ನನ್ನ ಪಾತ್ರದ ಬಗ್ಗೆ ಸಲ್ಮಾನ್‌ಗಿತ್ತು ವಿಶೇಷ ಕಾಳಜಿ

ದಬಾಂಗ್‌-3 ಪಾತ್ರದ ಬಗ್ಗೆ ಸುದೀಪ್‌ ಮಾತು

Team Udayavani, Dec 14, 2019, 7:03 AM IST

sudeep-(2)

ಸಲ್ಮಾನ್‌ ಖಾನ್‌ ನಾಯಕರಾಗಿರುವ “ದಬಾಂಗ್‌-3′ ಚಿತ್ರದಲ್ಲಿ ಸುದೀಪ್‌ ಪ್ರಮುಖ ಪಾತ್ರ ಮಾಡಿರೋದು ಗೊತ್ತೇ ಇದೆ. ಚಿತ್ರದಲ್ಲಿ ಬಲ್ಲಿ ಸಿಂಗ್‌ ಎಂಬ ಪಾತ್ರದಲ್ಲಿ ವಿಲನ್‌ ಆಗಿ ಅಬ್ಬರಿಸಿದ್ದಾರೆ. ಸಖತ್‌ ಸ್ಟೈಲಿಶ್‌ ಆಗಿ, ಹೀರೋಗಿಂತ ಹೆಚ್ಚು ಡೈಲಾಗ್‌ ಇರುವ ಅಬ್ಬರಿಸುವ ಪಾತ್ರವದು. ಸುದೀಪ್‌ ಅವರ ಈ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಿ, ತೂಕ ಬರುವಂತೆ ಮಾಡಿದ್ದು ಸ್ವತಃ ಸಲ್ಮಾನ್‌ ಖಾನ್‌. ಹೌದು, ಈ ಮಾತನ್ನು ಸುದೀಪ್‌ ಖುಷಿಯಿಂದ ಹೇಳುತ್ತಾರೆ.

ತನ್ನೆದುರು ನಿಂತು ನಟಿಸುವ ಕಲಾವಿದರ ತನಗಿಂತ ಚೆನ್ನಾಗಿ ನಟಿಸಿದರೆ ಅಥವಾ ಅವರ ಪಾತ್ರದ ತೂಕ ಹೆಚ್ಚಿದರೆ ಅದೆಷ್ಟೋ ಹೀರೋಗಳು ಕಸಿವಿಸಿಗೊಳ್ಳುತ್ತಾರೆ. ಆದರೆ, ಸಲ್ಮಾನ್‌ ಖಾನ್‌ ಮಾತ್ರ ಅದರಿಂದ ಮುಕ್ತ ಮುಕ್ತ. ಈ ಬಗ್ಗೆ ಮಾತನಾಡುವ ಸುದೀಪ್‌, “ದಬಾಂಗ್‌ ನನಗೆ ಒಳ್ಳೆಯ ಅನುಭವ ಕೊಟ್ಟ ಸಿನಿಮಾ. ಹಾಗಂತ ನಾನು ಈ ಸಿನಿಮಾವನ್ನು ನನ್ನ ಕೆರಿಯರ್‌ಗೊàಸ್ಕರ ಮಾಡಿದ್ದೀನಿ ಅಂದ್ರೆ ತಪ್ಪಾಗುತ್ತೆ.

ಒಂದು ಸಿನಿಮಾವಾಗಿ ಜೊತೆಗೆ ಸಲ್ಮಾನ್‌ ಖಾನ್‌ ಜೊತೆಗೆ ಮಾಡಬೇಕೆಂಬ ಆಸೆಗಾಗಿಯೂ ಒಪ್ಪಿಕೊಂಡೆ. ಎಷ್ಟೋ ಬಾರಿ ಸಲ್ಮಾನ್‌ ಖಾನ್‌ ನನಗಾಗಿ ಬರೆದಿದ್ದಾರೆ, ನನ್ನ ಪಾತ್ರವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಇದು ಸಾಕಾಗ್ತಾ ಇಲ್ಲ. ಇನ್ನೂ ಏನನ್ನೋ ಬೇಕು, ಹೀಗೆ ಬರಬೇಕು, ಇಷ್ಟು ಡೈಲಾಗ್‌ ಇರಬೇಕು ಎಂದು ಮತ್ತಷ್ಟು ತೂಕ ಹೆಚ್ಚಿಸಿದ್ದಾರೆ. ಅವರು ಯಾವತ್ತೂ ಸ್ವಾರ್ಥಿಯಾಗಿ ಯೋಚಿಸೋದಿಲ್ಲ. ಅವರಿಗೆ ಇನ್‌ಸೆಕ್ಯುರ್ಡ್ ಭಾವನೆಯೇ ಇಲ್ಲ.

