ಸ್ಯಾಂಡಲ್ ವುಡ್; ಕಳೆದ 2 ತಿಂಗಳಲ್ಲಿ 50 ಕೋಟಿ ನಷ್ಟ!


Team Udayavani, Nov 27, 2017, 1:00 PM IST

Film.jpg

ಕನ್ನಡ ಚಿತ್ರರಂಗದ ಪಾಲಿಗೆ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳು ಅತ್ಯಂತ ದುರದೃಷ್ಟಕರ ತಿಂಗಳಾಗಿ ಪರಿಣಮಿಸಿವೆ. ಅಕ್ಟೋಬರ್‌ ತಿಂಗಳಲ್ಲಿ 18 ಮತ್ತು ನವೆಂಬರ್‌ ತಿಂಗಳಲ್ಲಿ 23 ಚಿತ್ರಗಳು ಬಿಡುಗಡೆಯಾಗಿವೆ. ಈ 41 ಚಿತ್ರಗಳಲ್ಲಿ ಯಾವೊಂದು ಚಿತ್ರ ಸಹ ಗೆದ್ದಿಲ್ಲ ಎನ್ನುವುದು ಒಂದು ಕಡೆಯಾದರೆ, ಇಷ್ಟು ಚಿತ್ರಗಳಿಂದಾಗಿ ಏನಿಲ್ಲವೆಂದರೂ 50ರಿಂದ 70 ಕೋಟಿಯವರೆಗೂ ಲಾಸ್‌ ಆಗಿದೆ.

ಹೌದು, ಕಳೆದ ಎರಡು ತಿಂಗಳಲ್ಲಿ ಒಟ್ಟು 41 ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಮೊನ್ನೆ ಶುಕ್ರವಾರ ಬಿಡುಗಡೆಯಾದ “ಉಪ್ಪು ಹುಳಿ ಖಾರ’, “ಅತಿರಥ’, “ಮೋಂಬತ್ತಿ’ ಮತ್ತು “ಹನಿಹನಿ ಇಬ್ಬನಿ’ ಚಿತ್ರಗಳ ಕುರಿತಾಗಿ ಈಗಲೇ ತೀರ್ಪು ನೀಡುವುದು ಕಷ್ಟ. ಏಕೆಂದರೆ, ಚಿತ್ರ ಬಿಡುಗಡೆಯಾಗಿ ಕೇವಲ ಮೂರು ದಿನಗಳಾಗಿದ್ದು, ಅದರ ಗೆಲುವು-ಸೋಲು, ಲಾ¸‌-ನಷ್ಟದ ಕುರಿತು ಈಗಲೇ ಹೇಳುವುದು ಕಷ್ಟ. ಅದಕ್ಕೆ ಇನ್ನೊಂದಿಷ್ಟು ಸಮಯ ಬೇಕು. ಅದನ್ನು ಹೊರತುಪಡಿಸಿದರೂ, 39 ಚಿತ್ರಗಳು ಸಿಗುತ್ತವೆ.

ಈ ಪೈಕಿ ಎಲ್ಲವೂ ಲೋ ಬಜೆಟ್‌ ಚಿತ್ರಗಳಷ್ಟೇ ದೊಡ್ಡ ಬಜೆಟ್‌ನ ಚಿತ್ರಗಳೂ ಇವೆ. ಉಪೇಂದ್ರ ಅಭಿನಯದ “ಉಪೇಂದ್ರ ಮತ್ತೆ ಬಾ’, ಸತೀಶ್‌ ನೀನಾಸಂ ಅಭಿನಯದ “ಟೈಗರ್‌ ಗಲ್ಲಿ’, ಶರಣ್‌ ಅಭಿನಯದ “ಸತ್ಯ ಹರಿಶ್ಚಂದ್ರ’ ಚಿತ್ರಗಳನ್ನು ಹೆಸರಿಸಬಹುದು. ಇವೆಲ್ಲಾ ಕೆಲವು ಕೋಟಿ ಬಜೆಟ್‌ನ ಚಿತ್ರಗಳು. ಆದರೆ, ಬಿಡುಗಡೆಯಾದ ನಂತರ ನಿರ್ಮಾಪಕರಿಗೆ ಎಷ್ಟು ಹಣ ವಾಪಸ್ಸಾಯಿತು ಎಂದರೆ, ಉತ್ತರಿಸುವುದು ಕಷ್ಟ. ಈ ಪೈಕಿ “ಸತ್ಯ ಹರಿಶ್ಚಂದ್ರ’ ಮತ್ತು “ಟೈಗರ್‌ ಗಲ್ಲಿ’ ಚಿತ್ರಗಳು ಎರಡೇ ವಾರಕ್ಕೆ ಮುಖ್ಯ ಚಿತ್ರಮಂದಿರಗಳೂ ಸೇರಿದಂತೆ ಬಹುತೇಕ ಚಿತ್ರಮಂದಿರಗಳಿಂದ ನಾಪತ್ತೆಯಾಗಿದ್ದವು.

