ರಾಬರ್ಟ್ ಟ್ರೇಲರ್ ಗೆ ಮಾಸ್ ಫಿದಾ: ಮತ್ತಷ್ಟು ಹೆಚ್ಚಾಯ್ತು ದರ್ಶನ್ ಚಿತ್ರದ ನಿರೀಕ್ಷೆ !
Team Udayavani, Feb 17, 2021, 8:46 AM IST
ಬೆಂಗಳೂರು: ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಖುಷಿಯ ಜೊತೆಗೆ ಅವರ ಕುತೂಹಲ ಕೂಡಾ ಹೆಚ್ಚಾಗಿದೆ. ಅದಕ್ಕೆ ಕಾರಣ “ರಾಬರ್ಟ್’. ಹೌದು, ದರ್ಶನ್ ನಾಯಕರಾಗಿರುವ “ರಾಬರ್ಟ್’ ಚಿತ್ರದ ಟ್ರೇಲರ್.
ಮಂಗಳವಾರ ಬಿಡುಗಡೆಯಾಗಿರುವ “ರಾಬರ್ಟ್’ ಚಿತ್ರದ ಟ್ರೇಲರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಪಕ್ಕಾ ಮಾಸ್ ಎನಿಸಿಕೊಂಡಿರುವ ಈ ಟ್ರೇಲರ್ನಲ್ಲಿರುವ ಡೈಲಾಗ್ಗಳು ಸಿನಿಮಾ ಬಗೆಗಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಸಖತ್ ಅದ್ಧೂರಿಯಾಗಿರುವ ಚಿತ್ರದ ಟ್ರೇಲರ್ನಲ್ಲಿ ಸಾಕಷ್ಟು ಪಾತ್ರಗಳ ಸಣ್ಣ ಪರಿಚಯ ಮಾಡಲಾಗಿದೆ.
ದರ್ಶನ್ ಜೊತೆಗೆ ಜಗಪತಿ ಬಾಬು, ರವಿ ಕಿಶನ್, ಅವಿನಾಶ್, ನಾಯಕಿ ಆಶಾ ಭಟ್, ವಿನೋದ್ ಪ್ರಭಾಕರ್… ಹೀಗೆ ಚಿತ್ರದ ಒಂದಷ್ಟು ಪಾತ್ರಗಳನ್ನು ಪರಿಚಯಿಸಿದ್ದಾರೆ. ಈ ಮೂಲಕ ಚಿತ್ರದಲ್ಲಿ ಅದ್ಧೂರಿ ತಾರಾಗಣವಿರೋದು ಎದ್ದು ಕಾಣುತ್ತಿದೆ. “ಒಬ್ಬರ ಲೈಫ್ನಲ್ಲಿ ನಾವು ಹೀರೋ ಆಗಬೇಕು ಅಂದರೆ, ಇನ್ನೊಬ್ಬರ ಲೈಫ್ ನಲ್ಲಿ ನಾವು ವಿಲನ್ ಆಗಲೇಬೇಕು’, “ನಾವು ನೋಡೋಕ್ ಮಾತ್ರ ಕ್ಲಾಸು.. ವಾರ್ಗೆ ಇಳಿದ್ರೆ ಫುಲ್ ಮಾಸ್’,”ಏ ತುಕಾಲಿ, ನೀನು ಮಾಸ್ ಆದ್ರೆ ನಾನು ಆ ಮಾಸ್….’ ಬಾಸ್ ಎಂಬರ್ಥ ಡೈಲಾಗ್ ಜೊತೆಗೆ “ಈ ಕೈಗೆ ಶಬರಿ ಮುಂದೆ ಸೋಲೋದೂ ಗೊತ್ತು, ರಾವಣನ ಮುಂದೆ ಗೆಲ್ಲೋದೂ ಗೊತ್ತು’ ಎಂಬ ಡೈಲಾಗ್ಗಳು ಟ್ರೇಲರ್ನ ಹೈಲೈಟ್ಗಳಲ್ಲೊಂದಾಗಿದೆ.
ಇದನ್ನೂ ಓದಿ: ಮಾತಿಗಿಂತ ಮೌನವೇ ಲೇಸು. ಆಕಸ್ಮಿಕ ಧನಾನುಕೂಲ: ಹೇಗಿದೆ ನಿಮ್ಮ ಇಂದಿನ ಗ್ರಹಬಲ ?
“ರಾಬರ್ಟ್’ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿದ್ದು, ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿದ್ದಾರೆ. ಚಿತ್ರ ಮಾರ್ಚ್ 11 ರಂದು ತೆರೆಗೆ ಬರಲಿದೆ. ಇನ್ನು ದರ್ಶನ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು. ಸಿದ್ದಗಂಗಾ ಮಠಕ್ಕೆ ಅಕ್ಕಿ, ದಾಸೋಹಕ್ಕೆ ಆರ್ಥಿಕ ಸಹಾಯ, ಅನಾಥಾಶ್ರಮಕ್ಕೆ ಅನ್ನದಾನ, ಮಕ್ಕಳಿಗೆ ನೋಟ್ ಬುಕ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.
ಇದನ್ನೂ ಓದಿ: ಸತತ 8ನೇ ಬಾರಿಗೆ ಏರಿಕೆಯಾದ ತೈಲ ದರ: ಮೇಘಾಲಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 5ರೂ. ಇಳಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್