ಗಿಣಿ ಹೇಳಿದ ಕಥೆಯಲ್ಲಿರೋದು ಜನಸಾಮಾನ್ಯರ ಹೀರೋ!
Team Udayavani, Jan 10, 2019, 12:47 PM IST
ಗಿಣಿ ಹೇಳಿದ ಕಥೆ ಕೇಳೋ ಸಮಯ ಹತ್ತಿರ ಬಂದಿದೆ. ಇನ್ನೇನು ಈ ಚಿತ್ರ ಬಿಡುಗಡೆಯಾಗಲು ಕ್ಷಣಗಣನೆ ಆರಂಭವಾಗುತ್ತಲೇ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳೂ ಜಾಹೀರಾಗುತ್ತಿವೆ. ಅದರ ಪ್ರಕಾರವಾಗಿ ನೋಡ ಹೋದರೆ, ಈ ಸಿನಿಮಾ ಹೀರೋ ಪಾತ್ರವೂ ಕೂಡಾ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.
ಹೀರೋ ಅಂದ ಮೇಲೆ ಬಿಲ್ಡಪ್ಪು ಇರಲೇಬೇಕೆಂಬ ರೂಢಿಯಿದೆ. ನಾಯಕ ನೆಟಿಗೆ ಮುರಿದರೂ ಸೆನ್ಸೇಷನಲ್ ಸೀನು ಕ್ರಿಯೇಟ್ ಮಾಡುವಂಥಾ ಪರಿಪಾಠವೂ ಇದೆ. ಒಟ್ಟಾರೆಯಾಗಿ ಹೀರೋಗಿರಿ ಅನ್ನೋದು ಜನಸಾಮಾನ್ಯರ ಪಾಲಿಗೆ ದೂರದಲ್ಲೆಲ್ಲೋ ಮಿನುಗಿ ಮರೆಯಾಗೋ ಮಾಯಾ ದಂಡದಂಥಾದ್ದು. ಆದರೆ ಈ ಚಿತ್ರದ ಹೀರೋ ಮಾತ್ರ ಅದಕ್ಕೆ ತದ್ವಿರುದ್ಧ.
ಇಲ್ಲಿ ಹೀರೋಗೆ ಇಂಥಾ ಯಾವ ಬಿಲ್ಡಪ್ಪುಗಳೂ ಇಲ್ಲ. ಅದನ್ನು ಕಥೆಯೇ ಆಯಾ ಕಾಲಕ್ಕೆ ಬೇಕಾಗುವಷ್ಟನ್ನು ಕೊಡುತ್ತದೆ. ಇಲ್ಲಿನ ನಾಯಕ ಜನಸಾಮಾನ್ಯರಿಗೆ ಹತ್ತಿರಾಗುವವನು. ಸೀದಾಸಾದಾ ಗುಣಲಕ್ಷಣದ ಈ ಪಾತ್ರಕ್ಕೆ ನಾನಾ ಬಣ್ಣಗಳಿವೆಯಂತೆ. ದೇವ್ ರಂಗಭೂಮಿ ತಮ್ಮ ನಾಟಕ ಸಾಂಗತ್ಯದಿಂದ ಕಲಿತ ನಟನಾ ಕಲೆಯನ್ನೆಲ್ಲ ಧಾರೆ ಎರೆದು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಂದಹಾಗೆ ಕೇವಲ ನಾಯಕನ ಪಾತ್ರ ಮಾತ್ರವಲ್ಲ, ಇಡೀ ಚಿತ್ರದ ಒಂದೊಂದು ಪಾತ್ರಗಳೂ ಕೂಡಾ ಭಿನ್ನವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು