ಐಟಿ ದಾಳಿ ಬಗ್ಗೆ ರಿಯಲ್ ಸ್ಟಾರ್ ಟ್ವೀಟ್! ಉಪ್ಪಿ ಅಭಿಪ್ರಾಯ ಏನು?
Team Udayavani, Aug 4, 2017, 2:59 PM IST
ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಅವರು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿರಿಸಿ ನಡೆದಿರುವ ಐಟಿ ದಾಳಿಯ ವೇಳೆಯಲ್ಲಿ ಮಾಡಿರುವ ಟ್ವೀಟ್ಗಳು ಭಾರೀ ಸುದ್ದಿಯಾಗಿವೆ.
ಯಾವುದೇ ಹೆಸರನ್ನು ಉಲ್ಲೇಖ ಮಾಡದೇ ಉಪೇಂದ್ರ ಅವರು ಟ್ವೀಟ್ಗಳಲ್ಲಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಟ್ವೀಟ್ಗಳಲ್ಲೇನಿದೆ?
‘ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದನ್ನು ವಿಡಿಯೋ ಚಿತ್ರೀಕರಣ ಏಕೆ ಮಾಡಬಾರದು? ಜನರು ಸತ್ಯ ತಿಳಿಯುವಂತಾಗಬೇಕು’.
ಇನ್ನೊಂದು ಟ್ವೀಟ್ನಲ್ಲಿ ‘ರಾಜಕಾರಣ, ರಾಜಕೀಯ, ರಾಜನೀತಿ ಬೇಡ ಎನ್ನಿ . ನಮಗೆ ಬೇಕಾಗಿರುವು ಪ್ರಜಾಕಾರಣ, ಪ್ರಜಾಕೀಯ ಮತ್ತು ಪ್ರಜಾನೀತಿ’ ಎಂದು ಬರೆದಿದ್ದಾರೆ.
ಮೂರನೇ ಟ್ವೀಟ್ನಲ್ಲಿ ‘ರಾಜಕೀಯಕ್ಕೆ ಇಲ್ಲ ಎನ್ನಿ, ಪ್ರಜಾಕೀಯ ಬೇಕು.ಪ್ರಜಾಪ್ರಭುತ್ವದ ಕೀಲಿ ಕೈ ಪ್ರಜೆಯ ಬಳಿ ಇರಬೇಕೇ ಹೊರತು ರಾಜನ ಕೈಯಲ್ಲಿ ಇರಬಾರದು’ ಎಂದು ಬರೆದಿದ್ದಾರೆ.