ಕೊನೆಗೂ ಈಡೇರದ ಕನಸು…ಹೀರೋಗಳು ನಿರಾಕರಿಸಿದ ಪಾತ್ರದ ಮೂಲಕ ಯಶಸ್ಸು ಗಳಿಸಿದ “ಮೂರ್ತಿ”

ಸಿನಿಮಾಗಳಲ್ಲಿ ನಟಿಸಿದ್ದ ಶ್ರೀನಿವಾಸಮೂರ್ತಿ ಅವರ ಬದುಕಿನ ಪಯಣದ ಹಿಂದೆ ಹಲವು ಶ್ರಮವಿದೆ.

ನಾಗೇಂದ್ರ ತ್ರಾಸಿ, Dec 19, 2020, 6:39 PM IST

ಕೊನೆಗೂ ಈಡೇರದ ಕನಸು…ಹೀರೋಗಳು ನಿರಾಕರಿಸಿದ ಪಾತ್ರದ ಮೂಲಕ ಯಶಸ್ಸು ಗಳಿಸಿದ “ಮೂರ್ತಿ”

ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಜಡಲತಿಮ್ಮನಹಳ್ಳಿ ಕೃಷ್ಣಪ್ಪ ಶ್ರೀನಿವಾಸ ಮೂರ್ತಿ ತಮ್ಮ ಸ್ಪಷ್ಟವಾದ, ಗಂಭೀರ ನಿಲುವಿನ ನಟನೆ ಮೂಲಕ ಜನಪ್ರಿಯರಾಗಿದ್ದವರು. ಹೌದು ಇದು ಯಾವ ನಟ ಎಂದು ಹುಬ್ಬೇರಿಸಬೇಕಾಗಿಲ್ಲ. ಇವರು ಬೇರಾರು ಅಲ್ಲ ಶ್ರೀನಿವಾಸ ಮೂರ್ತಿ. ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಲು ಬಂದು ಕೊನೆಗೆ ಪೋಷಕ ನಟರ ಪಾತ್ರದಲ್ಲಿಯೇ ಪ್ರೇಕ್ಷಕರ ಮನಗೆದ್ದವರು ಮೂರ್ತಿ.

ಸುಮಾರು 300ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಶ್ರೀನಿವಾಸಮೂರ್ತಿ ಅವರ ಬದುಕಿನ ಪಯಣದ ಹಿಂದೆ ಹಲವು ಶ್ರಮವಿದೆ. ಸಿನಿಮಾ ನಟನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಮೂರ್ತಿ ಅವರು ಹಲವು ಕಷ್ಟಗಳನ್ನು ಎದುರಿಸಿದ್ದರು. ಆದರೂ ಛಲಬಿಡದೆ ಬೆಳ್ಳಿಪರದೆಗೆ ಪ್ರವೇಶ ಪಡೆದ ಹಿಂದೆ ರೋಚಕ ಕಥಾನಕವಿದೆ.

ಕೋಲಾರ ಜಿಲ್ಲೆಯ(ಈಗ ಚಿಕ್ಕಬಳ್ಳಾಪುರ) ಜಡಲತಿಮ್ಮನಹಳ್ಳಿಯಲ್ಲಿ 1949ರ ಮೇ 15ರಂದು ಜನಿಸಿದ್ದ ಶ್ರೀನಿವಾಸಮೂರ್ತಿ ಅವರು ಚಿಕ್ಕಂದಿನಲ್ಲಿಯೇ ನಾಟಕದಲ್ಲಿ ಅಭಿನಯಿಸಲು ಆರಂಭಿಸಿದ್ದರು 8ನೇ ತರಗತಿಯಲ್ಲಿದ್ದಾಗಲೇ ಚಿತ್ರನಟನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಮೂರ್ತಿ ಅವರು ಮನೆ ಬಿಟ್ಟು ಮದರಾಸು ಸೇರಿಕೊಂಡುಬಿಟ್ಟಿದ್ದರಂತೆ! ಅಲ್ಲಿ ಘಟಾನುಘಟಿ ನಿರ್ದೇಶಕರ ಮನೆ ಬಾಗಿಲು ಬಡಿದಿದ್ದ ಶ್ರೀನಿವಾಸ ಮೂರ್ತಿ ಅವರಿಗೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಅಂತೂ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಶ್ರೀನಿವಾಸ ಮೂರ್ತಿ ಅವರು ಊರಿಗೆ ವಾಪಸ್ ಆಗಿದ್ದರು.

ಒಮ್ಮೆ ಚಿಕ್ಕಬಳ್ಳಾಪುರಕ್ಕೆ ಯೋಗಾನರಸಿಂಹರ ನಾಟಕ ಕಂಪನಿ ಬಿಡಾರ ಬಿಟ್ಟಿತ್ತು. ಈ ಸಂದರ್ಭದಲ್ಲಿ ಒಂದು ದಿನ ಸದಾರಮೆ ನಾಟಕದ ಸಖಾರಾಮನ ಪಾತ್ರಧಾರಿ ಕೈಕೊಟ್ಟಿದ್ದರಿಂದ ಶ್ರೀನಿವಾಸಮೂರ್ತಿ ಅವರು ಆ ಪಾತ್ರ ಮಾಡಬೇಕಾಗಿ ಬಂದಿತ್ತು. ಹೀಗೆ ಹಲವಾರು ನಾಟಕಗಳಲ್ಲಿ ನಟಿಸುತ್ತಿದ್ದ ಮೂರ್ತಿ ಅವರು ಬೆಂಗಳೂರಿಗೆ ಬಂದಿದ್ದರು. ಅಲ್ಲಿ ನವರಂಗ ಬಾರ್, ಕಾಫಿ ಬೋರ್ಡ್ ನಲ್ಲಿ ಕೆಲಸ ಮಾಡುತ್ತ ನಾಟಕದಲ್ಲಿಯೂ ಬಣ್ಣ ಹಚ್ಚುವುದನ್ನು ಮುಂದುವರಿಸಿದ್ದರು.

ಕೈಹಿಡಿದ ಪಾತ್ರ:

ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಡೆದ ರಣಧೀರ ಕಂಠೀರವ ಪಾತ್ರದಲ್ಲಿ ಶ್ರೀನಿವಾಸಮೂರ್ತಿ ಅವರು ನಟಿಸಿದ್ದರು. ಮೂರ್ತಿ ಅವರ ಪಾತ್ರ ಪ್ರೇಕ್ಷಕರ ಮನಗೆದ್ದಿತ್ತು. ಜತೆಗೆ ಇವರ ಬದುಕಿಗೆ ಯೂಟರ್ನ್ ಕೊಟ್ಟಿತ್ತು. ಅದೇನೆಂದರೆ ಶ್ರೀನಿವಾಸ ಮೂರ್ತಿ ಅವರ ರಣಧೀರ ಕಂಠೀರವ ಪಾತ್ರ ವೀಕ್ಷಿಸಿದ್ದ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರು 1977ರಲ್ಲಿ ಹೇಮಾವತಿ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಲು ಅವಕಾಶ ಕಲ್ಪಿಸಿದ್ದರು. ಹೇಮಾವತಿ ಚಿತ್ರ ಅಂತರ್ಜಾತಿ ಪ್ರೇಮ ಕಥಾ ಹಂದರವನ್ನೊಳಗೊಂಡಿದ್ದು, ಮೂರ್ತಿ ಅವರ ನಟನೆಯನ್ನು ಕನ್ನಡ ಚಿತ್ರರಂಗದ ಪ್ರೇಕ್ಷಕ ಬಹುವಾಗಿ ಮೆಚ್ಚಿಕೊಂಡುಬಿಟ್ಟಿದ್ದರು.

ಬಿಟ್ಟ ಪಾತ್ರಗಳ ಮೂಲಕ ಯಶಸ್ಸು ಪಡೆದಿದ್ದ ಶ್ರೀನಿವಾಸ ಮೂರ್ತಿ:

1977ರಲ್ಲಿ ನಿರ್ದೇಶಕ ಸಿದ್ದಲಿಂಗಯ್ಯನವರು “ಹೇಮಾವತಿ” ಸಿನಿಮಾ ನಿರ್ದೇಶಿಸುವ ಮೊದಲು ನಾಯಕ ನಟನ ಪಾತ್ರಕ್ಕೆ ಆಯ್ಕೆ ಮಾಡಿದ್ದು ಲೋಕೇಶ್. ಆದರೆ ಅವರು ಪಾತ್ರವನ್ನು ನಿರಾಕರಿಸಿದ್ದರಿಂದ ಶ್ರೀನಿವಾಸಮೂರ್ತಿಯವರಿಗೆ ಸಿಗುವಂತಾಗಿತ್ತು.

1980ರಲ್ಲಿ ಮತ್ತೊಮ್ಮೆ ಶ್ರೀನಿವಾಸ ಮೂರ್ತಿ ಅವರಿಗೆ ಸಿದ್ದಲಿಂಗಯ್ಯನವರ ನಿರ್ದೇಶನದ ಬಿಳಿಗಿರಿಯ ಬನದಲ್ಲಿ ಚಿತ್ರದಲ್ಲಿ ನಟಿಸುವ ಅವಕಾಶ ಮಾಡಿಕೊಟ್ಟರು. ಅದು ಕೂಡಾ ರಾಜೇಶ್, ಶ್ರೀನಾಥ್ ಅವರು ತಿರಸ್ಕರಿಸಿದ್ದ ಪಾತ್ರವಾಗಿತ್ತು! ಬಾಳಿನ ಗುರಿ ಸಿನಿಮಾದ ಪಾತ್ರ ಬೇರೆಯವರು ನಿರಾಕರಿಸಿದ ನಂತರ ಶ್ರೀನಿವಾಸ ಮೂರ್ತಿಯವರಿಗೆ ನಟಿಸಲು ಅವಕಾಶ ಸಿಗುವಂತಾಗಿತ್ತು. ಹೀಗೆ ಹೀರೋ ಆಗಿ ಹದಿನೈದು ಚಿತ್ರಗಳಲ್ಲಿ ನಟಿಸಿದರೂ ಕೂಡಾ ಮೂರ್ತಿಯವರ ಅದೃಷ್ಟ ಕೈಹಿಡಿಯಲಿಲ್ಲ. ಕೊನೆಗೆ ಅವರ ಪೋಷಕ ಪಾತ್ರದಲ್ಲಿಯೇ ಮುಂದುವರಿಯುಂತಾಯ್ತು.

ಅಂತೂ ಡಾ.ರಾಜ್ ಕುಮಾರ್ ಜತೆಗೂಡಿ ನಟಿಸಿದ ಚಿತ್ರಗಳು ಶ್ರೀನಿವಾಸಮೂರ್ತಿಯರಿಗೆ ಹೆಚ್ಚು ಯಶಸ್ಸು ಸಿಗಲಾರಂಭಿಸಿತ್ತು. ಆದರೂ ತನ್ನ ಬದುಕಿನಲ್ಲಿ ತಾನು ಇಷ್ಟ ಪಟ್ಟ ಪಾತ್ರಗಳಿಗೆ ಪ್ರಶಸ್ತಿ ಬರಲಿಲ್ಲ ಎಂಬ ಕೊರಗಿನ ಜತೆಗೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕೆಂಬ ಕನಸು ನನಸಾಗಲೇ ಇಲ್ಲ ಎಂಬುದು ಶ್ರೀನಿವಾಸಮೂರ್ತಿ ಅವರ ಮನದಾಳದ ಮಾತು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.