಯಾನ್ಸರ್ ಬರಬಹುದು, ನಾಳೆ ಮತ್ತೂಬ್ಬ ಸ್ಟಾರ್ ಬರಬಹುದು… ಆದರೆ, ಎಲ್ಲವೂ ಒಂದೇ ವ್ಯಕ್ತಿಯಲ್ಲಿ ಸಿಗಲ್ಲ. ಅಪ್ಪು ಬಿಟ್ಟು ಹೋದ ಜಾಗವನ್ನು ತುಂಬೋದು ಬಹಳ ಕಷ್ಟವಿದೆ. ಆ ಶೂನ್ಯ ಹಾಗೇ ಇರುತ್ತದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