ಈಗ “ಉಪೇಂದ್ರ ಮತ್ತೆ ಬಾ’ ಸಹ ಅದೇ ಸುಳಿವು ನೀಡುತ್ತಿದೆ. ನವೆಂಬರ್‌ 17ರಂದಷ್ಟೇ ಬಿಡುಗಡೆಯಾದ ಚಿತ್ರವು ಈಗ ಎರಡನೆಯ ವಾರಕ್ಕೆ ಕಾಲಿಟ್ಟಿದೆ. ಈಗ ಎರಡನೆಯ ವಾರ ಮುಗಿಸಿ, ಮೂರನೆಯ ವಾರಕ್ಕೆ ಕಾಲಿಡುವ ಹೊತ್ತಿಗೆ ಮುಖ್ಯ ಚಿತ್ರಮಂದಿರವೇ ಮಿಸ್‌ ಆಗುವ ಸಾಧ್ಯತೆ ಇದೆ. ಏಕೆಂದರೆ, “ಉಪೇಂದ್ರ ಮತ್ತೆ ಬಾ’ ಪ್ರದರ್ಶನವಾಗುತ್ತಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ಈ ವಾರ “ಗೌಡ್ರು ಹೋಟೆಲ್‌’ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಮಿಕ್ಕಂತೆ ಇನ್ನೆಲ್ಲಾ ಹೊಸಬರ ಅಥವಾ ಕಡಿಮೆ ಬಜೆಟ್‌ನ ಚಿತ್ರಗಳೇ. ಈ ಚಿತ್ರಗಳನ್ನು ಅತ್ತ ಜನರೂ ನೋಡಲಿಲ್ಲ, ಇತ್ತ ಚಾನಲ್‌ ಅಥವಾ ಇನ್ನಾವುದೋ ಮೂಲದಿಂದ ವ್ಯಾಪಾರವೂ ಆಗಿಲ್ಲ. 

ಹಾಗಾಗಿ ನಿರ್ಮಾಪಕರಿಗೆ ದುಡ್ಡು ಹಾಕಿದ್ದಷ್ಟೇ ಬಂತು. ಲಾಭ ಬಿಡಿ, ಹಾಕಿದ ದುಡ್ಡು ಸಹ ಸರಿಯಾಗಿ ವಾಪಸ್ಸಾಗಲಿಲ್ಲ.
ಅಲ್ಲಿಗೆ ಈ ಎರಡೇ ತಿಂಗಳುಗಳಲ್ಲಿ ಏನಿಲ್ಲವೆಂದರೂ 50ರಿಂದ 70 ಕೋಟಿಯವರೆಗೂ ನಷ್ಟವಾಗಿದೆ. ಹೀಗಿರುವಾಗಲೇ ಈ ವಾರ ಮತ್ತೆ ಆರು ಚಿತ್ರಗಳು ಬಿಡುಗಡೆಯಾಗುತ್ತಿದೆ. ಶಿವರಾಜಕುಮಾರ್‌-ಮುರಳಿ ಅಭಿನಯದ “ಮಫ್ತಿ’, “ಗೌಡ್ರು ಹೋಟೆಲ್‌’, “ನಮ್ಮೂರಲಿ’, “ಮಂತ್ರಂ’, “ಡ್ರೀಮ್‌ ಗರ್ಲ್’ ಮತ್ತು “ಅರ್ಧ ತಿಕ್ಲು ಪುಕ್ಲು’ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂದು ಹೇಳಲಾಗುತ್ತಿದೆ. ಈ ಚಿತ್ರಗಳ ಪೈಕಿ ಎಷ್ಟು ಕೋಟಿ ಗಳಿಸುತ್ತವೋ, ಎಷ್ಟು ಕಳೆದುಕೊಳ್ಳುತ್ತವೋ ನೋಡಬೇಕು.

 ಅಕ್ಟೋಬರ್‌ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳು: ಹುಲಿರಾಯ, ಕಿಡಿ, ವೈರ, ಲಕ್ಷಿ ನಾರಾಯಣರ ಪ್ರಪಂಚವೇ ಬೇರೆ, ಏಪ್ರಿಲ್‌ನ ಹಿಮಬಿಂದು, ಗಾಯತ್ರಿ, ಕರಿಯ 2, ಕಟಕ, ಸಿತಾರ, ಆಡೂ ಆಟ ಆಡೂ, ತಿಕ್ಲ, ದಯವಿಟ್ಟು ಗಮನಿಸಿ, ಸತ್ಯ ಹರಿಶ್ಚಂದ್ರ, ಢಮ್ಕಿ ಢಮಾರ್‌, ಟೈಗರ್‌ ಗಲ್ಲಿ, ಸರ್ವಸ್ವ, ಮೋಜೋ ಮತ್ತು ಬ್ರಾಂಡ್‌.
 
ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳು: ಹಾಲು ತುಪ್ಪ, ಜಾಲಿ ಬಾರು ಮತ್ತು ಪೋಲಿ ಗೆಳೆಯರು, ಮತ್ತೆ ಬಂದ ಕೌರವ, ಜಯಸೂರ್ಯ, ಬಿಕೋ, ಕಾಲೇಜ್‌ ಕುಮಾರ್‌, ನುಗ್ಗೇಕಾಯಿ, ಸೈಕೋ ಶಂಕ್ರ, ರಾಜರು, ಸಂಯುಕ್ತ 2, ಅಸೂಚ¸, ನಂ. 9 ಹಿಲ್ಟನ್‌ ಹೌಸ್‌, ಕಾವೇರಿ ತೀರದ ಚರಿತ್ರೆ, ಕೆಂಪಿರ್ವೆ, ಮಹಾನುಬಾವರು, ನನ್‌ ಮಗಳೇ ಹೀರೋಯಿನ್‌, ಪಾನಿಪುರಿ, ಉಪೇಂದ್ರ ಮತ್ತೆ ಬಾ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.