ಆರಾಮವಾಗಿ ತನ್ನ ಜೊತೆಗಿರುವ ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ’ ಎನ್ನುವುದು ಸುದೀಪ್‌ ಮಾತು.‌ ಸುದೀಪ್‌ ಅವರ ಬಲ್ಲಿ ಸಿಂಗ್‌ ಪಾತ್ರ ತುಂಬಾ ವಿಶೇಷವಾಗಿದೆಯಂತೆ. ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಅವರ ಮಾತು ಕಮ್ಮಿಯಾದರೆ, ಅದಕ್ಕೆ ತದ್ವಿರುದ್ಧವಾದ ಪಾತ್ರ ಸುದೀಪ್‌ ಅವರದು. ಸುದೀಪ್‌ ಅವರ ಮಾತಲ್ಲೇ ಹೇಳಬೇಕಾದರೆ, “ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಚುಲ್‌ಬುಲ್‌ ಪಾಂಡೆಯಾದರೆ ನಾನು ಸಲ್ಮಾನ್‌ ಖಾನ್‌ ಆದೆ’ ಎನ್ನುತ್ತಾರೆ.

“ದಬಾಂಗ್‌-3′ ಚಿತ್ರತಂಡ ಸುದೀಪ್‌ ಅವರನ್ನು ಆರಂಭದಿಂದಲೂ ತುಂಬಾ ಗೌರವಯುತವಾಗಿ ನಡೆಸಿಕೊಂಡಿತಂತೆ. “ನನಗೆ ಆರಂಭದಲ್ಲಿ ವಿಡಿಯೋ ಕಾಲ್‌ ಮೂಲಕ ಸೊಹೈಲ್‌ ಖಾನ್‌ ಈ ಆಫ‌ರ್‌ ಕೊಟ್ಟರು. ಅಲ್ಲೂ ಅವರು ಗೌರವ ನೀಡಿದ್ದನ್ನು ನಾನು ಮರೆಯುವಂತಿಲ್ಲ. “ಪಾತ್ರ ಮಾಡೋಕೆ ಕರ್ಕೊಂಡು ಬನ್ನಿ’ ಎಂದು ಕೇಳಲಿಲ್ಲ. ಬದಲಾಗಿ, “ಅವರು ಈ ಪಾತ್ರ ಮಾಡ್ತಾರಾ ಕೇಳಿ ನೋಡಿ’ ಎಂದರು. ಆಗ ನಮಗೆ ನಾವಿಲ್ಲಿ ಮಾಡಿರೋ ಸಾಧನೆಯ ಬಗ್ಗೆ ಗೊತ್ತಾಗುತ್ತದೆ’ ಎನ್ನುತ್ತಾರೆ.

ತುಂಬಾ ಯೋಚನೆ ಮಾಡಬಾರದು: ಸುದೀಪ್‌ ಅವರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದೇನೆಂದರೆ ಕೆಲವು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮುನ್ನ ತುಂಬಾ ಯೋಚನೆ ಮಾಡಬಾರದೆಂದು. “ಚಿತ್ರರಂಗಕ್ಕೆ ಬಂದು 24 ವರ್ಷ ಆಯ್ತು. 24 ವರ್ಷ ಆದ ಮೇಲೆ ಕೆಲವು ಸಿನಿಮಾ ಒಪ್ಪಿಕೊಳ್ಳುವ ಮುನ್ನ ತುಂಬಾ ಥಿಂಕ್‌ ಮಾಡಬಾರದು, ಯಾಕ್‌ ಮಾಡಬೇಕು, ಇದರಿಂದ ನನಗೇನು ಲಾಭ- ನಷ್ಟ.

ನಮಗಿಂತ ಮುಂಚೆ ಬಂದವರು ಜೊತೆ ಒಂದು ಅವಕಾಶ ಸಿಗುತ್ತಿದೆ ಎಂದರೆ ಹೋಗಿ ಬರಬೇಕು. “ಮಾತಾಡ್‌ ಮಾತಾಡ್‌ ಮಲ್ಲಿಗೆ’ ಮಾಡುವಾಗ ತುಂಬಾ ಯಂಗ್‌. ಅವತ್ತು ಆ ಸಿನಿಮಾವನ್ನು ನಾನು ಮಿಸ್‌ ಮಾಡ್ತಾ ಇದ್ರೆ, ಇವತ್ತು ತುಂಬಾ ಫೀಲ್‌ ಆಗ್ತಾ ಇತ್ತು. ಮುಂದೊಂದು ದಿನ ನಮ್ಮ ಡೈರಿ ನೋಡಿದಾಗ ಇಂತಿಂಥವರ ಜೊತೆ ಮಾಡಿದ್ದೀನಿ ಅಂತ ಬರುತ್ತಲ್ಲ’ ಎನ್ನುವುದು ಸುದೀಪ್‌ ಮಾತು.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.