ತೆರೆಗೆ ಬಂತು ಕ್ರೀಡಾ ಸ್ಫೂರ್ತಿಯ ‘ಚಾಂಪಿಯನ್’
Team Udayavani, Oct 14, 2022, 10:41 AM IST
ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆಂದು ತಂಡವೊಂದು ರೆಡಿಯಾಗಿದೆ. ಕ್ರೀಡೆಯನ್ನು ಆಧಾರವಾಗಿಟ್ಟುಕೊಂಡು ನೂತನ ಪ್ರಯತ್ನದೊಂದಿಗೆ “ಚಾಂಪಿಯನ್’ ಎಂಬ ಚಿತ್ರ ಇಂದು ತೆರೆಗೆ ಬರುತ್ತಿದೆ. ಶಿವಾನಂದ ಎಸ್ ನೀಲಣ್ಣನವರ್ ನಿರ್ಮಿಸಿರುವ ಈ ಚಿತ್ರದಲ್ಲಿ ಸಚಿನ್ ಧನ್ಪಾಲ್ ಹೀರೋ ಆಗಿ ಎಂಟ್ರಿಕೊಡುತ್ತಿದ್ದಾರೆ.
ಅಂದಹಾಗೆ, ಅಪರೂಪದ ಗೆಳೆತನಕ್ಕೆ ಈ “ಚಾಂಪಿಯನ್’ ಚಿತ್ರ ಸಾಕ್ಷಿಯಾಗಿದೆ. ಚಿತ್ರ ನಿರ್ಮಾಪಕ ಶಿವಾನಂದ ಎಸ್. ನೀಲಣ್ಣನವರ್ ಅವರು ಅಂದು ತಮ್ಮ ಪ್ರಾಣ ಸ್ನೇಹಿತನ ಬಳಿ “ನಾನು ಹಣ ಸಂಪಾದಿಸಿದ ಮೇಲೆ ನಿನಗೋಸ್ಕರ ಒಂದು ಚಿತ್ರ ನಿರ್ಮಿಸುವೆ’ ಎಂದಿದ್ದರು. ಆ ಒಂದು ಭಾಷೆ ಇಂದು ಈಡೇರುತ್ತಿದ್ದು ಸಚಿನ್ ತಮ್ಮ ಗೆಳೆಯನ ನಿರ್ಮಾಣದಲ್ಲಿ ಚೊಚ್ಚಲ ಚಿತ್ರದ ಮೂಲಕ ಖಡಕ್ ಹೀರೋ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಚಿತ್ರವನ್ನು “ಸ್ನೇಹಾನಾ ಪ್ರೀತಿನಾ’, “ಅರ್ಜುನ್’ ಖ್ಯಾತಿಯ ನಿರ್ದೇಶಕ ಶಾಹುರಾಜ್ ಶಿಂಧೆ ನಿರ್ದೇಶಿಸಿದ್ದು, ಅವರ ನಿಧನದ ನಂತರ ಸ್ನೇಹಿತರ ಸಾಥ್ನೊಂದಿಗೆ ಚಿತ್ರತಂಡ ಚಿತ್ರವನ್ನು ಮುಂದುವರೆಸಿದೆ.
“ಚಾಂಪಿಯನ್’ ಕ್ರೀಡಾ ಕಥೆಯುಳ್ಳ ಚಿತ್ರವಾಗಿದ್ದು, ಓರ್ವ ಹಳ್ಳಿಯುವಕ ಅಂತಾರಾಷ್ಟ್ರೀಯ ಕ್ರೀಡಾ ಪಟುವಾಗುವ ಕಠಿಣ ಹಾದಿಯನ್ನು ಚಿತ್ರಿಸಲಾಗಿದೆ. ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶವಿದ್ದು, ಯುವಕರಿಗೆ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನನ್ನಾದರು ಸಾಧಿಸಲು ಇದು ಸ್ಫೂರ್ತಿಯಾಗಲಿದೆ ಎಂಬುದು ಚಿತ್ರತಂಡದ ಮಾತು. “ಚಾಂಪಿಯನ್’ ಒಂದು ಕಂಪ್ಲೀಟ್ ಎಂಟರ್ಟೈನ್ಮೆಂಟ್ ಚಿತ್ರವಾಗಿದೆ. ಚಿತ್ರದಲ್ಲಿ ರೊಮ್ಯಾನ್ಸ್, ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಭರಪೂರ ಕಾಮಿಡಿ ದೃಶ್ಯಗಳು ಇದ್ದು, ಜನಕ್ಕೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ ಎಂಬುದು ಚಿತ್ರತಂಡದ ವಿಶ್ವಾಸ.
ಚಿತ್ರದಲ್ಲಿ ಮೂಡಿ ಬಂದಿರುವ 5 ಹಾಡುಗಳಿಗೆ ಬಿ.ಅಜನೀಶ್ ಲೋಕ್ನಾಥ್ ಸಂಗೀತ ನೀಡಿದ್ದು, ಜಯರಾಮ್ ಧನು ಮುರಳಿ, ಇಮ್ರಾನ್ ಮಾಸ್ಟರ್ ಹೆಜ್ಜೆ ಹಾಕಿಸಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರು , ಶಿವಮೊಗ್ಗ , ತೀರ್ಥಹಳ್ಳಿ ಹಾಗೂ ಒಂದು ಹಾಡಿನ ಚಿತ್ರೀಕರಣ ದುಬೈನಲ್ಲಿ ನಡೆದಿದೆ. ಚಿತ್ರದ ಸ್ಪೆಷಲ್ ಸಾಂಗ್ ಒಂದರಲ್ಲಿ ಬಾಲಿವುಡ್ ಬೆಡಗಿ ಸನ್ನಿಲಿಯೋನ್ ಸಖತ್ ಸ್ಟೆಪ್ ಕೂಡಾ ಹಾಕಿದ್ದಾರೆ.
ನಾಯಕನಾಗಿ ಸಚಿನ್ ಧನ್ಪಾಲ್, ನಾಯಕಿ ಅದಿತಿ ಪ್ರಭುದೇವಾ ಅಭಿನಯಿಸಿದ್ದು, ದೇವರಾಜ್, ರಂಗಾಯಣ ರಘು, ಚಿಕ್ಕಣ್ಣ, ಗಿರೀಶ್, ಆದಿ ಲೊಕೇಶ್, ಶೋಭ್ರಾಜ್, ಅವಿನಾಶ್, ಪ್ರದೀಪ್ ರಾವತ್ ಎಂಬ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
MUST WATCH
ಹೊಸ ಸೇರ್ಪಡೆ
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